ಆ್ಯಪ್ನಗರ

ಮೊಬೈಲ್ ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ಬೆನ್ನಟ್ಟಿ ಹಿಡಿದ ಧೀರ ಮಹಿಳೆ

ಸಿನಿಮೀಯ ರೀತಿಯ ಅಪರಾಧ ಘಟನೆಗೆ ಸಾಕೇಟ್ ಚಿತ್ರಮಂದಿರ ಬುಧವಾರ ಸಾಕ್ಷಿಯಾಯ್ತು.

TIMESOFINDIA.COM 5 Oct 2018, 11:29 am
ಹೊಸದಿಲ್ಲಿ: ಸಿನಿಮೀಯ ರೀತಿಯ ಅಪರಾಧ ಘಟನೆಗೆ ಬುಧವಾರ ಸಾಕೇಟ್ ಚಿತ್ರಮಂದಿರ ಸಾಕ್ಷಿಯಾಗಿತ್ತು. ಹೌದು, ತನ್ನ ಫೋನ್ ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ಧೀರ ಮಹಿಳೆಯೊಬ್ಬರು ಕಾಲರ್ ಹಿಡಿದು ಪೊಲೀಸ್ ಠಾಣೆಗೆ ಕರೆತಂದ ಸಾಹಸಮಯ ಘಟನೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದಿದೆ.
Vijaya Karnataka Web police2


ಚಿತ್ರಮಂದಿರದ ಬಳಿ ಸಕ್ರಿಯರಾಗಿದ್ದ ಮೂವರು ಖದೀಮರು, ಮಹಿಳೆಯರನ್ನೇ ಟಾರ್ಗೆಟ್ ಮಾಡುವ ಮೂಲಕ ಅವರ ಬಳಿ ಇರುವ ಅಮೂಲ್ಯ ವಸ್ತುಗಳನ್ನು ದೋಚಿ ಪರಾರಿಯಾಗುವ ಪ್ರವೃತ್ತಿ ಬೆಳೆಸಿಕೊಂಡಿದ್ದರು. ಬೈಕ್ ಮೇಲೆ ಸುತ್ತುತ್ತಾ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಇವರು, ಮಹಿಳೆಯರನ್ನು ಒದ್ದು, ಅವರ ಬಳಿಯಿರುವ ಅಮೂಲ್ಯ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ.

ಇದೇ ರೀತಿ ಮಂಗಳವಾರ ರಾತ್ರಿ 12.30ರ ಸುಮಾರಿಗೆ ಶಿವಾನಿ ಚಕ್ರವರ್ತಿ ಎಂಬ ಮಹಿಳೆಯನ್ನು ಖದೀಮರು ಟಾರ್ಗೆಟ್ ಮಾಡಿದ್ದು, ತಾವು ಹೂಡಿದ್ದ ಖೆಡ್ಡಾಗೆ ತಾವೇ ಬಿದ್ದಿದ್ದಾರೆ. ಹೌದು, ಕಳ್ಳರು ಶಿವಾನಿ ಬಳಿ ಇದ್ದ ಮೊಬೈಲ್ ಫೋನ್ ಕಸಿದು ಪರಾರಿಯಾಗುತ್ತಿದ್ದರು. ಈ ಸಂದರ್ಭದಲ್ಲಿ ಧೀರ ಮಹಿಳೆ ಶಿವಾನಿ ಕಳ್ಳರ ಪೈಕಿ ಓರ್ವನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸುವ ಮೂಲಕ ಮಹಿಳಾ ಮಣಿಗಳಿಗೆ ಮಾದರಿಯಾಗಿದ್ದಾರೆ.

ಶಿವಾನಿ ಅವರ ಧೈರ್ಯ ಹಾಗೂ ಸಾಹಸಕ್ಕೆ ಮೆಚ್ಚಿದ ದಿಲ್ಲಿ ಪೊಲೀಸರು, ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಿದ್ದಾರೆ.

ಬಂಧಿತನಿಂದ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಘಟನೆ ಸಂಬಂಧ ಸಾಕೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯ ಮಾಹಿತಿ ಮೇರೆಗೆ ಇನ್ನಿಬ್ಬರು ಖದೀಮರಾದ ಬಿಂಟೊ ಹಾಗೂ ಹರೀಶ್ ಎಂಬಾತನನ್ನು ಬಂಧಿಸಲಾಗಿದೆ.

ಈ ಖದೀಮರು ದಿಲ್ಲಿಯಲ್ಲಿ ನಡೆದ ಹಲವು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ