ಆ್ಯಪ್ನಗರ

ಪತ್ನಿಯ ಮೇಲೆ ದೌರ್ಜನ್ಯ ಸರಿ ಎಂದು ಸಮರ್ಥಿಸಿಕೊಂಡ ಮಹಾರಾಷ್ಟ್ರದ ಮಹಿಳೆಯರು!

ಕೈಯಿಂದ ಕೆನ್ನೆಗೆ ಪಟಾರನೆ ಬೀಳುವ ಬಿಟ್ಟು, ಬೆನ್ನಿಗೊಂದು ಗುದ್ದು, ತಲೆಯನ್ನು ಹಿಡಿದು ಗೋಡೆಗೆ ಜಜ್ಜುವುದು ಮುಂತಾದ ಕೌಟುಂಬಿಕ ಹಿಂಸೆಗಳನ್ನು ಗಂಡ ನೀಡಿದರೆ ವಿರೋಧಿಸುವ ಬದಲು ಸಮರ್ಥಿಸಿಕೊಳ್ಳುತ್ತಿದ್ದಾರೆ!

Vijaya Karnataka Web 25 Jan 2018, 11:08 am
ಥಾಣೆ: ಕೈಯಿಂದ ಕೆನ್ನೆಗೆ ಪಟಾರನೆ ಬೀಳುವ ಪೆಟ್ಟು, ಬೆನ್ನಿಗೊಂದು ಗುದ್ದು, ತಲೆಯನ್ನು ಹಿಡಿದು ಗೋಡೆಗೆ ಜಜ್ಜುವುದು ಮುಂತಾದ ಕೌಟುಂಬಿಕ ಹಿಂಸೆಗಳನ್ನು ಗಂಡ ನೀಡಿದರೆ ವಿರೋಧಿಸುವ ಬದಲು 'ತಮಗೆ ತಕ್ಕ ಶಿಕ್ಷೆಯಾಗಿದೆ' ಎಂದು ಮಹಾರಾಷ್ಟ್ರದಲ್ಲಿರುವ ಮಹಿಳೆಯರು ತಮ್ಮ ಪತಿಯ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ!
Vijaya Karnataka Web 49 of maharashtra women feel domestic violence is justified
ಪತ್ನಿಯ ಮೇಲೆ ದೌರ್ಜನ್ಯ ಸರಿ ಎಂದು ಸಮರ್ಥಿಸಿಕೊಂಡ ಮಹಾರಾಷ್ಟ್ರದ ಮಹಿಳೆಯರು!


2015-16ರಲ್ಲಿ ನಡೆಸಿದ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (NFHS)ಯಿಂದ ಈ ರೀತಿಯ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಈ ಸಮೀಕ್ಷೆಯಲ್ಲಿ 4, 658 ಮಹಿಳೆಯರು ಭಾಗವಹಿಸಿದ್ದರು. ಇದರಲ್ಲಿ 49%(2,266) ಮಹಿಳೆಯರು ನಾವು ಪತಿಯ ಇಷ್ಟದಂತೆ ನಡೆದುಕೊಳ್ಳದಿದ್ದರೆ ಆತ ದೌರ್ಜನ್ಯ ನೀಡುವುದು ಸರಿ ಎಂದು ಹೇಳಿದ್ದಾರೆ.

ಕೆಲ ಮಹಿಳೆಯರು 'ನಾವು ಆತನ ಮಾತು ಕೇಳದಿದ್ದರೆ, ಆತನ ಪೋಷಕರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ಮನೆ ಕೆಲಸದತ್ತ ಗಮನ ನೀಡದೆ ಇದ್ದರೆ, ಆತನ ಲೈಂಗಿಕ ಆಸಕ್ತಿಗೆ ಸಹಕರಿಸದೆ ಇದ್ದರೆ ಏಟು ಬೀಳುತ್ತದೆ' ಎಂದು ಹೇಳಿದರೆ, 75% ತಮ್ಮ ಗಂಡ ಮದ್ಯ ಸೇವಿಸಿ ಬರುತ್ತಾನೆ, ಮದ್ಯದ ಪ್ರಭಾವದಿಂದಾಗಿ ಹೊಡೆಯುತ್ತಾರೆ ಎಂದಿದ್ದಾರೆ.

16% ಮಹಿಳೆಯರು ತಮ್ಮ ಗಂಡ ಮದ್ಯ ಕುಡಿಯುವುದಿಲ್ಲ, ಆದರೂ ನಮ್ಮ ಮೇಲೆ ಕೈ ಮಾಡುತ್ತಾರೆ' ಎಂದಿದ್ದಾರೆ.

'ಮದ್ಯದ ಪ್ರಭಾವದಲ್ಲಿರುವವರಿಗೆ ತಾವು ಮಾಡುತ್ತಿರುವುದು ತಪ್ಪೋ, ಸರಿಯೋ ಎಂದು ಅರಿವು ಇರುವುದಿಲ್ಲ, ಅಲ್ಲದೆ ಈ ಕೆಟ್ಟ ಚಟದಿಂದಾಗಿ ಪತ್ನಿ ಜತೆ ಒಳ್ಳೆಯ ಸಮಯ ಕಳೆಯಲು ಸಾಧ್ಯವಾಗಿರುವುದಿಲ್ಲ. ಆಗ ಸಂಶಯ ಹುಟ್ಟಿ ಪತ್ನಿ ಮೇಲೆ ಕೈ ಮಾಡುವ ಕೃತ್ಯ ಮಾಡುತ್ತಾರೆ' ಎಂದು ಮಾನಸಿಕ ತಜ್ಞೆ ಡಾ. ಅದಿತಿ ಆಚಾರ್ಯ ಹೇಳಿದ್ದಾರೆ.

ಮಹಾರಾಷ್ಟ್ರ ರಾಜ್ಯಾದ್ಯಂತ ನಡೆಸಲಾಗಿದ್ದ ಈ ಸಮೀಕ್ಷೆಯಲ್ಲಿ 15-49 ವರ್ಷದೊಳಗಿನ 4, 658 ಮಹಿಳೆಯರು ಹಾಗೂ 4,497 ಪುರುಷರು ಭಾಗವಹಿಸಿದ್ದರು.

'ಅಧಿಕ ಶಿಕ್ಷಣ ಪಡೆಯದ, ಸ್ವಾವಲಂಬಿಯಾಗಿರದ, ಯಾವುದೇ ಆರ್ಥಿಕ ಭದ್ರತೆ ಇಲ್ಲದ ಮಹಿಳೆಯರಿಗೆ ಪುರುಷರೇ ಆಧಾರವಾಗಿರುತ್ತಾರೆ . ಅಂಥ ಮಹಿಳೆಯರು ತಮ್ಮ ಮೇಲೆ ಕೌಟಂಬಿಕ ದೌರ್ಜನ್ಯ ಆದರೂ ಅದನ್ನು ಪ್ರತಿಭಟಿಸುವ ಧೈರ್ಯ ಮಾಡುತ್ತಿಲ್ಲವೆಂದು ಡಾ. ಆಚಾರ್ಯ' ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ