ಆ್ಯಪ್ನಗರ

ಕಣಿವೆ ರಾಜ್ಯಕ್ಕೆ ಇನ್ನೂ 25,000 ಯೋಧರ ರವಾನೆ

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರು ರಾಜ್ಯಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ತರುವಾಯ ಕೇಂದ್ರ ಸರಕಾರ ಮೊದಲ ಹಂತದಲ್ಲಿ 100 ತುಕಡಿಗಳನ್ನು ಕಳಿಸಿಕೊಟ್ಟಿತ್ತು.

PTI 2 Aug 2019, 5:00 am
ಶ್ರೀನಗರ: ಜಮ್ಮು-ಕಾಶ್ಮೀರಕ್ಕೆ 10,000 ಸೇನಾ ಸಿಬ್ಬಂದಿಯನ್ನು ರವಾನಿಸಿ ವಾರ ಕಳೆಯುವ ಮುನ್ನವೇ ಇನ್ನೂ 25,000 ಅರೆ ಸೇನಾ ಸಿಬ್ಬಂದಿಯನ್ನು ಕಣಿವೆ ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ. ವಿವಿಧ ರಾಜ್ಯಗಳಿಂದ ಆಯ್ಕೆಯಾದ ಭದ್ರತಾ ಸಿಬ್ಬಂದಿಯ ತಂಡಗಳು ಗುರುವಾರ ಬೆಳಗ್ಗೆ ರಾಜ್ಯದತ್ತ ಪ್ರಯಾಣ ಬೆಳೆಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
Vijaya Karnataka Web army


ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಧೋವಲ್‌ ಅವರು ರಾಜ್ಯಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ ತರುವಾಯ ಕೇಂದ್ರ ಸರಕಾರ ಮೊದಲ ಹಂತದಲ್ಲಿ 100 ತುಕಡಿಗಳನ್ನು ಕಳಿಸಿಕೊಟ್ಟಿತ್ತು. ಇದಾಗಿ ಈಗ 250 ತುಕಡಿಗಳ ರವಾನೆಯಾಗಿದೆ. ''ಪ್ರಸ್ತುತ ರಾಷ್ಟ್ರಪತಿ ಆಡಳಿತಕ್ಕೆ ಒಳಪಟ್ಟಿರುವ ಜಮ್ಮು-ಕಾಶ್ಮೀರದಲ್ಲಿ ಅಗತ್ಯಕ್ಕೆ ತಕ್ಕಟ್ಟು ಭದ್ರತಾ ಸಿಬ್ಬಂದಿ ಇರಲಿಲ್ಲ. ಈ ಕೊರತೆ ನೀಗಿಸುವ ಕ್ರಮವಾಗಿ ಹೆಚ್ಚುವರಿ ತುಕಡಿಗಳ ರವಾನೆಯಾಗಿದೆ,'' ಎಂದು ರಾಜ್ಯ ಪೊಲೀಸ್‌ ವರಿಷ್ಠ ದಿಲ್‌ಬಾಗ್‌ ಸಿಂಗ್‌ ಹೇಳಿದ್ದಾರೆ.

ಏತನ್ಮಧ್ಯೆ, ಹವಾಮಾನ ವೈಪರೀತ್ಯದ ಕಾರಣ ನೀಡಿ ಅಮರನಾಥ್‌ ಯಾತ್ರೆಯನ್ನು ಆಗಸ್ಟ್‌ 4ರವರೆಗೆ ರದ್ದುಗೊಳಿಸಲಾಗಿದೆ. ಇದಾಗಿ ಯಾತ್ರಾರ್ಥಿಗಳ ಭದ್ರತೆಗೆ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳನ್ನು ಆಯಕಟ್ಟಿನ ಪ್ರದೇಶಗಳಿಗೆ ಕಳಿಸಿಕೊಡಲಾಗಿದೆ. ಒಟ್ಟು 40 ಸಾವಿರ ಯೋಧರನ್ನು ಯಾತ್ರಿಕರ ಭದ್ರತೆಗೆ ನಿಯೋಜಿಸಲಾಗಿತ್ತು.

ಯಾವುದೇ ಗಳಿಗೆಯಲ್ಲಿ ಎದುರಾಗುವ ಸವಾಲುಗಳಿಗೆ ಸನ್ನದ್ಧವಾಗಿರುವಂತೆ ಭದ್ರತಾ ಪಡೆಗಳಿಗೆ ಆದೇಶ ನೀಡಲಾಗಿದೆ. ವಿಧಾನಸಭೆ ಚುನಾವಣೆ ಘೋಷಣೆಗೆ ತಯಾರಿ ನಡೆದಿದ್ದು, ಈ ಬೆಳವಣಿಗೆಗೆ ಕಾರಣ ಎನ್ನುವ ಮಾತುಗಳೂ ಕೇಳಿ ಬಂದಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ