ಆ್ಯಪ್ನಗರ

ಗುತ್ತಿಗೆದಾರನಿಗೆ ಮೋದಿ ಹತ್ಯೆಸಂಚು ವಿವರಿಸುತ್ತಿದ್ದ ರಫೀಕ್‌

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ 1998ರ ಸರಣಿ ಬಾಂಬ್‌ ಸ್ಫೋಟದ ಪಾತಕಿ ಮೊಹಮ್ಮದ್‌ ರಫೀಕ್‌ಗೆ ನಿಜವಾಗಲೂ ಪ್ರಧಾನಿ ಹತ್ಯೆ ಮಾಡುವ ಉದ್ದೇಶ ಇದ್ದಂತೆ ತೋರುವುದಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

Vijaya Karnataka 25 Apr 2018, 11:09 am
ಕೊಯಮತ್ತೂರು:ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ನಡೆಸಿದ ಆರೋಪದಲ್ಲಿ ಬಂಧಿತನಾಗಿರುವ 1998ರ ಸರಣಿ ಬಾಂಬ್‌ ಸ್ಫೋಟದ ಪಾತಕಿ ಮೊಹಮ್ಮದ್‌ ರಫೀಕ್‌ಗೆ ನಿಜವಾಗಲೂ ಪ್ರಧಾನಿ ಹತ್ಯೆ ಮಾಡುವ ಉದ್ದೇಶ ಇದ್ದಂತೆ ತೋರುವುದಿಲ್ಲ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
Vijaya Karnataka Web 1998 coimbatore blast convict held for threatening to kill pm modi in a phone call
ಗುತ್ತಿಗೆದಾರನಿಗೆ ಮೋದಿ ಹತ್ಯೆಸಂಚು ವಿವರಿಸುತ್ತಿದ್ದ ರಫೀಕ್‌


ಸಾರಿಗೆ ಗುತ್ತಿಗೆದಾರ ಪ್ರಕಾಶ್‌ ಎಂಬುವರಿಗೆ ರಫೀಕ್‌ ಕರೆ ಮಾಡಿ ಪ್ರಧಾನಿ ಹತ್ಯೆಗೆ ತಾನು ರೂಪಿಸಿದ ಸಂಚಿನ ಬಗ್ಗೆ ವಿವರಿಸುತ್ತಿದ್ದ. ಈ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯೇ ರಫೀಕ್‌ನನ್ನು ಬಂಧಿಸಿರುವ ಪೊಲೀಸರು, ಆತ ಮತ್ತು ಗುತ್ತಿಗೆದಾರ ಪ್ರಕಾಶ್‌ ನಡುವೆ ನಡೆದ ದೂರವಾಣಿ ಸಂಭಾಷಣೆ ಕುರಿತು ಕೂಲಂಕಷ ತನಿಖೆ ನಡೆಸುತ್ತಿದ್ದಾರೆ. ಸಂಭಾಷಣೆಯಲ್ಲಿ ಪ್ರಧಾನಿ ಹೆಸರು ಪ್ರಸ್ತಾಪವಾಗಿರುವುದು ನಿಜವಾದರೂ, ಟ್ರಾನ್ಸ್‌ಪೋರ್ಟ್‌ ಕಂಟ್ರಾಕ್ಟರ್‌ ಪ್ರಕಾಶ್‌ನನ್ನು ಬೆದರಿಸುವುದಕ್ಕಾಗಿ ರಫೀಕ್‌ ಹಾಗೆ ಹೇಳಿರಬಹುದೇ ಹೊರತು, ಮೋದಿ ಹತ್ಯೆಯ ಉದ್ದೇಶ ಆತನಿಗಿರಲಿಕ್ಕಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

''8 ನಿಮಿಷಗಳ ದೂರವಾಣಿ ಸಂಭಾಷಣೆಯಲ್ಲಿ ಮುಖ್ಯವಾಗಿ 'ವಾಹನ ಹಣಕಾಸಿನ ವಿಷಯ' ಕುರಿತದ್ದಾಗಿತ್ತು. ಆದರೆ, ಇದ್ದಕ್ಕಿದ್ದಂತೆ 'ನಾವು (ಪ್ರಧಾನಿ) ಮೋದಿಯನ್ನು ಮುಗಿಸಲು ತೀರ್ಮಾನಿಸಿದ್ದೇವೆ. ಈ ಹಿಂದೆ 1998ರಲ್ಲಿ (ಮಾಜಿ ಉಪಪ್ರಧಾನಿ) ಎಲ್‌ಕೆ ಆಡ್ವಾಣಿಯವರು ನಗರಕ್ಕೆ ಭೇಟಿ ನೀಡಿದ್ದಾಗ ಬಾಂಬ್‌ ದಾಳಿಗೆ ಸಂಚು ನಡೆಸಿದವರು ನಾವು' ಎಂದು ರಫೀಕ್‌ ಹೇಳುತ್ತಿದ್ದುದು ಸಂಭಾಷಣೆಯಲ್ಲಿ ದಾಖಲಾಗಿದೆ,'' ಎಂದು ಪೊಲೀಸರು ತಿಳಿಸಿದ್ದಾರೆ.

1998ರ ಫೆಬ್ರವರಿಯಲ್ಲಿ ನಡೆದ ಸರಣಿ ಬಾಂಬ್‌ ದಾಳಿಯಲ್ಲಿ 58 ಮಂದಿ ಸಾವಿಗೀಡಾಗಿದ್ದರು. ಅಲ್ಲದೆ, ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ರಫೀಕ್‌ ಶಿಕ್ಷೆಗೊಳಗಾಗಿ ಬಿಡುಗಡೆಯಾಗಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ