38 ವರ್ಷದ ಮಲತಾಯಿ ಜತೆ ಓಡಿಹೋಗಿ ಮದುವೆಯಾದ 22ರ ಯುವಕ: ಅಪ್ಪನಿಂದ ದೂರು!
Uttarakhand: 22 ವರ್ಷದ ಯುವಕನೊಬ್ಬ 38 ವರ್ಷದ ಮಲತಾಯಿಯ ಜತೆಗೆ ಓಡಿಹೋಗಿ ಮದುವೆಯಾದ ಘಟನೆ ಉತ್ತರಾಖಂಡದ ಉಧಾಮ್ ಸಿಂಗ್ ನಗರ ಜಿಲ್ಲೆಯಲ್ಲಿ ವರದಿಯಾಗಿದೆ. ಮಗನ ವಿರುದ್ಧ ಆತನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಹೈಲೈಟ್ಸ್:
- ಉತ್ತರಾಖಂಡದ ಉಧಾಮ್ ಸಿಂಗ್ ನಗರದ ಜಿಲ್ಲೆಯಲ್ಲಿ ಘಟನೆ
- ಮಲತಾಯಿ ಜತೆ ಓಡಿಹೋಗಿ ಮದುವೆಯಾದ 22ರ ಯುವಕ
- 11 ವರ್ಷಗಳ ಹಿಂದೆ ಎರಡನೇ ಮದುವೆಯಾಗಿದ್ದ ವ್ಯಕ್ತಿ
- ಅಪ್ಪನ ಎರಡನೇ ಮದುವೆ ಬಳಿಕ ಮನೆಬಿಟ್ಟುಹೋಗಿದ್ದ ಮಗ
ರುದ್ರಾಪುರ: ತನಗಿಂತ ಸುಮಾರು ಎರಡು ಪಟ್ಟು ಹೆಚ್ಚು ವಯಸ್ಸಿನ ಮಲತಾಯಿಯ ಜತೆಗೇ 22 ವರ್ಷದ ವ್ಯಕ್ತಿಯೊಬ್ಬ ಓಡಿಹೋದ ಘಟನೆ ಉತ್ತರಾಖಂಡದಲ್ಲಿ ವರದಿಯಾಗಿದೆ. ಇವರಿಬ್ಬರೂ ಜತೆಯಾಗಿ ವಾಸ ಮಾಡುತ್ತಿದ್ದಾರೆ. ಇದರಿಂದ ಯುವಕನ ತಂದೆ ಆಘಾತಕ್ಕೆ ಒಳಗಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಉಧಾಮ್ ಸಿಂಗ್ ನಗರ ಜಿಲ್ಲೆಯ ಬಾಜ್ಪುರ ಪ್ರದೇಶದ ಗ್ರಾಮವೊಂದರ ನಿವಾಸಿಯಾಗಿರುವ 55 ವರ್ಷದ ತಂದೆ, 11 ವರ್ಷಗಳ ಹಿಂದೆ ತಮ್ಮ ಮೊದಲ ಪತ್ನಿ ನಿಧನರಾದ ಕೆಲವೇ ದಿನಗಳಲ್ಲಿ ಎರಡನೇ ಮದುವೆಯಾಗಿದ್ದರು. ಆದರೆ ಅವರು ಈಗ ಸ್ಥಳೀಯರ ಪೊಲೀಸರಲ್ಲಿ ದೂರು ನೀಡಿದ್ದು, "ನನ್ನ ಮಗ ನನ್ನ ಎರಡನೇ ಹೆಂಡತಿಯನ್ನು ಮದುವೆಯಾಗಿದ್ದಾನೆ" ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಈ ಯುವಕ ಹಾಗೂ ಆತನ ಮಲತಾಯಿ ಯಾವ ಕಾನೂನನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನುವುದನ್ನು ಕಂಡುಕೊಳ್ಳುವುದೇ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅವರಿಬ್ಬರೂ ಪ್ರಾಪ್ತ ವಯಸ್ಕರಾಗಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬ ಬಗ್ಗೆ ಅವರು ಪರಿಶೀಲನೆ ನಡೆಸಿದ್ದಾರೆ. ದಿನಗೂಲಿ ಕಾರ್ಮಿಕರಾಗಿರುವ ಯುವಕನ ತಂದೆ, ಮಗ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಹಾಗೂ ತನ್ನ ಹೆಂಡತಿ ಮನೆಗೆ ಮರಳಲು ನಿರಾಕರಿಸಿದ್ದಾಳೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
"ನನ್ನ ಎರಡನೇ ಹೆಂಡತಿ ನಮ್ಮ ಮಗಳನ್ನು ಕೂಡ ಕರೆದುಕೊಂಡು ಹೋಗಿದ್ದು, 20 ಸಾವಿರ ರೂಪಾಯಿ ಕದ್ದೊಯ್ದಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.
"ಮೊದಲ ಹೆಂಡತಿಯಿಂದ ಆ ವ್ಯಕ್ತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ದಶಕದ ಹಿಂದೆ ತಂದೆ ಮತ್ತೊಂದು ಮದುವೆಯಾದಾಗ ಇಬ್ಬರೂ ಗಂಡು ಮಕ್ಕಳು ಅಪ್ಪನ ಮನೆ ತೊರೆದಿದ್ದರು. ಆದರೆ ಕಿರಿಯ ಮಗ ಕಳೆದ ವರ್ಷದಿಂದ ಮನೆಗೆ ಆಗಾಗ ಭೇಟಿ ನೀಡಲು ಆರಂಭಿಸಿದ್ದ" ಎಂದು ಬನ್ನಾಖೇರಾ ಪೊಲೀಸ್ ಠಾಣೆಯ ಉಸ್ತುವಾರಿ ಅರ್ಜುನ್ ಗಿರಿ ಅವರು ಪ್ರಕರಣದ ವಿವರವನ್ನು ನೀಡಿದ್ದಾರೆ.
38 ವರ್ಷದ ಮಹಿಳೆಯು ಮೇ 11ರಂದು ತನ್ನ ತಂದೆಯ ಊರಿಗೆ ಹೋಗಿ ಬರುವುದಾಗಿ ಗಂಡನಿಗೆ ತಿಳಿಸಿದ್ದಳು. ಆದರೆ ಅಲ್ಲಿಂದ ಮರಳಿ ಬಂದಿರಲಿಲ್ಲ. ಕೊನೆಗೆ ತನ್ನ ಹೆಂಡತಿ, ತನ್ನ ಮಗನನ್ನೇ ಮದುವೆಯಾಗಿರುವುದು ಹಾಗೂ ಇಬ್ಬರೂ ಜತೆಯಲ್ಲಿ ವಾಸ ಮಾಡುತ್ತಿರುವುದು ವ್ಯಕ್ತಿಗೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
"ನಾನು ಇನ್ನೂ ದೂರು ದಾಖಲು ಮಾಡಿಕೊಂಡಿಲ್ಲ. ನಮ್ಮ ಮುಂದೆ ಹಾಜರಾಗುವಂತೆ ಆ ಜೋಡಿಗೆ ಸೂಚನೆ ನೀಡಿದ್ದೇವೆ. ಅವರಿಬ್ಬರೂ ವಯಸ್ಕರಾಗಿದ್ದಾರೆ. ಅವರು ಯಾವುದಾದರೂ ಕಾನೂನು ಮುರಿದಿದ್ದಾರೆ ಎನ್ನುವುದು ಕಂಡುಬಂದರೆ ಮಾತ್ರ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಅರ್ಜುನ್ ಗಿರಿ ತಿಳಿಸಿದ್ದಾರೆ. ಜನವರಿಯಲ್ಲಿ ಉತ್ತರಾಖಂಡದ ಡೆಹರಾಡೂನ್ನಲ್ಲಿ ಯುವಕನೊಬ್ಬ ಮಲತಾಯಿಯ ಮೇಲೆ ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ತೀವ್ರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಮೃತಪಟ್ಟಿದ್ದರು.
"ನನ್ನ ಎರಡನೇ ಹೆಂಡತಿ ನಮ್ಮ ಮಗಳನ್ನು ಕೂಡ ಕರೆದುಕೊಂಡು ಹೋಗಿದ್ದು, 20 ಸಾವಿರ ರೂಪಾಯಿ ಕದ್ದೊಯ್ದಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ.
"ಮೊದಲ ಹೆಂಡತಿಯಿಂದ ಆ ವ್ಯಕ್ತಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ದಶಕದ ಹಿಂದೆ ತಂದೆ ಮತ್ತೊಂದು ಮದುವೆಯಾದಾಗ ಇಬ್ಬರೂ ಗಂಡು ಮಕ್ಕಳು ಅಪ್ಪನ ಮನೆ ತೊರೆದಿದ್ದರು. ಆದರೆ ಕಿರಿಯ ಮಗ ಕಳೆದ ವರ್ಷದಿಂದ ಮನೆಗೆ ಆಗಾಗ ಭೇಟಿ ನೀಡಲು ಆರಂಭಿಸಿದ್ದ" ಎಂದು ಬನ್ನಾಖೇರಾ ಪೊಲೀಸ್ ಠಾಣೆಯ ಉಸ್ತುವಾರಿ ಅರ್ಜುನ್ ಗಿರಿ ಅವರು ಪ್ರಕರಣದ ವಿವರವನ್ನು ನೀಡಿದ್ದಾರೆ.
38 ವರ್ಷದ ಮಹಿಳೆಯು ಮೇ 11ರಂದು ತನ್ನ ತಂದೆಯ ಊರಿಗೆ ಹೋಗಿ ಬರುವುದಾಗಿ ಗಂಡನಿಗೆ ತಿಳಿಸಿದ್ದಳು. ಆದರೆ ಅಲ್ಲಿಂದ ಮರಳಿ ಬಂದಿರಲಿಲ್ಲ. ಕೊನೆಗೆ ತನ್ನ ಹೆಂಡತಿ, ತನ್ನ ಮಗನನ್ನೇ ಮದುವೆಯಾಗಿರುವುದು ಹಾಗೂ ಇಬ್ಬರೂ ಜತೆಯಲ್ಲಿ ವಾಸ ಮಾಡುತ್ತಿರುವುದು ವ್ಯಕ್ತಿಗೆ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
"ನಾನು ಇನ್ನೂ ದೂರು ದಾಖಲು ಮಾಡಿಕೊಂಡಿಲ್ಲ. ನಮ್ಮ ಮುಂದೆ ಹಾಜರಾಗುವಂತೆ ಆ ಜೋಡಿಗೆ ಸೂಚನೆ ನೀಡಿದ್ದೇವೆ. ಅವರಿಬ್ಬರೂ ವಯಸ್ಕರಾಗಿದ್ದಾರೆ. ಅವರು ಯಾವುದಾದರೂ ಕಾನೂನು ಮುರಿದಿದ್ದಾರೆ ಎನ್ನುವುದು ಕಂಡುಬಂದರೆ ಮಾತ್ರ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ಅರ್ಜುನ್ ಗಿರಿ ತಿಳಿಸಿದ್ದಾರೆ. ಜನವರಿಯಲ್ಲಿ ಉತ್ತರಾಖಂಡದ ಡೆಹರಾಡೂನ್ನಲ್ಲಿ ಯುವಕನೊಬ್ಬ ಮಲತಾಯಿಯ ಮೇಲೆ ಅತ್ಯಾಚಾರ ಎಸಗಿ ಮಾರಣಾಂತಿಕ ಹಲ್ಲೆ ನಡೆಸಿದ್ದ ಘಟನೆ ನಡೆದಿತ್ತು. ತೀವ್ರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರು ಮೃತಪಟ್ಟಿದ್ದರು.