ಆ್ಯಪ್ನಗರ

ನಾಲ್ವರು ಮೀನುಗಾರರ ಸಿನಿಮೀಯ ರಕ್ಷಣೆ

ಮೇಘಸ್ಫೊಟದಿಂದಾಗಿ ನದಿಯ ನೀರಿನ ಪ್ರಮಾಣ ದಿಢೀರ್‌ ಏರಿಕೆಯಾಗಿತ್ತು. ಈ ಸಂದರ್ಭ ನದಿಯಲ್ಲಿದ್ದ ಮೀನುಗಾರರು ದಿಕ್ಕು ತೋಚದೆ ಭಗವತಿ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಕಾಂಕ್ರಿಟ್‌ ಕಟ್ಟೆ ಏರಿ ಕುಳಿತಿದ್ದರು.

Agencies 20 Aug 2019, 5:00 am
ಶ್ರೀನಗರ: ಜಮ್ಮು-ಕಾಶ್ಮೀರದ ತಾವಿ ನದಿಯ ಪ್ರವಾಹಕ್ಕೆ ಸಿಲುಕಿದ್ದ ನಾಲ್ವರು ಮೀನುಗಾರರನ್ನು ಭಾರತೀಯ ವಾಯುಪಡೆ ಯೋಧರು ಸೋಮವಾರ ಪ್ರಾಣದ ಹಂಗು ತೊರೆದು, ಭಾರಿ ಸಾಹಸ ಮಾಡಿ ರಕ್ಷಿಸಿದ್ದಾರೆ.
Vijaya Karnataka Web 4 fishermen trapped in swollen tawi airlifted
ನಾಲ್ವರು ಮೀನುಗಾರರ ಸಿನಿಮೀಯ ರಕ್ಷಣೆ


ಮೇಘಸ್ಫೊಟದಿಂದಾಗಿ ನದಿಯ ನೀರಿನ ಪ್ರಮಾಣ ದಿಢೀರ್‌ ಏರಿಕೆಯಾಗಿತ್ತು. ಈ ಸಂದರ್ಭ ನದಿಯಲ್ಲಿದ್ದ ಮೀನುಗಾರರು ದಿಕ್ಕು ತೋಚದೆ ಭಗವತಿ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಕಾಂಕ್ರಿಟ್‌ ಕಟ್ಟೆ ಏರಿ ಕುಳಿತಿದ್ದರು. ವಾಯುಪಡೆ ಸಿಬ್ಬಂದಿ ಕಾಪ್ಟರ್‌ ಮೂಲಕ ಮೀನುಗಾರರನ್ನು ರಕ್ಷಣೆ ಮಾಡಿದರು. ಐಎಎಫ್‌ನ ಒಬ್ಬ ಯೋಧ ಹಗ್ಗದ ಏಣಿಯ ಮೂಲಕ ಕೆಳಗಿಳಿದು, ಒಂದು ಬಾರಿಗೆ ಇಬ್ಬರನ್ನು ಕಾಪ್ಟರ್‌ಗೆ ಹತ್ತಿಸಿದರು. ಹೀಗೆ ಎರಡು ಬಾರಿ ಕಾರ್ಯಾಚರಣೆ ಮಾಡಿ ನಾಲ್ವರೂ ಮೀನುಗಾರರ ಜೀವ ಉಳಿಸಿದರು.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ, ಹರ್ಕಿ ಪೌಡಿ ಎಂಬಲ್ಲಿ ನದಿಯ ಪ್ರವಾಹಕ್ಕೆ ಸಿಲುಕಿದ್ದ ಕುಟುಂಬವೊಂದನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಹುಸೇನ್‌ ಎಂಬ ವ್ಯಕ್ತಿ ಹಾಗೂ ಕುಟುಂಬ ಸದಸ್ಯರು ಪ್ರವಾಹದಲ್ಲಿ ಸಿಲುಕಿ ರಕ್ಷಣೆಗಾಗಿ ಮೊರೆ ಇಟ್ಟಿದ್ದರು. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ರಕ್ಷಣಾ ಕಾರ್ಯ ನಡೆಸಿದರು. ಹಗ್ಗದ ಸಹಾಯದಿಂದ ಎಲ್ಲರನ್ನೂ ರಕ್ಷಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ