ಆ್ಯಪ್ನಗರ

ಮಧ್ಯಪ್ರದೇಶದಲ್ಲಿ ಸಂಪುಟ ವಿಸ್ತರಣೆ ; ಶಿವರಾಜ್ ಸಿಂಗ್ ಟೀಂ ಸೇರಿದ 28 ಮಂದಿ ನೂತನ ಸಚಿವರು

ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಗುರುವಾರ ಸಂಪುಟ ವಿಸ್ತರಿಸಿಕೊಂಡಿದ್ದು, ನೂತನವಾಗಿ ಸಂಪುಟ ಪ್ರವೇಶಿಸಿದ ಇಪ್ಪತ್ತೆಂಟು ಶಾಸಕರಿಗೆ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಪ್ರಮಾಣ ವಚನ ಬೋಧಿಸಿದ್ದಾರೆ.

TIMESOFINDIA.COM 2 Jul 2020, 3:14 pm
ಭೋಪಾಲ್: ಮಧ್ಯಪ್ರದೇಶದ ಬಿಜೆಪಿ ಸರ್ಕಾರ 28 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡುವ ಮೂಲಕ ಸಂಪುಟವನ್ನು ವಿಸ್ತರಿಸಿಕೊಂಡಿದೆ.
Vijaya Karnataka Web MADHYA PRADESH


ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಗುರುವಾರ ನೂತನ ಇಪ್ಪತ್ತೆಂಟು ಶಾಸಕರನ್ನು ತನ್ನ ಸಂಪುಟಕ್ಕೆ ಸೇರಿಸಿಕೊಂಡಿದ್ದು, ಆ ಪೈಕಿ ಕಾಂಗ್ರೆಸ್‌ನಿಂದ ಬಂಡಾಯವೆದ್ದವರಲ್ಲಿ ಪ್ರಮುಖರಾಗಿದ್ದ ಯಶೋಧರಾ ರಾಜೇ ಸಿಂಧ್ಯಾ ಮತ್ತು ಗೋಪಾಲ್ ಭಾರ್ಗವ ಪ್ರಮುಖರಾಗಿದ್ದಾರೆ.

ಮೋದಿ, ಅಮಿತ್‌ ಶಾ ದೇಶ ಹಾಳು ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಕಿಡಿ

ಈ ಹಿಂದೆ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿತ್ತು. ಆದರೆ ಬಿಜೆಪಿ ಆಪರೇಷನ್ ಕಮಲ ಮಾಡುವ ಮೂಲಕ ಕಾಂಗ್ರೆಸ್‌ನ 22 ಶಾಸಕರನ್ನು ತನ್ನೆಡೆಗೆ ಸೆಳೆದುಕೊಂಡಿತ್ತು. ಕಳೆದ ಮಾರ್ಚ್‌ನಲ್ಲಿ ಇಪ್ಪತ್ತೆರಡು ಕಾಂಗ್ರೆಸ್‌ ಶಾಸಕರು ಪಕ್ಷ ತೊರೆಯುತ್ತಿದ್ದಂತೆ ಕಮಲ್‌ನಾಥ್ ಸರ್ಕಾರ ಪತನಗೊಂಡಿತ್ತು.

ಕಳೆದ ಮಾರ್ಚ್‌ 23 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಶಿವರಾಜ್ ಸಿಂಗ್ ಚೌಹಾಣ್, ಏಪ್ರಿಲ್ 21ಕ್ಕೆ ಐವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಆ ವೇಳೆ ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಆಪ್ತರಾಗಿದ್ದ ತುಳಸಿ ಸಿಲಾವತ್ ಮತ್ತು ಗೋವಿಂದ್ ಸಿಂಗ್ ರಜಪೂತ್ ಸಂಪುಟಕ್ಕೆ ಸೇರಿದ್ದರು. ಇಂದು ಕೂಡ ಹೊಸದಾಗಿ ಸಂಪುಟ ಸೇರಿದವರ ಪೈಕಿ ಜ್ಯೋತಿರಾದಿತ್ಯ ಸಿಂಧ್ಯಾ ಅವರಿಗೆ ಆಪ್ತರಾಗಿರುವ ಹನ್ನೆರಡು ಶಾಸಕರು ಇದ್ದಾರೆ.

ಐದು ಬೆರಳು ಒಂದಾದರೆ ಹಸ್ತ ಬಲಾಢ್ಯ: ಇದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮಂತ್ರ

ನೂತನವಾಗಿ ಸಂಪುಟ ಸೇರಿದ ಸಚಿವರಿಗೆ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಪ್ರಮಾಣ ವಚನ ಬೋಧಿಸಿದ್ದಾರೆ. ನೂತನ ಸಚಿವರ ಪೈಕಿ ಇಪ್ಪತ್ತು ಮಂದಿ ಸಂಪುಟ ದರ್ಜೆಯ ಸಚಿವರಾದರೆ, ಎಂಟು ಮಂದಿ ರಾಜ್ಯ ಸಚಿವರಾಗಿದ್ದಾರೆ.

ಗಣೇಶನ ಹಬ್ಬಕ್ಕೂ ವಿಘ್ನವಾದ ಕೊರೊನಾ, ಮುಂಬಯಿನ ಸುಪ್ರಸಿದ್ದ ಗಣೇಶೋತ್ಸವ ಕ್ಯಾನ್ಸಲ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ