ಆ್ಯಪ್ನಗರ

ಹಿಮಾಚಲ ಪ್ರದೇಶ: ಟ್ರೆಕ್ಕಿಂಗ್‌ ತೆರಳಿದ 300 ವಿದ್ಯಾರ್ಥಿಗಳು ಸೇಫ್‌

45 ವಿದ್ಯಾರ್ಥಿಗಳ ಜತೆ ಸಂಪರ್ಕ ಸಾಧಿಸಿದ ಅಧಿಕಾರಿಗಳು

Vijaya Karnataka Web 25 Sep 2018, 5:20 pm
ಶಿಮ್ಲಾ: ಹಿಮಾಚಲ ಪ್ರದೇಶದ ಮನಾಲಿ ಸಮೀಪ ಟೆಕ್ಕಿಂಗ್‌ಗೆ ತೆರಳಿದ್ದ 45 ಐಐಟಿ ವಿದ್ಯಾರ್ಥಿಗಳು ಸೇರಿದಂತೆ 300 ಮಂದಿ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Vijaya Karnataka Web ಹಿಮಪಾತ
ಹಿಮಪಾತ


ಈ 300 ಮಂದಿ ರೊಹ್ತಂಗ್‌ ಪಾಸ್‌ ಮತ್ತು ಲಾಹೂಲ್ ಜಿಲ್ಲೆಯಲ್ಲಿ ಟ್ರಕ್ಕಿಂಗ್‌ಗೆ ತೆರಳಿದ್ದರು.

ಟ್ರೆಕಿ ಗ್‌ಗಾಗಿ ತೆರಳಿದ್ದ ಇವರು ಮಾರ್ಗ ಮಧ್ಯದಲ್ಲಿ ಸಿಲುಕಿಕೊಂಡಿದ್ದರು.


ಇವರ ರಕ್ಷಣೆಗಾಗಿ ಭಾರತೀಯ ವಾಯುಪಡೆಯ ಎರಡು ವಿಶೇಷ ಹೆಲಿಕಾಪ್ಟರ್‌ಗಳನ್ನು ಬಳಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಜೈರಾಮ್‌ ಠಾಕೂರ್‌, ಸಚಿವ ಡಾ. ರಾಮ್‌ ಲಾಲ್‌ ಮಾರ್ಕಂಡ ಅವರು ಕುಲು ತಲುಪಿದ್ದು ಪರಿಸ್ಥಿತಿ ಬಗ್ಗೆ ಮಾಹಿತಿ ಸಂಗ್ರಹಿಸಿದರು.

ಪ್ರತೀಕೂಲ ಹವಾಮಾನ ಹಾಗೂ ಹಿಮಪಾತದಿಂದಾಗಿ 45 ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಆದರೆ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.

ಟ್ರೆಕ್ಕಿಂಗ್‌ಗೆ ಹೋದವರು, ಪ್ರವಾಸಿಗರು ಮಾತ್ರವಲ್ಲಿ ಜನರಲ್‌ ರಿಸರ್ವ್‌ ಎಂಜಿನಿಯರ್‌ ಪಡೆ ಸಿಬ್ಬಂದಿ ಕೂಡ ಮಾರ್ಗ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ