ಆ್ಯಪ್ನಗರ

ಪನ್ಸಾರೆ ಹತ್ಯೆ: ಮಿಸ್ಕಿನ್‌ ಸೇರಿ ಮೂವರು ಎಸ್‌ಐಟಿ ವಶಕ್ಕೆ

ಈ ಪ್ರಕರಣದಲ್ಲಿ ಇದುವರೆಗೂ ಬಂಧಿತರಾದವರ ಸಂಖ್ಯೆ 12ಕ್ಕೆ ಏರಿದೆ. ಸಚಿನ್‌ ಅಂದುರೆ, ಅಮಿತ್‌ ಬಡ್ಡಿ ಹಾಗೂ ಹುಬ್ಬಳ್ಳಿಯ ಗಣೇಶ್‌ ಮಿಸ್ಕಿನ್‌ ಬಂಧಿತರು. ಈ ಪೈಕಿ ಅಮಿತ್‌ ಮತ್ತು ಗಣೇಶ್‌ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲೂ ಶಂಕಿತ ಆರೋಪಿಗಳು.

PTI 7 Sep 2019, 5:00 am
ಮುಂಬಯಿ: ವಿಚಾರವಾದಿ ಗೋವಿಂದ್‌ ಪನ್ಸಾರೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಐಡಿಯ ವಿಶೇಷ ತನಿಖಾ ತಂಡ ಇನ್ನೂ ಮೂವರು ಶಂಕಿತರನ್ನು ಶುಕ್ರವಾರ ಬಂಧಿಸಿದೆ. ಇದರೊಂದಿಗೆ ಈ ಪ್ರಕರಣದಲ್ಲಿ ಇದುವರೆಗೂ ಬಂಧಿತರಾದವರ ಸಂಖ್ಯೆ 12ಕ್ಕೆ ಏರಿದೆ. ಸಚಿನ್‌ ಅಂದುರೆ, ಅಮಿತ್‌ ಬಡ್ಡಿ ಹಾಗೂ ಹುಬ್ಬಳ್ಳಿಯ ಗಣೇಶ್‌ ಮಿಸ್ಕಿನ್‌ ಬಂಧಿತರು. ಈ ಪೈಕಿ ಅಮಿತ್‌ ಮತ್ತು ಗಣೇಶ್‌ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದಲ್ಲೂ ಶಂಕಿತ ಆರೋಪಿಗಳು. ಇವರೆಲ್ಲರೂ ಈಗಾಗಲೇ ಬೇರೆ ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಮುಂಬಯಿ ಹಾಗೂ ಪುಣೆ ಜೈಲುಗಳಲ್ಲಿದ್ದರು. ಈಗ ಅವರನ್ನು ಪನ್ಸಾರೆ ಪ್ರಕರಣದಲ್ಲಿ ಔಪಚಾರಿಕವಾಗಿ ರಾಜ್ಯ ಸಿಐಡಿಯ ಎಸ್‌ಐಟಿ ಶುಕ್ರವಾರ ಬಂಧಿಸಿದೆ. ಶಾರ್ಪ್‌ ಶೂಟರ್‌ ಎಂದು ಹೇಳಲಾದ ಅಂದುರೆಯನ್ನು ಮತ್ತೊಬ್ಬ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದಲ್ಲಿ ಈ ಹಿಂದೆ ಬಂಧಿಸಲಾಗಿತ್ತು. ಆತ ಪುಣೆಯ ಯೆರವಾಡ ಜೈಲಿನಲ್ಲಿದ್ದ. ಅತ್ತ ಬಡ್ಡಿ ಹಾಗೂ ಮಿಸ್ಕಿನ್‌ ಇಬ್ಬರೂ ಮುಂಬೈಯ ಆರ್ಥರ್‌ ರೋಡ್‌ ಜೈಲಿನಲ್ಲಿದ್ದರು. ಮಹಾರಾಷ್ಟ್ರದ ನಲ್ಲಸೋಪಾರದಲ್ಲಿ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಪ್ರಕರಣದಲ್ಲೂ ಅಮಿತ್‌ ಮತ್ತು ಮಿಸ್ಕಿನ್‌ ಅರೋಪಿಗಳು.
Vijaya Karnataka Web Pansare

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ