ಆ್ಯಪ್ನಗರ

ಸತ್ತ ಹಸುವಿನ ಚರ್ಮ ಕಿತ್ತ ದಲಿತರಿಗೆ ಥಳಿತ

ಸತ್ತಿದ್ದ ಹಸುವಿನ ಚರ್ಮವನ್ನು ಕಿತ್ತ ನಾಲ್ವರು ದಲಿತರನ್ನು ಥಳಿಸಿರುವ ಘಟನೆ ಗಿರ್ ಸೋಮನಾಥ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ಟೈಮ್ಸ್ ಆಫ್ ಇಂಡಿಯಾ 13 Jul 2016, 2:28 pm
ರಾಜ್‌ಕೋಟ್: ಸತ್ತಿದ್ದ ಹಸುವಿನ ಚರ್ಮವನ್ನು ಕಿತ್ತ ನಾಲ್ವರು ದಲಿತರ ಬಟ್ಟೆ ಬಿಚ್ಚಿ ಸಾರ್ವಜನಿಕವಾಗಿ ಥಳಿಸಿರುವ ಘಟನೆ ಗಿರ್ ಸೋಮನಾಥ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
Vijaya Karnataka Web 4 dalits stripped beaten up for skinning dead cow
ಸತ್ತ ಹಸುವಿನ ಚರ್ಮ ಕಿತ್ತ ದಲಿತರಿಗೆ ಥಳಿತ


ಉನಾ ಪಟ್ಟಣದ ಮೊಟಾಸಮಾಧಿಯಾಲ ಗ್ರಾಮದ ನಾಲ್ವರು ದಲಿತ ಯುವಕರು ಸತ್ತಿದ್ದ ಹಸುವಿನ ಚರ್ಮವನ್ನು ಕಿತ್ತಿದ್ದಕ್ಕಾಗಿ ಹಸುವನ್ನು ವಧಿಸಿದರೆಂದು ಆರೋಪಿಸಿ ಸ್ಥಳೀಯ ಶಿವಸೇನೆ ಕಾರ್ಯಕರ್ತರು ಥಳಿಸಿದ್ದಾರೆ.

ಚರ್ಮ ಸುಲಿಯಲೆಂದು ಸತ್ತ ಹಸುವನ್ನು ತಂದಿದ್ದಾಗಿ ದಲಿತ ಯುವಕರು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿ ದರೂ ಪ್ರಯೋಜನವಾಗಲಿಲ್ಲ. ಕಬ್ಬಿಣದ ರಾಡ್‌ನಿಂದ ಥಳಿಸಿದ ಬಳಿಕ ವಾಹನಕ್ಕೆ ಕಟ್ಟಿ ಹಾಕಿ ಗ್ರಾಮಕ್ಕೆ ಕರೆದೊಯ್ದಿ ದ್ದಾರೆ. ರಸ್ತೆ ಮಧ್ಯೆ ಮತ್ತೆ ವಾಹನ ನಿಲ್ಲಿಸಿ ಥಳಿದ್ದಾರೆ. ಮಧ್ಯೆ ಪ್ರವೇಶಿಸಿದ ಇತರ ಮೂವರಿಗೂ ಥಳಿಸಿದರು. ಗ್ರಾಮದಲ್ಲಿ ಥಳಿದಸಿ ಬಳಿಕ ಉನಾ ಪಟ್ಟಣಕ್ಕೆ ಕರೆದೊಯ್ದು ಮತ್ತೆ ಸಾರ್ವಜನಿಕವಾಗಿ ಥಳಿಸಿ ಪೊಲೀಸ್‌ ಠಾಣೆಗೆ ಒಪ್ಪಿಸಿದ್ದಾರೆ.

ಹೀಗೆ ಥಳಿಸುವ ಪೋಟೊ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮೋಟಾ ಸಮಾಧಿಯಾಲ ಗ್ರಾಮದ ಸಂತ್ರಸ್ತ ಯುವಕರಲ್ಲಿ ಒಬ್ಬರಾಗಿರುವ ವಸ್ರಾಮ್ ಸರ್ವಯ್ಯ ಅಪರಿಚಿತ ವ್ಯಕ್ತಿ ಮತ್ತು ಪ್ರಮೋದ್‌ಗಿರಿ ಬವಾಜಿ, ಬಲ್ವಂತ್ ಧೀರೂಭಾಯಿ, ರಮೇಶ್‌ ಜಾಧವ್‌, ನಾಗಿ ವಾನಿಯ, ರಾಕೇಶ್ ಜೋಶಿ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ