ಆ್ಯಪ್ನಗರ

ನಕ್ಸಲ್‌ ಎನ್‌ಕೌಂಟರ್‌: ರಾಜ್ಯದ ಯೋಧ ಸಹಿತ ಮೂವರು ಬಲಿ

ಮಹಾದೇವ ಅವರ ಪಾರ್ಥಿವ ಶರೀರ ಶನಿವಾರ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಲಿದೆ. ಅಲ್ಲಿಂದ ರಸ್ತೆ ಮೂಲಕ ಮರಗುತ್ತಿ ಗ್ರಾಮಕ್ಕೆ ತಲುಪಲಿದೆ ಎಂದು ಎಸ್ಪಿ ಮಾರ್ಟಿನ್‌ ತಿಳಿಸಿದ್ದಾರೆ.

PTI 29 Jun 2019, 5:00 am
ರಾಯ್‌ಪುರ/ಕಲಬುರಗಿ: ಛತ್ತೀಸ್‌ಗಢದ ಬಿಜಾಪುರದಲ್ಲಿ ಶುಕ್ರವಾರ ನಕ್ಸಲರೊಂದಿಗೆ ನಡೆದ ಎನ್‌ಕೌಂಟರ್‌ ವೇಳೆ ಕಲಬುರಗಿ ಮೂಲದ ಸಿಆರ್‌ಪಿಎಫ್‌ ಸಬ್‌ ಇನ್ಸ್‌ಪೆಕ್ಟರ್‌ ಪಿ.ಮಹಾದೇವ(50) ಸೇರಿದಂತೆ ಮೂವರು ಸಿಆರ್‌ಪಿಎಫ್‌ ಯೋಧರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಮದನ್‌ ಪಾಲ್‌ ಸಿಂಗ್‌ (52) ಹಾಗೂ ಕೇರಳದ ಸಾಜು.ಒ.ಪಿ(47) ಗುಂಡಿಗೆ ಬಲಿಯಾದ ಇತರ ಇಬ್ಬರು ಯೋಧರು.
Vijaya Karnataka Web 3 crpf jawans killed in encounter with naxals in chhattisgarhs bijapur
ನಕ್ಸಲ್‌ ಎನ್‌ಕೌಂಟರ್‌: ರಾಜ್ಯದ ಯೋಧ ಸಹಿತ ಮೂವರು ಬಲಿ

ಪಿಆರ್‌ಪಿಎಫ್‌ನಲ್ಲಿ ಕಳೆದ 29 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಮದ ಮಹಾದೇವ ಪಾಟೀಲ್‌ (50) ಇತ್ತೀಚೆಗೆ ಎಸ್‌ಐ ಹುದ್ದೆಗೆ ಪದೋನ್ನತಿ ಹೊಂದಿದ್ದರು.
ಏನಾಯಿತು?: ಶುಕ್ರವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ಬಿಜಾಪುರದ ಕೇಶ್‌ಕುತುಲ್‌ ಗ್ರಾಮದಲ್ಲಿ ಸಿಆರ್‌ಪಿಎಫ್‌ನ ಯೋಧರು ಮತ್ತು ಪೊಲೀಸರು ಬೈಕ್‌ನಲ್ಲಿ ಗಸ್ತು ತಿರುಗುತ್ತಿದ್ದಾಗ ನಕ್ಸಲರು ಬೈಕ್‌ಗಳನ್ನು ಸುತ್ತುವರಿದು ಗುಂಡು ಹಾರಿಸಿದರು. ತೀವ್ರ ಗುಂಡಿನ ಚಕಮಕಿ ನಡೆದು ಮೂವರು ಯೋಧರು ಮೃತಪಟ್ಟರೆ ನಕ್ಸಲರು ಅರಣ್ಯದಲ್ಲಿ ಕಣ್ಮರೆಯಾದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿ ವೇಳೆ ಮಾರ್ಗದಲ್ಲಿ ಸರಕು ಸಾಗಣೆ ವಾಹನವೊಂದು ತೆರಳುತ್ತಿತ್ತು. ಅದರಲ್ಲಿದ್ದ ಇಬ್ಬರು ಬಾಲಕಿಯರಿಗೆ ಗುಂಡು ತಗುಲಿದೆ. ಒಬ್ಬಾಕೆ ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಬ್ಬಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ದಾಳಿ ನಡೆದ ಸ್ಥಳದಲ್ಲಿ ನಂತರ ನಡೆಸಲಾದ ಶೋಧಕಾರ್ಯದಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸಿಕ್ಕಿದೆ. ಸಿಆರ್‌ಪಿಎಫ್‌ ಸಿಬ್ಬಂದಿ ಬಳಿಯಿದ್ದ ಬುಲೆಟ್‌ ಪ್ರೂಫ್‌ ಜಾಕೆಟ್‌ಗಳು, ಎಕೆ-47 ರೈಫಲ್‌ಗಳನ್ನು ನಕ್ಸಲರು ಹೊತ್ತೊಯ್ದಿದ್ದಾರೆ ಎಂದು ಪಟೇಲ್‌ ತಿಳಿಸಿದ್ದಾರೆ.
ಇಂದು ಅಂತ್ಯಕ್ರಿಯೆ: ಮಹಾದೇವ ಅವರ ಪಾರ್ಥಿವ ಶರೀರ ಶನಿವಾರ ಹೈದರಾಬಾದ್‌ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಲಿದೆ. ಅಲ್ಲಿಂದ ರಸ್ತೆ ಮೂಲಕ ಮರಗುತ್ತಿ ಗ್ರಾಮಕ್ಕೆ ತಲುಪಲಿದೆ ಎಂದು ಎಸ್ಪಿ ಮಾರ್ಟಿನ್‌ ತಿಳಿಸಿದ್ದಾರೆ. ಸಂಜೆ 4ರ ನಂತರ ಸಕಲ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ