ಆ್ಯಪ್ನಗರ

ರೈಲ್ವೆ ರಿಯಾಯಿತಿ ತ್ಯಜಿಸಿದ 42 ಲಕ್ಷ ಹಿರಿಯ ನಾಗರಿಕರು

ರೈಲ್ವೆ ಪ್ರಯಾಣದಲ್ಲಿ ಹಿರಿಯ ನಾಗರಿಕರು ರಿಯಾಯಿತಿ ಸೌಲಭ್ಯ ಬಿಟ್ಟುಕೊಡುವಂತೆ ಕೇಂದ್ರ ಸರಕಾರ ಮಾಡಿದ್ದ ಮನವಿಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಕಳೆದ 9 ತಿಂಗಳಿನಲ್ಲಿ 42 ಲಕ್ಷ ಹಿರಿಯ ನಾಗರಿಕರು ಈ ಸೌಲಭ್ಯ ಬಿಟ್ಟುಕೊಟ್ಟಿದ್ದಾರೆ. ಹಾಗೆಯೇ ಗರ್ಭಿಣಿಯರ ಉಚಿತ ತಪಾಸಣೆ ನಡೆಸುವ ಕೋರಿಕೆಯಂತೆ ವೈದ್ಯರು 1.25 ಕೋಟಿ ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನಡೆಸಿದ್ದಾರೆ.

Vijaya Karnataka 30 Jun 2018, 9:35 am
ಹೊಸದಿಲ್ಲಿ: ರೈಲ್ವೆ ಪ್ರಯಾಣದಲ್ಲಿ ಹಿರಿಯ ನಾಗರಿಕರು ರಿಯಾಯಿತಿ ಸೌಲಭ್ಯ ಬಿಟ್ಟುಕೊಡುವಂತೆ ಕೇಂದ್ರ ಸರಕಾರ ಮಾಡಿದ್ದ ಮನವಿಗೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ. ಕಳೆದ 9 ತಿಂಗಳಿನಲ್ಲಿ 42 ಲಕ್ಷ ಹಿರಿಯ ನಾಗರಿಕರು ಈ ಸೌಲಭ್ಯ ಬಿಟ್ಟುಕೊಟ್ಟಿದ್ದಾರೆ. ಹಾಗೆಯೇ ಗರ್ಭಿಣಿಯರ ಉಚಿತ ತಪಾಸಣೆ ನಡೆಸುವ ಕೋರಿಕೆಯಂತೆ ವೈದ್ಯರು 1.25 ಕೋಟಿ ಗರ್ಭಿಣಿಯರ ಆರೋಗ್ಯ ತಪಾಸಣೆಯನ್ನು ಉಚಿತವಾಗಿ ನಡೆಸಿದ್ದಾರೆ.
Vijaya Karnataka Web Senior Citizen


ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ 'ನ್ಯಾಷನಲ್‌ ಸೆಂಟರ್‌ ಫಾರ್‌ ಏಜಿಂಗ್‌' ಸಂಸ್ಥೆಗೆ ಶಂಕುಸ್ಥಾಪನೆ ಹಾಗೂ ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ 'ಸೂಪರ್‌ ಸ್ಪೆಷಾಲಿಟಿ ಬ್ಲಾಕ್‌' ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರೇ ಈ ವಿಷಯ ತಿಳಿಸಿದರು.

ಕೆಲವರು ಎಷ್ಟೇ ದುಡ್ಡಿದ್ದರೂ ಸರಕಾರದ ಗ್ಯಾಸ್‌ ಸಬ್ಸಿಡಿ, ರೈಲ್ವೆ ಟಿಕೆಟ್‌ ದರ ರಿಯಾಯಿತಿ ಸೇರಿದಂತೆ ಇತ್ಯಾದಿ ಆರ್ಥಿಕ ಸೌಲಭ್ಯಗಳನ್ನು ತ್ಯಜಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಸಬ್ಸಿಡಿ ತ್ಯಜಿಸಿ ಆಂದೋಲನದಿಂದ ಅನುಕೂಲವಂತರು ಪ್ರಾಮಾಣಿಕತೆಯಿಂದ ಇಂತಹ ಸೌಲಭ್ಯ ತ್ಯಜಿಸಿ, ಅದೇ ಮೊತ್ತವನ್ನು ದೇಶ ನಿರ್ಮಾಣಕ್ಕೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದು ಪ್ರಧಾನಿ ಬಣ್ಣಿಸಿದರು.

ಇರುವರೆಗೆ 1.25 ಕೋಟಿ ಕುಟುಂಬಗಳು ಸ್ವಯಂ ಪ್ರೇರಿತವಾಗಿ ಗ್ಯಾಸ್‌ ಸಬ್ಸಿಡಿ ತ್ಯಜಿಸಿವೆ. ಹಾಗೆಯೇ ಕಳೆದ 9 ತಿಂಗಳಿನಲ್ಲಿ 42 ಲಕ್ಷ ಹಿರಿಯ ನಾಗರಿಕರು ರೈಲ್ವೆ ಟಿಕೆಟ್‌ ರಿಯಾಯಿತಿ ಸೌಲಭ್ಯ ತ್ಯಜಿಸಿದ್ದು, ಇದರಿಂದ ಸಬ್ಸಿಡಿ ಹೊರೆ ತಗ್ಗಿದೆ. ಅದೇ ಮೊತ್ತವನ್ನು ಸರಕಾರ ಬಡವರ ಉದ್ಧಾರಕ್ಕೆ, ಆರೋಗ್ಯ ಹಾಗೂ ಮೂಲಸೌಕರ್ಯಗಳಿಗೆ ಬಳಸಿಕೊಳ್ಳುತ್ತಿದೆ ಎಂದರು.

ಗರ್ಭಿಣಿಯರಿಗೆ ಉಚಿತ ಸೇವೆ: ತಿಂಗಳಿಗೊಮ್ಮೆ ಗರ್ಭಿಣಿಯರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವಂತೆ ನೀಡಿದ್ದ ಕರೆಗೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿದ್ದು, ಇದುವರೆಗೂ 1.25 ಕೋಟಿ ಗರ್ಭಿಣಿಯರಿಗೆ ಇದರ ಲಾಭ ದೊರೆತಿದೆ ಎಂದ ಮೋದಿ, ''ನಮ್ಮ ಸರಕಾರ ಆಸ್ಪತ್ರೆಗಳ ಆಧುನೀಕರಣಕ್ಕೆ ಹಾಗೂ ಔಷಧಗಳ ಸುಲಭ ಲಭ್ಯತೆಗಷ್ಟೇ ಗಮನ ನೀಡುತ್ತಿಲ್ಲ. ಇದರ ಜತೆಗೆ ಎಲ್ಲರಿಗೂ ಕೈಗೆಟುಕುವ ದರದಲ್ಲಿ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂಬ ಆಶಯ ಹೊಂದಿದ್ದು, ಇದರ ಸಾಕಾರಕ್ಕೆ ರಾಷ್ಟ್ರೀಯ ಆರೋಗ್ಯ ನೀತಿ ತರಲಾಗಿದೆ. ವಾರ್ಷಿಕ 10 ಕೋಟಿ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಮೌಲ್ಯದ ಆರೋಗ್ಯ ವಿಮಾ ಸೇವೆ ಒದಗಿಸುವ 'ನ್ಯಾಷನಲ್‌ ಹೆಲ್ತ್‌ ಪ್ರೊಟೆಕ್ಷನ್‌ ಸ್ಕೀಮ್‌' (ಆಯುಷ್ಮಾನ್‌ ಭಾರತ್‌) ಯೋಜನೆ ಜಾರಿಗೆ ಮುಂದಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ