ಆ್ಯಪ್ನಗರ

ಹಸುಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ್ದವನಿಗೆ 51 ದಿನದಲ್ಲೇ ಗಲ್ಲು ಶಿಕ್ಷೆ

ಹನುಮಕೊಂಡ ಪೊಲೀಸರು ಒಂದು ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ವಾರಂಗಲ್‌ನ ಪ್ರಥಮ ದರ್ಜೆ ಹೆಚ್ಚುವರಿ ಸೆಷೆನ್ಸ್‌ ಕೋರ್ಟ್‌ನಲ್ಲಿ ಆರೋಪಪಟ್ಟಿ ದಾಖಲಿಸಿದ್ದರು.

PTI 9 Aug 2019, 5:00 am
ಹೈದರಾಬಾದ್‌: ಒಂಬತ್ತು ತಿಂಗಳ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಯುವಕನಿಗೆ ತೆಲಂಗಾಣದ ಅಧೀನ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ.
Vijaya Karnataka Web telangana

ವಾರಂಗಲ್‌ ಜಿಲ್ಲೆ ಹನುಮಕೊಂಡದ ಪ್ರವೀಣ್‌ (25) ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಕುಡಿದ ಅಮಲಿನಲ್ಲಿ ಈತ ಎರಡು ತಿಂಗಳ ಹಿಂದೆ ಟೆರೇಸ್‌ ಮೇಲೆ ತಾಯಿ ಪಕ್ಕದಲ್ಲಿ ಮಲಗಿದ್ದ ಹಸುಳೆಯನ್ನು ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ನಂತರ ಕೃತ್ಯ ಬೆಳಕಿಗೆ ಬರಬಹುದೆಂಬ ಅಂಜಿಕೆಯಿಂದ ಕೊಲೆ ಮಾಡಿದ್ದ. ಸ್ಥಳೀಯರಿಗೆ ವಿಷಯ ತಿಳಿದ ಬಳಿಕ ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಘಟನೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆದಿತ್ತು.

ಹನುಮಕೊಂಡ ಪೊಲೀಸರು ಒಂದು ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ ವಾರಂಗಲ್‌ನ ಪ್ರಥಮ ದರ್ಜೆ ಹೆಚ್ಚುವರಿ ಸೆಷೆನ್ಸ್‌ ಕೋರ್ಟ್‌ನಲ್ಲಿ ಆರೋಪಪಟ್ಟಿ ದಾಖಲಿಸಿದ್ದರು. ಆರೋಪಿ ಪರ ವಕಾಲತು ವಹಿಸದಿರಲು ಜಿಲ್ಲಾ ಬಾರ್‌ ಅಸೋಸಿಯೇಷನ್‌ ತೀರ್ಮಾನಿಸಿತ್ತು. ಜೂನ್‌ 24ರಂದು ವಿಚಾರಣೆ ಆರಂಭಿಸಿದ್ದ ನ್ಯಾಯಾಲಯವು ಗುರುವಾರ ಮರಣ ದಂಡನೆಯ ಶಿಕ್ಷೆ ಪ್ರಕಟಿಸಿತು. ಘಟನೆ ನಡೆದು 51 ದಿನಗಳಲ್ಲಿಯೇ ತೀರ್ಪು ಹೊರಬಿದ್ದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ