ಅಲಿಗಢ: ಹುತಾತ್ಮರ ದಿನವಾದ ಬುಧವಾರ ಉತ್ತರಪ್ರದೇಶದಲ್ಲಿ ಮಹಾತ್ಮ ಗಾಂಧಿ ಪ್ರತಿಕೃತಿಗೆ ಗುಂಡಿಕ್ಕಿ ಗಾಂಧಿ ಹತ್ಯೆ ಘಟನೆಯನ್ನು ಮರುಸೃಷ್ಟಿ ಮಾಡಿ ಸಂಭ್ರಮಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ನೇತೃತ್ವದ ತಂಡ ಬುಧವಾರ ಈ ಕೃತ್ಯ ಎಸಗಿತ್ತು. ಖುದ್ದು ಪೂಜಾ ಅವರು ಗಾಂಧಿ ಪ್ರತಿಕೃತಿಗೆ ಮೂರು ಬಾರಿ ಗುಂಡು ಹೊಡೆದು, ನಂತರ ಸುಟ್ಟು ಹಾಕಿದ್ದರು. ನೌರಂಗಾಬಾದ್ ಪ್ರದೇಶದಲ್ಲಿನ ಹಿಂದೂ ಮಹಾಸಭಾ ಕಚೇರಿ ಹೊರಗಡೆ ಈ ಘಟನೆ ನಡೆದಿತ್ತು. ಇದರ ವಿಡಿಯೊ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ವಿವಾದ ಸೃಷ್ಟಿಯಾಗುತ್ತಿದ್ದಂತೆಯೇ ಪೊಲೀಸರು 13 ಮಂದಿ ವಿರುದ್ಧ ದೂರು ದಾಖಲಿಸಿ, ಬಂಧನಕ್ಕಾಗಿ ಶೋಧ ನಡೆಸಿದ್ದರು.
ಗಾಂಧಿ ಪ್ರತಿಕೃತಿಗೆ ಗುಂಡು ಹಾರಿಸಿದ ಮೂವರ ಬಂಧನ
ಖುದ್ದು ಪೂಜಾ ಅವರು ಗಾಂಧಿ ಪ್ರತಿಕೃತಿಗೆ ಮೂರು ಬಾರಿ ಗುಂಡು ಹೊಡೆದು, ನಂತರ ಸುಟ್ಟು ಹಾಕಿದ್ದರು. ನೌರಂಗಾಬಾದ್ ಪ್ರದೇಶದಲ್ಲಿನ ಹಿಂದೂ ಮಹಾಸಭಾ ಕಚೇರಿ ಹೊರಗಡೆ ಈ ಘಟನೆ ನಡೆದಿತ್ತು.
Vijaya Karnataka 1 Feb 2019, 5:00 am