ಆ್ಯಪ್ನಗರ

80 ರೂ. ವಿಚಾರವಾಗಿ ಜಗಳ: ಆಟೋ ಚಾಲಕನನ್ನು ಹತ್ಯೆ ಮಾಡಿದ 4 ಅಪ್ರಾಪ್ತ ಬಾಲಕರು

80 ರೂ. ವಿಚಾರವಾಗಿ ಆಟೋ ಡ್ರೈವರ್ ಹಾಗೂ ನಾಲ್ವರು ಅಪ್ರಾಪ್ತ ವಯಸ್ಸಿನ ಪ್ರಯಾಣಿಕರ ನಡುವೆ ಜಗಳ ನಡೆದಿದ್ದು, ಬಳಿಕ ಜಗಳ ವಿಕೋಪಕ್ಕೆ ತಿರುಗಿ ಆಟೋ ಚಾಲಕನನ್ನೇ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

TIMESOFINDIA.COM 9 Oct 2018, 12:15 pm
ಹೊಸದಿಲ್ಲಿ: ನಾಲ್ವರು ಅಪ್ರಾಪ್ತ ವಯಸ್ಕರು ಆಟೋ ಚಾಲಕನನ್ನು ಹತ್ಯೆ ಮಾಡಿರುವ ಘಟನೆ ಹೊಸದಿಲ್ಲಿಯ ಕನ್ನಾಟ್ ಪ್ಲೇಸ್‌ ಬಳಿಯ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿ ನಡೆದಿದೆ. ಭಾನುವಾರ ತಡರಾತ್ರಿ ಹುಡುಗರು ಆಟೋವಿನಲ್ಲಿ ಪ್ರಯಾಣಿಸುತ್ತಿದ್ದರು. ಈ ಹಿನ್ನೆಲೆ, ತಲಾ 20 ರೂ. ನಂತೆ 80 ರೂ, ಎಕ್ಸ್‌ ಟ್ರಾ ಚಾರ್ಜ್‌ ಕೇಳಿದ್ದಕ್ಕೆ ಸಿಟ್ಟಿಗೆದ್ದ ನಾಲ್ವರು ಬಾಲಕರು, 26 ವರ್ಷದ ಆಟೋ ಚಾಲಕನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.
Vijaya Karnataka Web jahangir alam auto driver


''ಖಾನ್ಪುರದಿಂದ ಕನ್ನಾಟ್ ಪ್ರದೇಶಕ್ಕೆ ಹುಡುಗರು ಪ್ರಯಾಣಿಸುತ್ತಿದ್ದರು. ಆದರೆ, ಆಟೋ ಮೀಟರ್ ದರಕ್ಕಿಂತ 80 ರೂ. ಅಧಿಕ ಮೊತ್ತ ಕೇಳಿದ್ದಕ್ಕೆ ಚಾಲಕನ ಜತೆ ವಾಗ್ವಾದಕ್ಕಿಳಿದ ಬಾಲಕರ ಪೈಕಿ, ಒಬ್ಬ ಬಾಲಕ ಬಟನ್ ಚಾಕುವಿನಿಂದ ಡ್ರೈವರ್‌ನ ಎದೆಗೆ ಆಟೋವಿನಲ್ಲೇ ಚುಚ್ಚಿದ್ದಾನೆ'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆಟೋ ಚಾಲಕನನ್ನು ಜಹಾಂಗೀರ್ ಆಲಮ್ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಪಟ್ಟಂತೆ ನಾಲ್ವರು ಅಪ್ರಾಪ್ತ ವಯಸ್ಸಿನ ಆರೋಪಿಗಳನ್ನು ಬಂಧಿಸಲಾಗಿದೆ.

ಇನ್ನು, ''ಚಾಕುವಿನಿಂದ ಚುಚ್ಚಿದ ಬಳಿಕ ಡ್ರೈವರ್ ಆಟೋವನ್ನು ನಿಲ್ಲಿಸಿದರು. ನಂತರ ಆರೋಪಿ ಬಾಲಕರು ಆತನನ್ನು ಹೊರಗೆ ಎಳೆದುಕೊಂಡು ಹೋಗಿ ಚಾಕುವಿನಿಂದ ಚುಚ್ಚಿದ ಗಾಯದ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ. ನಂತರ, ಸ್ಥಳದಲ್ಲಿ ಜನ ಸೇರುತ್ತಿದ್ದಂತೆ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇನ್ನೊಂದೆಡೆ, ಗಾಯಗಳಾಗಿದ್ದರೂ ಸಹ ಆಟೋ ಚಾಲಕ ಪೊಲೀಸರಿಗೆ ಆ ಬಗ್ಗೆ ಮಾಹಿತಿ ನೀಡಲು ಆಟೋ ಚಲಾಯಿಸಿಕೊಂಡು ಹೋಗಿದ್ದಾನೆ. ಕನ್ನಾಟ್ ಪ್ರದೇಶದಲ್ಲಿದ್ದ ಒಬ್ಬ ಪೊಲೀಸ್ ಅಧಿಕಾರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ ಬಳಿಕ ಕುಸಿದುಬಿದ್ದಿದ್ದಾನೆ'' ಎಂದು ಸಹ ಪೊಲೀಸರು ತಿಳಿಸಿದ್ದಾರೆ.

ನಂತರ,'' ಪೊಲೀಸ್ ಕಂಟ್ರೋಲ್ ರೂಂಗೆ ಹೆಡ್‌ ಕಾನ್ಸ್‌ಟೇಬಲ್ ರಾಕೇಶ್‌ ಕರೆ ಮಾಡಿದ್ದು, ಬಳಿಕ ಪೊಲೀಸ್ ವಾಹನದಲ್ಲೇ ತಡರಾತ್ರಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ 12.30ರ ವೇಳೆಗೆ ಆಲಂ ಮೃತಪಟ್ಟಿದ್ದಾರೆ. ಅವರ ಲೈಸೆನ್ಸ್ ಮೂಲಕ ಆತನ ಹೆಸರನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಇನ್ನೊಂದೆಡೆ, ಬಲವಂತ್ ರಾಯ್ ಮೆಹ್ತಾ ಲೇನ್‌ ಕಡೆಗೆ ಆರೋಪಿಗಳು ತೆರಳುತ್ತಿದ್ದರು'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು, ''ಪಶ್ಚಿಮ ಬಂಗಾಳ ಮೂಲದ ಆಟೋ ಚಾಲಕ ತನ್ನ ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ದೆಹಲಿಯಲ್ಲಿ ವಾಸ ಮಾಡುತ್ತಿದ್ದರು. ಆದರೆ, ಖರ್ಚು ಹೆಚ್ಚಾದ ಕಾರಣ 4 ತಿಂಗಳ ಹಿಂದೆ ಅವರನ್ನು ಗ್ರಾಮಕ್ಕೆ ವಾಪಸ್‌ ಕಳಿಸಿದ್ದ'' ಎಂದು ಪೊಲೀಸರು ತಿಳಿಸಸಿದ್ದಾರೆ.

ಘಟನೆಗೆ ಸಂಬಂಧಪಟ್ಟಂತೆ ಹೊಸದಿಲ್ಲಿಯ ಡಿಸಿಪಿ ಮಧುರ್ ವರ್ಮಾ ಮಾಹಿತಿ ನೀಡಿದ್ದು, ''ನಾಲ್ವರು ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವರನ್ನು ವಯಸ್ಕರ ಹಾಗೆ ಶಿಕ್ಷೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡುವುದಾಗಿ'' ಹೇಳಿದ್ದಾರೆ. ಜತೆಗೆ,'' ಕನ್ನಾಟ್ ಪ್ರದೇಶಕ್ಕೆ ಹೋಗಲು 120 ರೂ. ನೀಡುವುದಾಗಿ ಮೊದಲು ನಿರ್ಧಾರವಾಗಿತ್ತು. ಆದರೆ, ಮೂವರು ಬಾಲಕರನ್ನು ಮಾತ್ರ ಬಿಡುವುದಾಗಿ ಆಟೋ ಚಾಲಕರು ಹೇಳಿದ್ದರು. ತಡರಾತ್ರಿಯಾದ ಕಾರಣ ಒಬ್ಬರಿಗೆ 20 ರೂ. ನಂತೆ ನಾಲ್ವರಿಗೆ 80 ರೂ. ಎಕ್ಸ್‌ ಟ್ರಾ ಚಾರ್ಜ್‌ ಅನ್ನು ಆಟೋ ಚಾಲಕ ಪ್ರಯಾಣ ಮಾಡುವ ವೇಳೆ ಕೇಳಿದ್ದರೆಂದು ಪೊಲೀಸರು ತಿಳಿಸಿದ್ದಾರೆ'' ಎಂದು ಡಿಸಿಪಿ ಮಾಹಿತಿ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ