ಆ್ಯಪ್ನಗರ

ಮಹಿಳೆ ಮೇಲೆ ಹಲ್ಲೆ: ಮೂವರು ಎಎಪಿ ಶಾಸಕರ ವಿರುದ್ಧ ಕೇಸ್ ದಾಖಲು

ವಿಧಾನಸಭೆ ಆವರಣದಲ್ಲಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಮೂವರು ಶಾಸಕರ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 6 Jul 2017, 6:34 pm
ಹೊಸದಿಲ್ಲಿ: ವಿಧಾನಸಭೆ ಆವರಣದಲ್ಲಿ ಮಹಿಳೆಯೊಬ್ಬರ ಜತೆ ಅಸಭ್ಯವಾಗಿ ವರ್ತಿಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಮೂವರು ಶಾಸಕರ ವಿರುದ್ಧ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Vijaya Karnataka Web 3 aap mlas booked for assaulting woman in assembly premises
ಮಹಿಳೆ ಮೇಲೆ ಹಲ್ಲೆ: ಮೂವರು ಎಎಪಿ ಶಾಸಕರ ವಿರುದ್ಧ ಕೇಸ್ ದಾಖಲು


ಒಖ್ಲಾ ಎಎಪಿ ಶಾಸಕ ಅಮಾನತುಲ್ಲಾ ಖಾನ್, ಮಲ್ವಿಯಾ ನಗರ್ ಶಾಸಕ ಸೋಮನಾಥ್ ಭಾರ್ತಿ ಹಾಗೂ ತಿಲಕ್ ನಗರ್ ಶಾಸಕ ಜರ್ನೈಲ್ ಸಿಂಗ್ ಅವರು ಜೂನ್ 28ರಂದು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಹಿಳ ದೂರು ನೀಡಿದ್ದರು.

'ನಾನು ವಿಧಾನಸಭೆ ಕಲಾಪ ನೋಡಲು ವೀಕ್ಷಿಸಲು ಆಗಮಿಸಿಗ್ಗೆ. ಆದರೆ, ಪ್ರೇಕ್ಷಕರ ಗ್ಯಾಲರಿಗೆ ತೆರಳಲು ಪಾಸ್ ದೊರೆಯದ ಕಾರಣ ವಿಧಾನಸಭೆಯ ಆವರಣದಲ್ಲಿ ನಿಂತಿದ್ದೆ. ಈ ವೇಳೆ ನನ್ನ ಬಳಿ ಬಂದ ಗುಂಪೊಂದು ಕೋಣೆಗೆ ಕರೆದು ಹಲ್ಲೆ ನಡೆಸಿದೆ' ಎಂದು ಮಹಿಳೆ ಆರೋಪಿಸಿದ್ದಾರೆ.

ಎಎಪಿ ಪಕ್ಷದ 15 ಶಾಸಕರನ್ನು ಬಂಧಿಸಿರುವುದು ಆಶ್ಚರ್ಯ ತಂದಿದೆ. ಇದು ಕೇಂದ್ರ ಸರಕಾರದ ಪಿತೂರಿ ರಾಜಕಾರಣ ಎಂದು ಎಎಪಿ ಪಕ್ಷದ ವಕ್ತಾರ ಸೌರಭ ಭಾರದ್ವಜ್ ಗಂಭೀರವಾಗಿ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ