ಆ್ಯಪ್ನಗರ

ಅಡುಗೆ ಜಗಳ: ಬಾಯ್‌ಫ್ರೆಂಡ್‌ನ ಕೊಂದೇ ಬಿಟ್ಳು...!

ರಾತ್ರಿ ಅಡುಗೆ ಯಾರು ಮಾಡುವುದು ಎಂಬ ವಿಚಾರದಲ್ಲಿ ಆರಂಭವಾದ ಜಗಳ ಪ್ರಿಯಕರನ ಹತ್ಯೆಯೊಂದಿಗೆ ಅಂತ್ಯವಾದ ಘಟನೆ ದಿಲ್ಲಿಯ ಉತ್ತಮ್‌ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 21 Aug 2017, 5:07 pm
ಹೊಸದಿಲ್ಲಿ: ರಾತ್ರಿ ಅಡುಗೆ ಯಾರು ಮಾಡುವುದು ಎಂಬ ವಿಚಾರದಲ್ಲಿ ಆರಂಭವಾದ ಜಗಳ ಪ್ರಿಯಕರನ ಹತ್ಯೆಯೊಂದಿಗೆ ಅಂತ್ಯವಾದ ಘಟನೆ ದಿಲ್ಲಿಯ ಉತ್ತಮ್‌ ನಗರದಲ್ಲಿ ಶನಿವಾರ ರಾತ್ರಿ ನಡೆದಿದೆ.
Vijaya Karnataka Web 28 year old kills boyfriend over who will cook
ಅಡುಗೆ ಜಗಳ: ಬಾಯ್‌ಫ್ರೆಂಡ್‌ನ ಕೊಂದೇ ಬಿಟ್ಳು...!


ನೈಜೀರಿಯಾ ಪ್ರಜೆಗಳಾದ ಈಝು ಹಾಗೂ ಎಲ್ವಿ ಉಜಮ್ಮಾ ನಡುವೆ ಅಡುಗೆ ವಿಚಾರದಲ್ಲಿ ಗಲಾಟೆಯಾಗಿದ್ದು, ಅಂತಿಮವಾಗಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಪ್ರಿಯಕರನಿಗೆ ಬೆದರಿಸುವ ಸಲುವಾಗಿ ಎಲ್ವಿ ಚೂರಿ ಹಿಡಿದು ಆತನಿಗೆ ಇರಿದಿದ್ದಾಳೆ, ಗಾಯಗೊಂಡ ಈಝು ಅಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ವಿ ಉಜಮ್ಮಾ ನುಡುವೆ ಶನಿವಾರ ಮುಂಜಾನೆಯಿಂದಲೂ ಗಲಾಟೆ ನಡೆಯುತ್ತಿತ್ತು, ಸಂಜೆ ವೇಳೆ ಇಬ್ಬರ ಗಲಾಟೆ ತಾರಕಕ್ಕೇರಿದ್ದು, ನೆರೆ ಮನೆಯವರು ಸೇರಿ ಇಬ್ಬರಿಗೂ ಸಮಾಧಾನ ಮಾಡಿ ಕಳುಹಿಸಿದ್ದರು ಎನ್ನಲಾಗಿದೆ. ಆದರೆ ಕೆಲವೇ ಗಂಟೆಯ ಬಳಿಕ ಮತ್ತೆ ಅಡುಗೆ ವಿಚಾರದಲ್ಲಿ ಗಲಾಟೆ ಆರಂಭವಾಗಿದೆ. ಇಝುವನ್ನು ಬೆದರಿಸಲು ಚೂರಿಯಲ್ಲಿ ಇರಿದಿರುವ ಎಲ್ವಿ ಬಳಿಕ ಆತನಿಂದ ಓಡಿಹೋಗಿ ಕೋಣೆಯೊಂದರಲ್ಲಿ ಅವಿತುಕೊಂಡಿದ್ದಾಳೆ. ಕೆಲ ಸಮಯದ ಬಳಿಕ ಆತನನ್ನು ನೋಡಲು ತೆರಳಿದ ವೇಳೆ ಗಂಡ ರಕ್ತಸಿಕ್ತವಾಗಿ ಬಿದ್ದಿರುವುದನ್ನು ಗಮನಿಸಿ ಕೂಡಲೇ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ. ಆದರೆ ಇಷ್ಟೊತ್ತಿಗಾಗಲೇ ಈಝು ಮೃತಪಟ್ಟಿದ್ದಾನೆ.

ಗಂಡನ ಮರಣದ ಬಳಿಕ ಕೋಣೆಯಲ್ಲಿ ಕುಳಿತುಕೊಂಡ ಎಲ್ವಿ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ, ಪ್ರಕರಣ ದಾಖಲಿಸಿರುವ ಪೊಲೀಸರು ಎಲ್ವಿ ಉಜಮ್ಮಾಳನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ