ಆ್ಯಪ್ನಗರ

194 ಜೀವ ಉಳಿಸಿದ ಯುವಕರು

ದಿಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಗೋಏರ್‌ ವಿಮಾನದಲ್ಲಿ ಹೊಗೆ ಕಂಡ ಕೂಡಲೇ ಮಾಹಿತಿ ನೀಡಿ, ಯುವಕರು ಸಮಯ ಪ್ರಜ್ಞೆ ಮೆರೆದಿದ್ದಾರೆ.

MensXP Team 11 Feb 2017, 12:07 pm
ಹೊಸದಿಲ್ಲಿ: ಮನೆ ಮಹಡಿ ಮೇಲೆ ಕುಳಿತಿದ್ದ ಯುವಕರು ಆಗಸದಲ್ಲಿ ಹಾರುತ್ತಿದ್ದ ವಿಮಾನದಲ್ಲಿ ಬೆಂಕಿ ಕಂಡ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ 194 ಜೀವಗಳನ್ನು ಉಳಿಸಿದ್ದಾರೆ.
Vijaya Karnataka Web 2 teen boys saved 194 lives
194 ಜೀವ ಉಳಿಸಿದ ಯುವಕರು


ದಿಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಗೋಏರ್‌ ವಿಮಾನದಲ್ಲಿ ಹೊಗೆ ಕಂಡ ಕೂಡಲೇ ಮಾಹಿತಿ ನೀಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

ರೋಹಿತ್‌ ಸಿಂಗ್ (17) ತನ್ನ ಸೋದರ ಸಂಬಂಧಿ ಜತೆ ಮಾತನಾಡುತ್ತಾ, ಟೆರೇಸ್‌ ಮೇಲೆ ಕುಳಿತ್ತಿದ್ದಾಗ ಕಂಡ ವಿಷಯವನ್ನು ಮೊದಲು ತಂದೆಗೆ ತಿಳಿಸಿದ್ದಾನೆ. ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 7.40ಕ್ಕೆ ಪೊಲೀಸರಿಗೆ ಮಾಹಿತಿ ದೊರೆತ ನಂತರ, 7.47ಕ್ಕೆ ವಿಮಾನ ತುರ್ತು ಭೂ ಸ್ಪರ್ಶ ಮಾಡಿದೆ.




ಪೊಲೀಸರು ಸಹ ತಡ ಮಾಡದೇ ಮಾಹಿತಿ ನೀಡಿದ್ದರಿಂದ ವಿಮಾನದ ಕ್ಯಾಪ್ಟನ್‌ 194 ಜೀವಗಳನ್ನು ಉಳಿಸುವಲ್ಲಿ ಯಶಸ್ವಿಯಾದರು. ತುರ್ತು ಭೂಸ್ಪರ್ಶ ಮಾಡುವ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಸೇರಿದಂತೆ ಎಲ್ಲ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ಗೋ ಏರ್‌ ವಿಮಾನದ ಎಂಜಿನ್‌ ವಿಫಲಗೊಂಡಿದ್ದ ವಿಷಯ ನಂತರ ಬೆಳಕಿಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ