ಹೊಸದಿಲ್ಲಿ: ಸುಪ್ರೀಂ ಕೋರ್ಟ್ಗೆ ಪದನ್ನೋತಿ ಪಡೆದಿರುವ ಕರ್ನಾಟಕ ಹೈಕೋರ್ಟ್ನ ನ್ಯಾ. ಎ.ಎಸ್. ಬೋಪಣ್ಣ ಸೇರಿದಂತೆ ನಾಲ್ವರು ನೂತನ ನ್ಯಾಯಮೂರ್ತಿಗಳಿಗೆ ಸಿಜೆಐ ರಂಜನ್ ಗೊಗೊಯ್ ಅವರು ಶುಕ್ರವಾರ ಪ್ರಮಾಣ ವಚನ ಬೋಧಿಸಿದರು. ಇವರ ಪ್ರಮಾಣದೊಂದಿಗೆ ಸುಪ್ರೀಂ ಕೋರ್ಟ್ನ ಎಲ್ಲ 31 ನ್ಯಾಯಮೂರ್ತಿಗಳ ಹುದ್ದೆ ಪೂರ್ಣ ಭರ್ತಿಯಾದಂತಾಗಿದೆ. ಬಡ್ತಿ ಪಡೆದ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ಬಿ.ಆರ್. ಗವಾಯಿ, ಸೂರ್ಯಕಾಂತ್, ಅನಿರುದ್ಧ್ ಬೋಸ್ ಅವರಿಗೆ ಸಿಜೆಐ ಪ್ರಮಾಣಚನ ಬೋಧಿಸಿದರು. ಇತ್ತೀಚೆಗಷ್ಟೇ ಸಿಜೆಐ ನೇತೃತ್ವದ ಕೊಲಿಜಿಯಂ ಇವರ ಹೆಸರನ್ನು ಪದನ್ನೋತಿಗೆ ಶಿಫಾರಸು ಮಾಡಿತ್ತು. ಅದನ್ನು ಕೇಂದ್ರ ಸರಕಾರ ಇತ್ತೀಚೆಗಷ್ಟೇ ಸಮ್ಮತಿಸಿತ್ತು. ಈ ಮೊದಲು, ಸೇವಾ ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಕಾರಣ ನೀಡಿ ಬೋಸ್ ಮತ್ತು ಬೋಪಣ್ಣ ಅವರ ಹೆಸರುಗಳನ್ನು ಮರು ಪರಿಶೀಲನೆಗಾಗಿ ಸರಕಾರ, ಕೊಲಿಜಿಯಂಗೆ ವಾಪಸ್ ಕಳಿಸಿತ್ತು. ಆದರೆ ಕೊಲಿಜಿಯಂ ಮತ್ತೆ ಈ ನಾಲ್ವರ ಹೆಸರನ್ನು ಶಿಫಾರಸು ಮಾಡಿ ಕಳುಹಿಸಿದ್ದರಿಂದ ಕೊನೆಗೂ ಸರಕಾರ ಅದನ್ನು ಒಪ್ಪಿಕೊಂಡಿತ್ತು.
ಸುಪ್ರೀಂ ನಾಲ್ವರು ನೂತನ ಜಸ್ಟೀಸ್ಗಳ ಪ್ರಮಾಣ
ಬಡ್ತಿ ಪಡೆದ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ಬಿ.ಆರ್. ಗವಾಯಿ, ಸೂರ್ಯಕಾಂತ್, ಅನಿರುದ್ಧ್ ಬೋಸ್ ಅವರಿಗೆ ಸಿಜೆಐ ಪ್ರಮಾಣಚನ ಬೋಧಿಸಿದರು.
Vijaya Karnataka 25 May 2019, 5:00 am