ಆ್ಯಪ್ನಗರ

ಬಾಂಗ್ಲಾದೇಶ ನೌಕಾಪಡೆ ಸ್ಥಾಪನೆಗೆ ನೆರವಾಗಿದ್ದ ಕ್ಯಾ.ಸಮಂತ್‌ ನಿಧನ

ಬಾಂಗ್ಲಾದೇಶ ನೌಕಾಪಡೆಯ ಸ್ಥಾಪನೆಗೆ ಸಹಾಯ ಮಾಡಿದ ಸಮಂತ್‌(89) ಅವರು ಹೃದಯಾಘಾತದಿಂದ ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ ನಿರ್ಮಲಾ ಮತ್ತು ಪುತ್ರಿಯರಾದ ಉಜ್ವಲಾ, ನತಾಶಾ ಮತ್ತು ಮೇಘನಾ ಅವರನ್ನು ಅಗಲಿದ್ದಾರೆ.

Vijaya Karnataka 21 Mar 2019, 5:00 am
ಮುಂಬಯಿ: 1971ರ ಭಾರತ-ಪಾಕ್‌ ಯುದ್ಧದ ಹೀರೋ, ಭಾರತೀಯ ವಾಯುಪಡೆಯ ನಿವೃತ್ತ ಕ್ಯಾಪ್ಟನ್‌ ಎಂ.ಎನ್‌.ಸಮಂತ್‌ ಬುಧವಾರ ವಿಧಿವಶರಾಗಿದ್ದಾರೆ.
Vijaya Karnataka Web samanth


ಬಾಂಗ್ಲಾದೇಶ ನೌಕಾಪಡೆಯ ಸ್ಥಾಪನೆಗೆ ಸಹಾಯ ಮಾಡಿದ ಸಮಂತ್‌(89) ಅವರು ಹೃದಯಾಘಾತದಿಂದ ಮುಂಬಯಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ ನಿರ್ಮಲಾ ಮತ್ತು ಪುತ್ರಿಯರಾದ ಉಜ್ವಲಾ, ನತಾಶಾ ಮತ್ತು ಮೇಘನಾ ಅವರನ್ನು ಅಗಲಿದ್ದಾರೆ. ಸೇನಾ ಗೌರವಗಳೊಂದಿಗೆ ಮುಂಬಯಿಯ ವಿಲ್ಲೆ ಪಾರ್ಲೆಯಲ್ಲಿ ಅಂತ್ಯಕ್ರಿಯೆ ಶುಕ್ರವಾರ ನೆರವೇರಲಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

1971ರ ಭಾರತ-ಪಾಕ್‌ ಯುದ್ಧದಲ್ಲಿ ಸಮಂತ್‌ ಅವರ ತಂಡ, ಪೂರ್ವ ಪಾಕಿಸ್ತಾನದ ಮೊಂಗ್ಲಾ ಮತ್ತು ಖುಲ್ನಾ ಬಂದಿರಿನಲ್ಲಿ ಶತ್ರು ಹಡುಗುಗಳ ಮೇಲೆ ಯಶಸ್ವಿ ದಾಳಿ ನಡೆಸಿ, ಪಾಕ್‌ ಪಡೆಯನ್ನು ಹಿಮ್ಮೆಟಿಸಿತು. ಇದೇ ಯುದ್ಧ ಬಾಂಗ್ಲಾದೇಶ ಉಗಮಕ್ಕೆ ಕಾರಣವಾಯಿತು. ಆ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿ ನೌಕಾಪಡೆ ಆರಂಭಕ್ಕೆ ಬೆನ್ನೆಲುಬಾಗಿ ಸಮಂತ್‌ ನಿಂತರು. 1971ರ ಯುದ್ಧದಲ್ಲಿ ಸಮಂತ್‌ ಅವರು ತೋರಿದ ಪರಾಕ್ರಮಕ್ಕಾಗಿ ಅವರಿಗೆ ಮಹಾವೀರ ಚಕ್ರ ನೀಡಿ ಗೌರವಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ