ಆ್ಯಪ್ನಗರ

ಟೆಡ್ಡಿ ಬೇರ್‌ನಿಂದ ಸಂಬಂಧಿ ಮಹಿಳೆಯನ್ನು ಕೊಂದ 15ರ ಬಾಲಕ

15 ವರ್ಷದ ಬಾಲಕ ತನ್ನ ಸಂಬಂಧಿ ಮಹಿಳೆಯನ್ನು ಆಕೆಯ ಮನೆಯಲ್ಲಿ ಟೆಡ್ಡಿ ಬೇರ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ನಗರದ ಅಮಿಂಜಿಕರಾಯ್ ಪ್ರದೇಶದಲ್ಲಿ ನಡೆದಿದೆ. ಅಲ್ಲದೆ, ಜೀವಶಾಸ್ತ್ರ ( ಬಯಾಲಜಿ )ಯ ಪಾಠವೊಂದರಲ್ಲಿ ಕಲಿತಿದ್ದ ಹಾಗೆ, ಆಕೆಯ ಮಣಿಕಟ್ಟು ಪ್ರದೇಶವನ್ನು ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ.

TIMESOFINDIA.COM 6 Aug 2018, 12:27 pm
ಚೆನ್ನೈ: ಹದಿನೈದು ವರ್ಷದ ಬಾಲಕ ತನ್ನ ಸಂಬಂಧಿ ಮಹಿಳೆಯನ್ನು ಆಕೆಯ ಮನೆಯಲ್ಲಿ ಟೆಡ್ಡಿ ಬೇರ್‌ನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಭೀಕರ ಘಟನೆ ನಗರದ ಅಮಿಂಜಿಕರಾಯ್ ಪ್ರದೇಶದಲ್ಲಿ ನಡೆದಿದೆ. ಅಲ್ಲದೆ, ಜೀವಶಾಸ್ತ್ರ ( ಬಯಾಲಜಿ )ಯ ಪಾಠವೊಂದರಲ್ಲಿ ಕಲಿತಿದ್ದ ಹಾಗೆ, ಆಕೆಯ ಮಣಿಕಟ್ಟು ಪ್ರದೇಶವನ್ನು ಕತ್ತರಿಸಿ ಕ್ರೌರ್ಯ ಮೆರೆದಿದ್ದಾನೆ.
Vijaya Karnataka Web tamilselvi


ತನ್ನ ಮಗಳ ಜತೆಗೆ ಹೆಚ್ಚು ಕ್ಲೋಸ್ ಆಗಿದ್ದಕ್ಕೆ ಆತನನ್ನು ನಿಂದಿಸಿದ ಒಂದು ವಾರದ ಬಳಿಕ ತಮಿಳ್‌ಸೆಲ್ವಿ ( 35 )ಯನ್ನು ಅಪ್ರಾಪ್ತ ವಯಸ್ಕ ಆರೋಪಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಲೆಯಾದ ತಮಿಳ್‌ಸೆಲ್ವಿ ಮನೆಯ ಬಳಿಯ ಸಿಸಿ ಕ್ಯಾಮರಾ ದಾಖಲೆಗಳನ್ನು ಆಧಾರಿಸಿ ತನಿಖಾಧಿಕಾರಿಗಳು ಬಾಲಕನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ತಾನು ಮಾಡಿದ ಅಪರಾಧವನ್ನು ಬಾಲಕ ಒಪ್ಪಿಕೊಂಡಿದ್ದು, ಆ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದೆ ಎಂದು ಅಪ್ರಾಪ್ತ ಆರೋಪಿ ಹೇಳಿಕೊಂಡಿದ್ದಾನೆ.

ಕಿರಾಣಿ ವ್ಯಾಪಾರಿ ಶಂಕರ್‌ ಸುಬ್ಬು ಎಂಬುವರ ಜತೆ ತಮಿಳ್ ಸೆಲ್ವಿ ಮದುವೆಯಾಗಿದ್ದರು. ಇನ್ನು, 8 ನೇ ತರಗತಿಯಲ್ಲಿ ಓದುತ್ತಿರುವ ಮಗಳು ಹಾಗೂ 4 ವರ್ಷದ ಮಗನೊಂದಿಗೆ ಕುಟುಂಬ ಅಮಿಂಜಿಕರಾಯ್‌ನ ವೆಲ್ಲಲಾರ್‌ ರಸ್ತೆಯಲ್ಲಿ ವಾಸ ಮಾಡುತ್ತಿದ್ದರು. ಆದರೆ, ಶುಕ್ರವಾರ ವ್ಯಾಪಾರಿ ಶಂಕರ್ ಮನೆಗೆ ಮರಳಿದಾಗ ರಕ್ತದ ಮಡುವಿನಲ್ಲಿ ನೆಲದ ಮೇಲೆ ಬಿದ್ದಿದ್ದ ತಮಿಳ್‌ ಸೆಲ್ವಿಯನ್ನು ನೋಡಿದರು. ತಕ್ಷಣ, ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಆ ವೇಳೆಗೆ ಮಹಿಳೆ ಮೃತಪಟ್ಟಿದ್ದರು ಎಂದು ವೈದ್ಯರು ಘೋಷಿಸಿದ್ದರು. ನಂತರ, ಅಮಿಂಜಿಕರಾಯ್ ಪೊಲೀಸ್ ಠಾಣೆಗೆ ಶಂಕರ್ ದೂರು ನೀಡಿದರು ಎಂದು ಘಟನೆಯ ಬಗ್ಗೆ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಳಿಕ, ತನಿಖಾಧಿಕಾರಿಗಳು ಪ್ರದೇಶದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಾಲಕನೊಬ್ಬ ತಮಿಳ್‌ ಸೆಲ್ವಿ ಕೊಲೆ ನಡೆದ ದಿನ ಬೆಳಗ್ಗೆ 11 ಗಂಟೆಗೆ ಅವರ ಮನೆಗೆ ಹೋಗಿ ಬಳಿಕ 11.25ರ ವೇಳೆಗೆ ಆತ ವಾಪಸ್ ಬರುವ ದೃಶ್ಯಗಳು ರೆಕಾರ್ಡ್‌ ಆಗಿತ್ತು. ಜತೆಗೆ, ಆ ಬಾಲಕ ತಮ್ಮ ಸೋದರಳಿಯ ಎಂದು ಶಂಕರ್ ಗುರುತಿಸಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ನಂತರ, ಮೃತ ಮಹಿಳೆಯ ಅಂತ್ಯಕ್ರಿಯೆಗೆ ಆಗಮಿಸಿದ್ದ ಅಪ್ರಾಪ್ತ ವಯಸ್ಕ ಆರೋಪಿಯನ್ನು ನಾವು ಪ್ರಶ್ನೆ ಮಾಡಿದೆವು. ಆ ವೇಳೆ, ತಾನು ಸುತ್ತಿಗೆ ತರಲು ಅವರ ಮನೆಗೆ ಹೋಗಿದ್ದೆ ಎಂದು ಹೇಳಿಕೊಂಡಿದ್ದ. ನಂತರ, ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡ ಬಾಲಕ, ಶಂಕರ್ ಪುತ್ರಿಯ ಜತೆಗೆ ಹೆಚ್ಚು ಸಲಿಗೆಯಿಂದ ವರ್ತಿಸಿದ್ದಕ್ಕೆ ಅವರ ತಾಯಿ ಅವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾನೆ. ಅಲ್ಲದೆ, ಒಂದು ವಾರದ ಹಿಂದೆ ಹುಟ್ಟುಹಬ್ಬದ ಸಮಾರಂಭಕ್ಕೆ ಅವರ ಮಗಳನ್ನು ಬಾಲಕ ಆಹ್ವಾನಿಸಿದ್ದ. ಆದರೆ, ಬಾಲಕಿ ಪಾರ್ಟಿಗೆ ಬರದ ಕಾರಣವನ್ನು ಕೇಳಿದ್ದಕ್ಕೆ ತಮಿಳ್‌ಸೆಲ್ವಿ ತನಗೆ ಬೈದಿದ್ದರು. ಜತೆಗೆ, ತನ್ನ ಮಗಳಿಂದ ದೂರ ಉಳಿಯಲು ಹೇಳಿದ್ದರೆಂದು ಬಾಲಕ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದರಿಂದ ಆಕ್ರೋಶಗೊಂಡಿದ್ದ ಅಪ್ರಾಪ್ತ ವಯಸ್ಸಿನ ಬಾಲಕ, ಸೇಡು ತೀರಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದ. ಹೀಗಾಗಿ, ಶುಕ್ರವಾರ ತಮಿಳ್‌ ಸಾಯಿ ಮನೆ ಬಾಗಿಲು ತೆರೆದುಕೊಂಡು ಮಲಗಿದ್ದರು. ಆ ವೇಳೆ, ಮನೆ ಒಳಗೆ ಹೋಗಿ ಟೆಡ್ಡಿ ಬೇರ್‌ ಸಹಾಯದಿಂದ ಉಸಿರುಗಟ್ಟಿಸಿ ಕೊಲೆ ಮಾಡಿದೆ. ನಂತರ, ಮಹಿಳೆಯ ಎಡಗೈನ ಮಣಿಕಟ್ಟು ಪ್ರದೇಶವನ್ನು ಚಾಕುವಿನಿಂದ ಕತ್ತರಿಸಿದೆ. ಆಕೆ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಜನ ನಿರ್ಧಾರ ಮಾಡುತ್ತಾರೆ ಎಂದು ನಂಬಿದ್ದೆ ಎಂದು ಸಹ ಅಪ್ರಾಪ್ತ ವಯಸ್ಸಿನ ಆರೋಪಿ ಒಪ್ಪಿಕೊಂಡಿದ್ದಾಗಿ ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ