ಆ್ಯಪ್ನಗರ

ಕಾಶ್ಮೀರ ಎನ್‌ಕೌಂಟರ್: 3 ಲಷ್ಕರ್ ಉಗ್ರರ ಹತ್ಯೆ

ಈ ವರ್ಷ ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯ ರೂವಾರಿಗಳು ಎಂದು ಭಾವಿಸಿರುವ ಮೂವರು ಲಷ್ಕರ್ ಉಗ್ರರನ್ನು ಮಂಗಳವಾರ ದಕ್ಷಿಣ ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

THE ECONOMIC TIMES 5 Dec 2017, 11:13 am
ಶ್ರೀನಗರ: ಈ ವರ್ಷ ಅಮರನಾಥ ಯಾತ್ರಿಕರ ಮೇಲೆ ನಡೆದ ದಾಳಿಯ ರೂವಾರಿಗಳು ಎಂದು ಭಾವಿಸಿರುವ ಮೂವರು ಲಷ್ಕರ್ ಉಗ್ರರನ್ನು ಮಂಗಳವಾರ ದಕ್ಷಿಣ ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಿಂದ ತಪ್ಪಿಸಿಕೊಂಡ ಮತ್ತೊಬ್ಬ ಉಗ್ರನನ್ನು ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯಲ್ಲಿನ ಮೆಟರ್ನಿಟಿ ಆಸ್ಪತ್ರೆಯೊಯಲ್ಲಿ ಬಂಧಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
Vijaya Karnataka Web 3 let militants killed in encounter in south kashmir
ಕಾಶ್ಮೀರ ಎನ್‌ಕೌಂಟರ್: 3 ಲಷ್ಕರ್ ಉಗ್ರರ ಹತ್ಯೆ


ಜಮ್ಮು-ಶ್ರೀನಗರ ಹೆದ್ದಾರಿ ಮೇಲೆ ಹೋಗುತ್ತಿದ್ದ ಆರ್ಮಿ ಬೆಂಗಾವಲು ಪಡೆ ಮೇಲೆ ಕಾಜಿಗಂಡ್ ಬಳಿ ಉಗ್ರರು ಗುಂಡಿನ ದಾಳಿ ನಡೆಸಿದಾಗ ಪ್ರತಿದಾಳಿಯಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾಗ ಈ ದಾಳಿ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ಸಂಜೆಯಿಂದ ಮಂಗಳವಾರ ಮುಂಜಾನೆವರೆಗೆಗೂ ಎನ್‍ಕೌಂಟರ್ ನಡೆದಿದೆ. ಮೃತಪಟ್ಟ ಉಗ್ರರನ್ನು ಯಾವರ್ ಬಾಸಿರ್, ಅಬು ಫರ್ಖಾನ್, ಅಬು ಮವಿಯಾ (ಇವರಿಬ್ಬರೂ ವಿದೇಶಿ ಉಗ್ರರು) ಎಂದು ಗುರುತಿಸಲಾಗಿದೆ. ಕುಲ್‍ಗಾಂನ ಹಬೀಶ್‌ ಮೂಲದವ ಬಾಸಿರ್. ಪೊಲೀಸರಿಂದ ಆಯುಧವನ್ನು ಅಪಹರಿಸಿಕೊಂಡಿದ್ದ ಕಾರಣ ಈ ವರ್ಷ ಫೆಬ್ರವರಿಯಲ್ಲಿ ಲಷ್ಕರ್ ಇ ತಯ್ಬಾ ಉಗ್ರ ಸಂಘಟನೆ ಸೇರಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ