ಆ್ಯಪ್ನಗರ

ಏಕತಾ ಪ್ರತಿಮೆ: ಒಂದೇ ದಿನದಲ್ಲಿ 27,000 ಪ್ರವಾಸಿಗರಿಂದ ವೀಕ್ಷಣೆ

ಮೊದಲ ದಿನದಿಂದಲೂ ದಾಖಲೆ ಸಂಖ್ಯೆಯ ಜನರು ಪ್ರತಿಮೆ ವೀಕ್ಷಣೆಗೆ ಆಗಮಿಸುತ್ತಿದ್ದು, ಒಂದೇ ದಿನದಲ್ಲಿ ಅಷ್ಟೊಂದು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

Vijaya Karnataka Web 11 Nov 2018, 4:08 pm
ಹೊಸದಿಲ್ಲಿ: ಗುಜರಾತ್‌ನ ನರ್ಮದಾ ತೀರದಲ್ಲಿ ನಿರ್ಮಿಸಲಾಗಿರುವ 182 ಮೀ. ಎತ್ತರದ ಸರ್ದಾರ್ ವಲ್ಲಭಭಾಯ್‌ ಪಟೇಲ್ ಅವರ ಪ್ರತಿಮೆ ವೀಕ್ಷಣೆಗೆ ಜನಸಾಗರವೇ ಹರಿದುಬರುತ್ತಿದೆ.
Vijaya Karnataka Web statue_of_unity1


ಜಗತ್ತಿನ ಅತಿ ಎತ್ತರದ ಪ್ರತಿಮೆ ಎಂಬ ಖ್ಯಾತಿಗೂ ಪಾತ್ರವಾಗಿರುವ ಏಕತಾ ಪ್ರತಿಮೆಯನ್ನು ಉದ್ಘಾಟನೆಯಾದ ಬಳಿಕ ಶನಿವಾರ 27,000 ಮಂದಿ ವೀಕ್ಷಿಸಿದ್ದಾರೆ.

ಮೊದಲ ದಿನದಿಂದಲೂ ದಾಖಲೆ ಸಂಖ್ಯೆಯ ಜನರು ಪ್ರತಿಮೆ ವೀಕ್ಷಣೆಗೆ ಆಗಮಿಸುತ್ತಿದ್ದು, ಒಂದೇ ದಿನದಲ್ಲಿ ಅಷ್ಟೊಂದು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

ನರ್ಮದಾ ಜಿಲ್ಲಾಧಿಕಾರಿ ಆರ್‌ ಎಸ್‌ ನಿನಾಮ ಇದನ್ನು ದೃಢಪಡಿಸಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದಿದ್ದಾರೆ.

ಪ್ರತಿಮೆಯ ಒಳಭಾಗದ ಗ್ಯಾಲರಿ ಪ್ರವೇಶಕ್ಕೆ ದಿನಕ್ಕೆ 5000 ಜನರಿಗಷ್ಟೇ ಅವಕಾಶ ಇದೆ. ಅದಕ್ಕಿಂತ ಹೆಚ್ಚಿನ ಜನರಿಗೆ ಪ್ರತಿಮೆ ಒಳಪ್ರವೇಶಿಸಿ, ಸರ್ದಾರ್ ಪಟೇಲರ ಎದೆ ಭಾಗದ ಗ್ಯಾಲರಿಯಿಂದ ವೀಕ್ಷಿಸಲು ಅವಕಾಶವಿಲ್ಲ. ಹೀಗಾಗಿ ಪ್ರವಾಸಿಗರು ಮುಂಚಿತವಾಗಿ ಪ್ಲ್ಯಾನ್ ರೂಪಿಸಿದರೆ ಉತ್ತಮ ಎಂದು ಗುಜರಾತ್ ಸರಕಾರ ಹೇಳಿದೆ. ಕಳೆದ ಐದು ದಿನದಲ್ಲಿ 75,000 ಕ್ಕೂ ಅಧಿಕ ಮಂದಿ ಪ್ರತಿಮೆ ವೀಕ್ಷಣೆಗೆ ಆಗಮಿಸಿದ್ದಾರೆ.

ಪ್ರತಿಮೆಯನ್ನು ಉದ್ಘಾಟಿಸಿದ್ದ ಪ್ರಧಾನಿ ನರೇಂದ್ರ ಮೋದಿ, ದಿನವೂ ಸಾವಿರಾರು ಜನರು ಪಟೇಲರ ಪ್ರತಿಮೆ ವೀಕ್ಷಿಸಲು ಆಗಮಿಸಲಿದ್ದಾರೆ. ಇದರಿಂದ ಪಟೇಲರ ಕೀರ್ತಿ ಹರಡುವ ಜತೆಗೆ ಪ್ರವಾಸೋದ್ಯಮದ ಬೆಳವಣಿಗೆಗೂ ಅವಕಾಶ ದೊರೆಯಲಿದೆ ಎಂದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ