ಲಖನೌ: ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮತ್ತೊಂದು ಹೊಡೆತ ಬಿದ್ದಿದೆ. ಯೋಗಿ ಆದಿತ್ಯನಾಥ್ ಸಂಪುಟದ ಸದಸ್ಯ, ಇನ್ನೊಬ್ಬ ಒಬಿಸಿ ಮುಖಂಡ ಧರಮ್ ಸಿಂಗ್ ಸೈನಿ, ರಾಜ್ಯ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ಸಹರಾನ್ಪುರ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಸೈನಿ, ಕಳೆದ ಮೂರು ದಿನಗಳಲ್ಲಿ ರಾಜೀನಾಮೆ ನೀಡಿರುವ ಮೂರನೇ ಸಚಿವರಾಗಿದ್ದಾರೆ. ಹಾಗೆಯೇ ಮಹತ್ವದ ವಿಧಾನಸಭೆ ಚುನಾವಣೆಗೂ ಮುನ್ನ ಆಡಳಿತಾರೂಢ ಬಿಜೆಪಿಗೆ ಆಘಾತ ನೀಡಿರುವ ಎಂಟನೇ ಶಾಸಕರಾಗಿದ್ದಾರೆ.
ಮಂಗಳವಾರ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿಂದುಳಿದ ವರ್ಗಗಳ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ 2016ರಲ್ಲಿ ಬಹುಜನ ಸಮಾಜ ಪಕ್ಷ ತೊರೆದು ಸೈನಿ ಅವರೂ ಬಿಜೆಪಿ ಸೇರ್ಪಡೆಯಾಗಿದ್ದರು. ಒಬಿಸಿ ಮುಖಂಡ ದಾರಾ ಸಿಂಗ್ ಚೌಹಾಣ್ ಅವರು ಬುಧವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
'ಅದು ಬೂಟು ನೆಕ್ಕುವವರ ಪಕ್ಷ': ಬಿಜೆಪಿ ಸೇರ್ಪಡೆಯಾದ ಎಸ್ಪಿ ಶಾಸಕ ಕಿಡಿ
ಧರಮ್ ಸಿಂಗ್ ಸೈನಿ ಅವರು ರಾಜ್ಯ ಸರ್ಕಾರ ತಮಗೆ ನೀಡಿದ್ದ ಭದ್ರತಾ ಸೌಲಭ್ಯ ಮತ್ತು ನಿವಾಸವನ್ನು ಬುಧವಾರ ಮರಳಿಸಿದ್ದರು. ಇದರಿಂದ ಅವರೂ ಪಕ್ಷ ತೊರೆಯುವ ಸೂಚನೆ ದೊರಕಿತ್ತು. ಅವರು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತದ ಸ್ವತಂತ್ರ ರಾಜ್ಯ ಖಾತೆಯನ್ನು ನಿರ್ವಹಿಸುತ್ತಿದ್ದರು.
ತಮ್ಮ ರಾಜೀನಾಮೆ ವೇಳೆಯೇ ಮೌರ್ಯ ಅವರು, ಇನ್ನೂ ಅನೇಕ ನಾಯಕರು ತಮ್ಮನ್ನು ಹಿಂಬಾಲಿಸಲಿದ್ದಾರೆ ಎಂದು ಹೇಳಿದ್ದರು. ದಲಿತರು, ಹಿಂದುಳಿದವರು, ನಿರುದ್ಯೋಗಿ ಯುವಜನರು ಮತ್ತು ಸಣ್ಣ ವ್ಯಾಪಾರಿಗಳನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದರು. ದಾರಾ ಸಿಂಗ್ ಚೌಹಾಣ್ ಕೂಡ ಬಿಜೆಪಿ ಸರ್ಕಾರದಲ್ಲಿ ಐದು ವರ್ಷ ಬದ್ಧತೆಯಿಂದ ತಾವು ಕೆಲಸ ಮಾಡಿದ್ದರೂ ದಲಿತರು, ಒಬಿಸಿ ಹಾಗೂ ನಿರುದ್ಯೋಗಿ ಯುವಜನರಿಗೆ ನ್ಯಾಯ ದೊರಕಿರಲಿಲ್ಲ ಎಂದು ಆರೋಪಿಸಿದ್ದರು.
ಉ.ಪ್ರ ಬಿಜೆಪಿಗೆ ಮರ್ಮಾಘಾತ: 24 ಗಂಟೆಯಲ್ಲಿ ಎರಡನೇ ಸಚಿವ ರಾಜೀನಾಮೆ; ಪಕ್ಷ ಬಿಟ್ಟವರ ಸಂಖ್ಯೆ 6 ಕ್ಕೆ ಏರಿಕೆ
ಯೋಗಿ ಆದಿತ್ಯನಾಥ್ ಸಂಪುಟದಿಂದ ಪ್ರತಿ ದಿನ ಒಬ್ಬರು ಅಥವಾ ಇಬ್ಬರು ಸಚಿವರು ರಾಜೀನಾಮೆ ನೀಡಲಿದ್ದಾರೆ. ಜನವರಿ 20ರ ವೇಳೆಗೆ ಈ ಸಂಖ್ಯೆ 18ಕ್ಕೆ ಏರಿಕೆಯಾಗಲಿದೆ ಎಂದು ಎಸ್ಬಿಎಸ್ಪಿ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಬರ್ ಹೇಳಿದ್ದರು. ಅವರು ಸಮಾಜವಾದಿ ಪಕ್ಷದ ಜತೆಗೆ 2022ರ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದಾರೆ.
ಮಂಗಳವಾರ ರಾಜ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿಂದುಳಿದ ವರ್ಗಗಳ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ 2016ರಲ್ಲಿ ಬಹುಜನ ಸಮಾಜ ಪಕ್ಷ ತೊರೆದು ಸೈನಿ ಅವರೂ ಬಿಜೆಪಿ ಸೇರ್ಪಡೆಯಾಗಿದ್ದರು. ಒಬಿಸಿ ಮುಖಂಡ ದಾರಾ ಸಿಂಗ್ ಚೌಹಾಣ್ ಅವರು ಬುಧವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
'ಅದು ಬೂಟು ನೆಕ್ಕುವವರ ಪಕ್ಷ': ಬಿಜೆಪಿ ಸೇರ್ಪಡೆಯಾದ ಎಸ್ಪಿ ಶಾಸಕ ಕಿಡಿ
ಧರಮ್ ಸಿಂಗ್ ಸೈನಿ ಅವರು ರಾಜ್ಯ ಸರ್ಕಾರ ತಮಗೆ ನೀಡಿದ್ದ ಭದ್ರತಾ ಸೌಲಭ್ಯ ಮತ್ತು ನಿವಾಸವನ್ನು ಬುಧವಾರ ಮರಳಿಸಿದ್ದರು. ಇದರಿಂದ ಅವರೂ ಪಕ್ಷ ತೊರೆಯುವ ಸೂಚನೆ ದೊರಕಿತ್ತು. ಅವರು ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಆಯುಷ್, ಆಹಾರ ಭದ್ರತೆ ಮತ್ತು ಔಷಧ ಆಡಳಿತದ ಸ್ವತಂತ್ರ ರಾಜ್ಯ ಖಾತೆಯನ್ನು ನಿರ್ವಹಿಸುತ್ತಿದ್ದರು.
ತಮ್ಮ ರಾಜೀನಾಮೆ ವೇಳೆಯೇ ಮೌರ್ಯ ಅವರು, ಇನ್ನೂ ಅನೇಕ ನಾಯಕರು ತಮ್ಮನ್ನು ಹಿಂಬಾಲಿಸಲಿದ್ದಾರೆ ಎಂದು ಹೇಳಿದ್ದರು. ದಲಿತರು, ಹಿಂದುಳಿದವರು, ನಿರುದ್ಯೋಗಿ ಯುವಜನರು ಮತ್ತು ಸಣ್ಣ ವ್ಯಾಪಾರಿಗಳನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಅವರು ಆರೋಪಿಸಿದ್ದರು. ದಾರಾ ಸಿಂಗ್ ಚೌಹಾಣ್ ಕೂಡ ಬಿಜೆಪಿ ಸರ್ಕಾರದಲ್ಲಿ ಐದು ವರ್ಷ ಬದ್ಧತೆಯಿಂದ ತಾವು ಕೆಲಸ ಮಾಡಿದ್ದರೂ ದಲಿತರು, ಒಬಿಸಿ ಹಾಗೂ ನಿರುದ್ಯೋಗಿ ಯುವಜನರಿಗೆ ನ್ಯಾಯ ದೊರಕಿರಲಿಲ್ಲ ಎಂದು ಆರೋಪಿಸಿದ್ದರು.
ಉ.ಪ್ರ ಬಿಜೆಪಿಗೆ ಮರ್ಮಾಘಾತ: 24 ಗಂಟೆಯಲ್ಲಿ ಎರಡನೇ ಸಚಿವ ರಾಜೀನಾಮೆ; ಪಕ್ಷ ಬಿಟ್ಟವರ ಸಂಖ್ಯೆ 6 ಕ್ಕೆ ಏರಿಕೆ
ಯೋಗಿ ಆದಿತ್ಯನಾಥ್ ಸಂಪುಟದಿಂದ ಪ್ರತಿ ದಿನ ಒಬ್ಬರು ಅಥವಾ ಇಬ್ಬರು ಸಚಿವರು ರಾಜೀನಾಮೆ ನೀಡಲಿದ್ದಾರೆ. ಜನವರಿ 20ರ ವೇಳೆಗೆ ಈ ಸಂಖ್ಯೆ 18ಕ್ಕೆ ಏರಿಕೆಯಾಗಲಿದೆ ಎಂದು ಎಸ್ಬಿಎಸ್ಪಿ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಬರ್ ಹೇಳಿದ್ದರು. ಅವರು ಸಮಾಜವಾದಿ ಪಕ್ಷದ ಜತೆಗೆ 2022ರ ಚುನಾವಣೆಗೆ ಮೈತ್ರಿ ಮಾಡಿಕೊಂಡಿದ್ದಾರೆ.