ಆ್ಯಪ್ನಗರ

ವೈರಸ್ ಭೀತಿಯಲ್ಲೂ ಬಂದೂಕು ಬಿಡದ ನಕ್ಸಲರು: ಗುಂಡಿನ ಕಾಳಗದಲ್ಲಿ 17 ಯೋಧರು ಹುತಾತ್ಮ!

ಇಡೀ ದೇಶ ಕೊರೊನಾ ವೈರಸ್ ಭೀತಿಯಲ್ಲಿ ದಿನ ದೂಡುತ್ತಿದೆ. ಆದರೆ ನಕ್ಸಲೀಯರು ಮಾತ್ರ ದಟ್ಟ ಅರಣ್ಯಗಳಲ್ಲಿ ಪೊಲೀಸರ ವಿರುದ್ಧದ ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ. ಅದರಂತೆ ನಕ್ಸಲರು ಹಾಗೂ ಪೊಲೀಸರ ನಡುವೆ ನಡೆದ ಗುಮಡಿನ ಕಾಳಗದಲ್ಲಿ 17 ಯೋಧರು ಹುತಾತ್ಮರಾದ ಘಟಬನೆ ಛತ್ತೀಸ್‌ಗಡ್‌ದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.

Vijaya Karnataka Web 23 Mar 2020, 5:22 pm
ರಾಯ್‌ಪುರ್(ಮಾ.23): ಛತ್ತೀಸ್‌ಗಡ್‌ದ ಸುಕ್ಮಾ ಜಿಲ್ಲೆಯ ಅರಣ್ಯದಲ್ಲಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ದಾಳಿಯಲ್ಲಿ 17 ಯೋಧರು ಹುತಾತ್ಮರಾಗಿದ್ದಾರೆ.
Vijaya Karnataka Web Naxal
ನಕ್ಸಲರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಕಾಳಗದಲ್ಲಿ 17 ಯೋದರು ಹುತಾತ್ಮರಾದ ಘಟನೆ ಛತ್ತಿಸ್‌ಗಡ್‌ದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.


ಸುಕ್ಮಾ ಜಿಲ್ಲೆಯಲ್ಲಿನ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ, ಜಿಲ್ಲಾ ಮೀಸಲು ಪಡೆ ಹಾಗೂ ವಿಶೇಷ ಕಾರ್ಯಪಡೆಯ 600 ಸಿಬ್ಬಂದಿ ಕಾರ್ಯಾಚರಣೆಯನ್ನು ಕೈಗೊಂಡಿದ್ದರು.

ಛತ್ತೀಸ್‌ಗಢದಲ್ಲಿ ಮತ್ತೆ ನೆತ್ತರು ಹರಿಸಿದ ನಕ್ಸಲರು: ಎಸ್‌ಪಿ ಮುಖಂಡನ ಅಪಹರಣ, ಹತ್ಯೆ

ಈ ವೇಳೆ ಏಕಾಏಕಿ ಯೋಧರ ಮೇಲೆ ದಾಳಿ ಮಾಡಿದ ಸುಮಾರು 250ಕ್ಕೂ ಹೆಚ್ಚು ಮಾವೋವಾದಿ ಉಗ್ರರು, 17 ಯೋಧರನ್ನು ವಶಕ್ಕೆ ಪಡೆದಿದ್ದರು ಎನ್ನಲಾಗಿದೆ.


ಬಳಿಕ ವಶಕ್ಕೆ ಪಡೆದಿದ್ದ 17 ಯೋಧರನ್ನು ಕೊಂದು ಹಾಕಿರುವ ನಕ್ಸಲರು, ದಟ್ಟ ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದಾರೆ. ಇತ್ತ ಕಾಣೆಯಾಗಿದ್ದ ಸಹೋದ್ಯೋಗಿಗಳನ್ನು ಹುಡುಕುತ್ತಾ ಬಂದ ಕೋಬ್ರಾ ಪಡೆಗೆ ಎಲ್ಲಾ 17 ಹುತಾತ್ಮ ಯೋಧರ ಶವ ದೊರೆತಿವೆ.

ನಕ್ಸಲ್‌ ದಾಳಿಗೆ ಐವರು ಪೊಲೀಸರು ಬಲಿ

ಇನ್ನು ಈ ಗುಂಡಿನ ಕಾಳಗದಲ್ಲಿ ಗಾಯಗೊಂಡಿದ್ದ ಭದ್ರತಾ ಸಿಬ್ಬಂದಿಯನ್ನು ವಿಮಾನದ ಮೂಲಕ ರಾಯ್‌ಪುರ್‌ಕ್ಕೆ ಕರೆತಂದು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ