ಅಳಪುಳ: ಆನೆ ಹತ್ತಿರ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವ ಹುಚ್ಚಿನಿಂದ ಟ್ರಕ್ ಚಾಲಕರೊಬ್ಬರು ಆಸ್ಪತ್ರೆ ಸೇರಿದ ಘಟನೆ ಕೇರಳದ ಅಳಪುಳದಲ್ಲಿ ನಡೆದಿದೆ.
43 ವರ್ಷದ ಟ್ರಕ್ ಚಾಲಕ ರಿನೀಶ್ ಎಂಬುವವರು ಅರವುಕಾಡು ಶ್ರೀದೇವಿ ದೇವಸ್ಥಾನದ ಬಳಿ ಚೈನ್ಗಳಿಂದ ಕಟ್ಟಿ ಹಾಕಿದ್ದ ಸಾಕು ಆನೆಗಳ ಬಳಿ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಈ ವೇಳೆ ಕೆರಳಿದ ಆನೆ ತನ್ನ ಕೋರೆಯಿಂದ ರಿನೀಶ್ರನ್ನು ಎತ್ತಿ ಎಸೆದಿದೆ. ಕೆಳಗೆ ಬಿದ್ದ ರಿನೀಶ್ರನ್ನು ಮತ್ತೆ ತಿವಿಯಲು ಯತ್ನಿಸಿ ಸೊಂಡಿಲಿನ ಮೂಲಕ ದೂರ ತಳ್ಳಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ರಿನೀಶ್ರನ್ನು ಆನೆಯ ಸೊಂಡಿಲಿಗೆ ಸಿಗದಂತೆ ಎಳೆದೊಯ್ದಿದ್ದಾರೆ. ಇದೀಗ ಗಂಭೀರ ಗಾಯಗೊಂಡಿರುವ ರಿನೀಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆನೆ ದಾಳಿಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಏಪ್ರಿಲ್ 2016ರಲ್ಲಿ ತಿರುವನಂತಪುರಂನ ಕಿಲಿಮನುರ್ನಲ್ಲಿ ಇಂತಹುದೇ ಘಟನೆ ನಡೆದಿತ್ತು. ಆನೆ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸಿದ 37 ವರ್ಷದ ವ್ಯಕ್ತಿಯ ಮೇಲೆ ದಾಳಿ ನಡೆದಿತ್ತು. ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. 2017ರ ನವೆಂಬರ್ ತಿಂಗಳಲ್ಲಿ ತೊಡುಪುಳದ 25 ವರ್ಷದ ಯುವಕನೊಬ್ಬ ಬಾಹುಬಲಿ ಸಿನಿಮಾದಲ್ಲಿ ಪ್ರಬಾಸ್ ಆನೆಯ ಮೇಲೆ ಏರಿದಂತೆ ಏರಲು ಹೋಗಿ ಗಂಭೀರ ಗಾಯಗೊಂಡಿದ್ದ.
43 ವರ್ಷದ ಟ್ರಕ್ ಚಾಲಕ ರಿನೀಶ್ ಎಂಬುವವರು ಅರವುಕಾಡು ಶ್ರೀದೇವಿ ದೇವಸ್ಥಾನದ ಬಳಿ ಚೈನ್ಗಳಿಂದ ಕಟ್ಟಿ ಹಾಕಿದ್ದ ಸಾಕು ಆನೆಗಳ ಬಳಿ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ಈ ವೇಳೆ ಕೆರಳಿದ ಆನೆ ತನ್ನ ಕೋರೆಯಿಂದ ರಿನೀಶ್ರನ್ನು ಎತ್ತಿ ಎಸೆದಿದೆ. ಕೆಳಗೆ ಬಿದ್ದ ರಿನೀಶ್ರನ್ನು ಮತ್ತೆ ತಿವಿಯಲು ಯತ್ನಿಸಿ ಸೊಂಡಿಲಿನ ಮೂಲಕ ದೂರ ತಳ್ಳಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ರಿನೀಶ್ರನ್ನು ಆನೆಯ ಸೊಂಡಿಲಿಗೆ ಸಿಗದಂತೆ ಎಳೆದೊಯ್ದಿದ್ದಾರೆ. ಇದೀಗ ಗಂಭೀರ ಗಾಯಗೊಂಡಿರುವ ರಿನೀಶ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆನೆ ದಾಳಿಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಏಪ್ರಿಲ್ 2016ರಲ್ಲಿ ತಿರುವನಂತಪುರಂನ ಕಿಲಿಮನುರ್ನಲ್ಲಿ ಇಂತಹುದೇ ಘಟನೆ ನಡೆದಿತ್ತು. ಆನೆ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸಿದ 37 ವರ್ಷದ ವ್ಯಕ್ತಿಯ ಮೇಲೆ ದಾಳಿ ನಡೆದಿತ್ತು. ಸಣ್ಣಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. 2017ರ ನವೆಂಬರ್ ತಿಂಗಳಲ್ಲಿ ತೊಡುಪುಳದ 25 ವರ್ಷದ ಯುವಕನೊಬ್ಬ ಬಾಹುಬಲಿ ಸಿನಿಮಾದಲ್ಲಿ ಪ್ರಬಾಸ್ ಆನೆಯ ಮೇಲೆ ಏರಿದಂತೆ ಏರಲು ಹೋಗಿ ಗಂಭೀರ ಗಾಯಗೊಂಡಿದ್ದ.