ಆ್ಯಪ್ನಗರ

ಮುಂದುವರಿದ ಮಹಾ ಮಳೆ: ಡ್ಯಾಂ ಒಡೆದು 23 ಬಲಿ

ಮಹಾರಾಷ್ಟ್ರದಲ್ಲಿ ಮಳೆ ಅನಾಹುತಗಳು ಮುಂದುವರಿದಿದ್ದು, ರತ್ನಗಿರಿ ಜಿಲ್ಲೆಯಲ್ಲಿ ತಿವಾರೆ ಅಣೆಕಟ್ಟು ಒಡೆದು 23 ಮಂದಿ ಮೃತಪಟ್ಟಿದ್ದಾರೆ.

Agencies 4 Jul 2019, 5:00 am
ಮುಂಬಯಿ: ಮಹಾರಾಷ್ಟ್ರದಲ್ಲಿ ಮಳೆ ಅನಾಹುತಗಳು ಮುಂದುವರಿದಿದ್ದು, ರತ್ನಗಿರಿ ಜಿಲ್ಲೆಯಲ್ಲಿ ತಿವಾರೆ ಅಣೆಕಟ್ಟು ಒಡೆದು 23 ಮಂದಿ ಮೃತಪಟ್ಟಿದ್ದಾರೆ. ಇತ್ತ ಮುಂಬಯಿಯಲ್ಲಿ ಮಳೆಯ ರೌದ್ರಾವತಾರ ಸ್ವಲ್ಪ ಮಟ್ಟಿಗೆ ತಣ್ಣಗಾಗಿ ನಿರಾಳತೆ ಮೂಡಿದೆ.
Vijaya Karnataka Web 2-2-03072-PTI7_3_2019_000178B


ಭಾರಿ ಮಳೆಯಿಂದಾಗಿ ರತ್ನಗಿರಿ ಜಿಲ್ಲೆಯ ಚಿಪ್ಲೂನ್‌ ತಾಲೂಕಿನ ತಿವಾರೆ ಅಣೆಕಟ್ಟು ಒಡೆದು ಕೆಳಭಾಗದಲ್ಲಿನ ಗ್ರಾಮಗಳಲ್ಲಿ ಉಂಟಾದ ಪ್ರವಾಹದಲ್ಲಿ 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

20 ಲಕ್ಷ ಘನ ಮೀಟರ್‌ ನೀರು ಸಂಗ್ರಹಣಾ ಸಾಮರ್ಥ್ಯ‌ ಹೊಂದಿರುವ ಈ ಅಣೆಕಟ್ಟಿನಲ್ಲಿ ಮಂಗಳವಾರ ರಾತ್ರಿ ಬಿರುಕು ಕಾಣಿಸಿಕೊಂಡಿದ್ದು, ಏಳು ಗ್ರಾಮಗಳಿಗೆ ಪ್ರವಾಹ ನುಗ್ಗಿದೆ. 12 ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರಾತ್ರಿ ಸಂಭವಿಸಿದ ದುರಂತದಿಂದಾಗಿ ಜನರಿಗೆ ತಪ್ಪಿಸಿಕೊಳ್ಳಲೂ ಆಗಲಿಲ್ಲ. ಬುಧವಾರ ಸಂಜೆವರೆಗೆ 11 ದೇಹಗಳಷ್ಟೇ ಸಿಕ್ಕಿವೆ.

ನವೆಂಬರ್‌ನಲ್ಲೇ ಬಿರುಕು ನಿರ್ಲಕ್ಷ್ಯದಿಂದ ದುರಂತ
ಅಣೆಕಟ್ಟಿನಲ್ಲಿ ಬಿರುಕು ಉಂಟಾಗಿರುವ ಬಗ್ಗೆ 2018ರ ನವೆಂಬರ್‌ನಲ್ಲೇ ಜನರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೇ ದುರಂತಕ್ಕೆ ಮೂಲ ಕಾರಣ ಎನ್ನಲಾಗಿದೆ. ಅಣೆಕಟ್ಟು ಇರುವ ಪ್ರದೇಶದ ಚಿಪ್ಳೂಣ್‌ ಮತ್ತು ದಪೋಲಿ ತಾಲೂಕು ಕಚೇರಿಗಳ ನಡುವೆ ಇದ್ದ ವಿವಾದವೂ ನಿರ್ಲಕ್ಷ್ಯಕ್ಕೆ ಕಾರಣವಾಗಿತ್ತು.

14 ವರ್ಷ ಹಳೆಯ ಡ್ಯಾಂ
ಕೊಂಕಣ ಪ್ರದೇಶದಲ್ಲಿರುವ ಈ ಅಣೆಕಟ್ಟನ್ನು 14 ವರ್ಷದ ಹಿಂದೆ ಶಿವಸೇನೆ ಶಾಸಕ ಸದಾನಂದ ಚವಾಣ್‌ ಅವರಿಗೆ ಸೇರಿದ ಖೇಮ್‌ ರಾಜ್‌ ಎಂಬ ಸಂಸ್ಥೆ ನಿರ್ಮಿಸಿತ್ತು. ನಿರ್ಮಾಣ ಕಾಮಗಾರಿಯ ಬಗ್ಗೆ ಆರಂಭದಿಂದಲೂ ಆಕ್ಷೇಪವಿತ್ತು. ಇದೀಗ ದುರಂತದ ಬಗ್ಗೆ ತನಿಖೆಗೆ ಮಹಾರಾಷ್ಟ್ರ ಸರಕಾರ ಆದೇಶ ನೀಡಿದೆ. ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರೂ. ಪರಿಹಾರ ಪ್ರಕಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ