ಆ್ಯಪ್ನಗರ

ಭಾರತದ ವಿರುದ್ಧ ಯುದ್ಧ: ಮತ್ತೆ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾನೆ 26/11 ದಾಳಿ ಕಿಂಗ್ ಪಿನ್ ಹಫೀಜ್ ಸಯೀದ್

26/11 ದಾಳಿಯ ಕಿಂಗ್ ಪಿನ್ ಹಪೀಝ್ ಸಯೀದ್ ಮತ್ತೆ ಭಾರತದ ವಿರುದ್ಧ ದಾಳಿ ಮಾಡುವ ಸಂಚು ರೂಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾನೆ, ಎಂದು ಮಾರ್ಚ್‌ನಲ್ಲಿ ಬಂಧಿಸಲ್ಪಟ್ಟಿರುವ ಲಷ್ಟರ್ ಇ ತೈಬಾ ಉಗ್ರ ಹಮ್ಜಾ ಬಾಯ್ಬಿಟ್ಟಿದ್ದಾನೆ.

Indiatimes 29 May 2018, 12:51 pm
ಶ್ರೀನಗರ: 26/11 ದಾಳಿಯ ಕಿಂಗ್ ಪಿನ್ ಹಪೀಝ್ ಸಯೀದ್ ಮತ್ತೆ ಭಾರತದ ವಿರುದ್ಧ ದಾಳಿ ಮಾಡುವ ಸಂಚು ರೂಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾನೆ, ಎಂದು ಮಾರ್ಚ್‌ನಲ್ಲಿ ಬಂಧಿಸಲ್ಪಟ್ಟಿರುವ ಲಷ್ಟರ್ ಇ ತೈಬಾ ಉಗ್ರ ಹಮ್ಜಾ ಬಾಯ್ಬಿಟ್ಟಿದ್ದಾನೆ.
Vijaya Karnataka Web Teror


ಮಾರ್ಚ್ 20 ರಂದು ಕುಪ್ವಾರದಲ್ಲಿ ನಡೆಸಿದ ಉಗ್ರ ವಿರೋಧಿ ಕಾರ್ಯಾಚರಣೆಯಲ್ಲಿ ಝಬಿಉಲ್ಲಾ ಅಲಿಯಾಸ್ ಹಮ್ಜಾ ಸೆರೆ ಸಿಕ್ಕಿದ್ದ. ಆತನ ಜತೆಗಿದ್ದ ಇತರ ಐವರು ಸಹಚರರು ಕಾರ್ಯಾಚರಣೆಯಲ್ಲಿ ಹತರಾಗಿದ್ದರು. ಮೂವರು ಸೈನಿಕರು ಮತ್ತು ಒಬ್ಬ ಪೊಲೀಸ್ ಪೇದೆ ಸಹ ಈ ಸಂದರ್ಭದಲ್ಲಿ ಹುತಾತ್ಮರಾಗಿದ್ದರು.

ಹಫೀಜ್ ಸಯೀದ್ ಮತ್ತು ಜಕೀರ್-ಉರ್-ರೆಹಮಾನ್ ಲಖ್ವಿ ಸೇರಿಕೊಂಡು ತಮ್ಮ ವಿಶ್ವಾಸಿಕ ಜಮಾತ್-ಉದ್-ದಾವಾ (ಜ್ಯೂಡಿ) ಯ ನೇತೃತ್ವದಲ್ಲಿ ಯುವಕರನ್ನು ಸೆಳೆಯುವ ಕೆಲಸದಲ್ಲಿ ತೊಡಗಿದ್ದಾರೆ. ಇದೊಂದು ಬಹಿರಂಗ ಆಹ್ವಾನ. 15 ರಿಂದ 20 ವರ್ಷದ ಬಾಲಕರನ್ನು ಜಿಹಾದ್ ಸೇರಿ ಬಲಿದಾನ ಮಾಡಿ ಎಂದು ಸೆಳೆಯುವ ಜೆಯುಡಿ ನಾಯಕರು 7 ಪ್ರತ್ಯೇಕ ಸ್ಥಳಗಳಲ್ಲಿ ಅವರಿಗೆ ತರಬೇತಿ ನೀಡುತ್ತಾರೆ, ಎಂದು ಹಮ್ಜಾ ಬಹಿರಂಗ ಪಡಿಸಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ