ಆ್ಯಪ್ನಗರ

1993ರ ಸ್ಫೋಟ: ಅಬು ಸಲೇಂ ಸೇರಿ ಆರು ಆರೋಪಿಗಳು ದೋಷಿಗಳು

1993ರ ಮುಂಬಯಿ ಬಾಂಬ್ ಸ್ಫೋಟದ ರೂವಾರಿ ಅಬು ಸಲೇಂ ಮತ್ತು ಇತರ ಆರು ಪ್ರಮುಖ ಆರೋಪಿಗಳನ್ನು ದೋಷಿಗಳು ಎಂದು ಮುಂಬಯಿನ ವಿಶೇಷ ಟಾಡಾ ನ್ಯಾಯಾಲಯ ಘೋಷಿಸಿದೆ.

ಟೈಮ್ಸ್ ಆಫ್ ಇಂಡಿಯಾ 18 Jun 2017, 12:38 pm
ಮುಂಬಯಿ: 1993ರ ಮುಂಬಯಿ ಬಾಂಬ್ ಸ್ಫೋಟದ ರೂವಾರಿ ಅಬು ಸಲೇಂ ಮತ್ತು ಇತರ ಆರು ಪ್ರಮುಖ ಆರೋಪಿಗಳನ್ನು ದೋಷಿಗಳು ಎಂದು ಮುಂಬಯಿನ ವಿಶೇಷ ಟಾಡಾ ನ್ಯಾಯಾಲಯ ಘೋಷಿಸಿದ್ದು, ಒಬ್ಬನನ್ನು ಖುಲಾಸೆಗೊಳಿಸಿದೆ. ಶಿಕ್ಷೆಯ ಪ್ರಮಾಣವನ್ನು ಜೂನ್‌ 19ರಂದು ಪ್ರಕಟಿಸಲಿದೆ.
Vijaya Karnataka Web 1993 blasts tada court convicts all seven accused
1993ರ ಸ್ಫೋಟ: ಅಬು ಸಲೇಂ ಸೇರಿ ಆರು ಆರೋಪಿಗಳು ದೋಷಿಗಳು


ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದು, ತಲೆ ಮರೆಸಿಕೊಂಡಿರುವ ಮುಸ್ತಾಫ ದೌಸಾ, ಫಿರೋಜ್‌ಖಾನ್‌, ಕರೀಮುಲ್ಲಾ ಶೇಖ್‌, ತಾಹಿರ್‌ ಮರ್ಚಂಟ್‌, ಖ್ವಯಂ ಶೇಖ್‌, ದೋಷಿಗಳೆಂದು ನ್ಯಾಯಾಲಯ ಹೇಳಿದೆ. ರಿಯಾಜ್‌ ಸಿದ್ಧಿಕಿ ಖುಲಾಸೆಗೊಂಡಿರುವಾತ.

ಫಿರೋಜ್‌ ಖಾನ್‌ ದುಬೈನಲ್ಲಿ ದಾವೂದ್‌ ಇಬ್ರಾಹಿಂ ನಿವಾಸದಲ್ಲಿ ಸ್ಫೋಟ ಸಂಚಿಗೆ ಸಂಬಂಧಿಸಿದ ಸಭೆ ನಡೆಸಿದ್ದು, ಸ್ಫೋಟ ಕೃತ್ಯ ನಡೆಸುತ್ತಿರುವವರಿಗೆ ಸಾರಿಗೆ ಮತ್ತು ಆಶ್ರಯ ಸೇರಿದಂತೆ ಎಲ್ಲ ನೆರವು ನೀಡಿದ್ದ. ಮುಸ್ತಾಫ ದೌಸಾ ಸೋದರ ಮೊಹಮ್ಮದ್‌ ದೌಸಾ ಮತ್ತು ಟೈಗರ್‌ ಮೆಮೊನ್‌ ಜತೆ ಈ ದಾಳಿಗಳಿಗೆ ಸಂಬಂಧಿಸಿದಂತೆ ದುಬೈ ಮತ್ತು ನ್ಯೂ ಮುಂಬಯಿಗಳಲ್ಲಿ ನಡೆದ ಮೀಟಿಂಗ್‌ಗಳಲ್ಲೂ ಭಾಗವಹಿಸಿದ್ದ ಎಂದು ಕೋರ್ಟ್‌ ಹೇಳಿದೆ.

12 ಕಡೆಗಳಲ್ಲಿ ನಡೆದಿದ್ದ ಆ ಸ್ಫೋಟಗಳಲ್ಲಿ 257 ಮೃತಪಟ್ಟಿದ್ದು, 713 ಮಂದಿ ಗಾಯಗೊಂಡಿದ್ದರು. 27 ಕೋಟಿ ರೂ.ಗಳ ಆಸ್ತಿ ಹಾನಿಗೊಂಡಿತ್ತು.1992ರಲ್ಲಿ ನಡೆದ ಬಾಬರಿ ಮಸೀದಿ ಧ್ವಂಸಕ್ಕೆ ಪ್ರತೀಕಾರವಾಗಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಸಿಬಿಐ ಸಲ್ಲಿಸಿರುವ ವರದಿಯಲ್ಲಿ ಹೇಳಿತ್ತು.

ಈ ಪ್ರಕರಣದಲ್ಲಿ ಉಜ್ವಲ್‌ ನಿಕ್ಕಂ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿದ್ದು, ಅಬು ಸಲೇಂ ಸೇರಿದಂತೆ ಮೂವರು ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ