ಆ್ಯಪ್ನಗರ

ತಲೆಗೆ ಹೊಕ್ಕು ಮಿದುಳನ್ನು ಸೀಳಿದ್ದ ಕಬ್ಬಿಣದ ರಾಡ್‌ ತೆಗೆದ ವೈದ್ಯರು, ಬದುಕುಳಿದ ಯುವಕ!

ಒಂದು ಸರಳು ಆತನ ಬಲಗಡೆಯ ತಲೆಗೆ ಹೊಕ್ಕು, ಮಿದುಳನ್ನು ಭೇದಿಸಿ ಎಡಭಾಗದಿಂದ ಹೊರಗೆ ಬಂದಿತ್ತು. ಯುವಕನ ಎಡಗೈ ಮೇಲೆ ಮತ್ತೊಂದು ಕಬ್ಬಿಣದ ಸರಳು ಹೊಕ್ಕಿತ್ತು.

TOI.in 13 Apr 2019, 12:02 pm
ನಾಗ್ಪುರ: ಬಲಗಡೆಯಿಂದ ತಲೆಗೆ ಹೊಕ್ಕು ಎಡಗಡೆಯಿಂದ ಹೊರಗೆ ಬಂದಿದ್ದ ಕಬ್ಬಿಣದ ರಾಡ್‌ಅನ್ನು ಯಶಸ್ವಿಯಾಗಿ ತೆಗೆಯುವ ಮೂಲಕ 21 ವರ್ಷದ ಯುವಕನ ಪ್ರಾಣವನ್ನು ನಾಗ್ಪುರದ ನ್ಯೂರಾಲಜಿಕಲ್‌ ವೈದ್ಯರು ಉಳಿಸಿದ್ದಾರೆ.
Vijaya Karnataka Web Balaghat man


ಬಾಲಾಘಾಟ್‌ನ ನಿವಾಸಿ ಸಂಜಯ್‌ ಬಾಹೆ ತಲೆಗೆ ಕಬ್ಬಿಣದ ಸರಳು ಹೊಕ್ಕಿತ್ತು. ಪ್ರಜ್ಞೆ ತಪ್ಪಿದ್ದ ಬಾಹೆಯನ್ನು ಬಾಲಾಘಾಟ್‌ನಿಂದ ನಾಗ್ಪುರಕ್ಕೆ ಸಾಗಿಸಿ, ಅಂದೇ ಶಸ್ತ್ರ ಚಿಕಿತ್ಸೆ ನೀಡುವ ಮೂಲಕ ಬಹಳ ಜಾಗರೂಕತೆಯಿಂದ ಹೊಕ್ಕಿದ್ದ ಸರಳನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮನೆಯಲ್ಲಿ ಬಾವಿ ಕೆಲಸವನ್ನು ಸ್ವತಃ ನಿಭಾಯಿಸುತ್ತಿದ್ದ ಸಂಜಯ್‌ ಬಾಹೆ ಆಕಸ್ಮಿಕವಾಗಿ ಬಾವಿಯ ರಿಂಗ್‌ಗಳಲ್ಲಿ ಉಳಿದಿದ್ದ ಕಬ್ಬಿಣದ ಸರಳಿನ ಮೇಲೆ ಬಿದ್ದಿದ್ದಾನೆ. ಪರಿಣಾಮ ಒಂದು ಸರಳು ಆತನ ಬಲಗಡೆಯ ತಲೆಗೆ ಹೊಕ್ಕು, ಮಿದುಳನ್ನು ಭೇದಿಸಿ ಎಡಭಾಗದಿಂದ ಹೊರಗೆ ಬಂದಿತ್ತು. ಯುವಕನ ಎಡಗೈ ಮೇಲೆ ಮತ್ತೊಂದು ಕಬ್ಬಿಣದ ಸರಳು ಹೊಕ್ಕಿತ್ತು.

ನಾಗ್ಪುರಕ್ಕೆ ಚಿಕಿತ್ಸೆ ಕೊಡಿಸಲು ಕರೆ ತರುವ ವರೆಗೆ ಬಾಹೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ನಾಗ್ಪುರದ ನ್ಯೂರಾನ್‌ ಆಸ್ಪತ್ರೆಯ ವೈದ್ಯರ ತಂಡಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಚಿಕಿತ್ಸೆಗೆ ಸುಮಾರು 90,000 ರೂ. ವೆಚ್ಚ ತಗುಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ದುಡ್ಡು ಬೇಕಾಗಬಹುದು ಎನ್ನಲಾಗಿದೆ.

ಜೀವ ಉಳಿಸಿದ ವೈದ್ಯರಿಗೆ ಬಾಹೆ ಧನ್ಯವಾದ ಹೇಳಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ