ಆ್ಯಪ್ನಗರ

ಬಾವಿಯಲ್ಲಿ ತೇಲುತ್ತಿದ್ದವು 5 ಮಕ್ಕಳ ಶವ; ಪೋಷಕರು ನಾಪತ್ತೆ

ಮಕ್ಕಳನ್ನು ಯಾಕೆ ಕೊಲ್ಲಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿಲ್ಲ. ಕೌಟುಂಬಿಕ ಕಲಹದಿಂದ ಈ ಕೃತ್ಯವನ್ನೆಸಗಿರಬಹುದೆಂದು ಶಂಕಿಸಲಾಗಿದ್ದು , ಬಾವಿಯ ಬಳಿ ಮಕ್ಕಳ ಬಟ್ಟೆ ತುಂಬಿರುವ ಬ್ಯಾಗ್ ಮತ್ತು ತಿಂಡಿಗಳು ಪತ್ತೆಯಾಗಿವೆ.

TIMESOFINDIA.COM 11 Oct 2018, 3:09 pm
ಬರ್ವಾನಿ: ಬಾವಿಯೊಂದರಲ್ಲಿ 5 ಮಕ್ಕಳ ಶವ ಪತ್ತೆಯಾದ ಬೆಚ್ಚಿಬೀಳಿಸುವ ಘಟನೆ ಮಧ್ಯಪ್ರದೇಶದಲ್ಲಿ ಬುಧವಾರ ನಡೆದಿದೆ. ಮಕ್ಕಳ ದೇಹ ಕೊಳೆತಿದ್ದು ಮೂರು ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂದು ಅಂದಾಜಿಸಲಾಗಿದೆ.
Vijaya Karnataka Web Police 1


ಮಕ್ಕಳೆಲ್ಲ 1 ವರ್ಷದಿಂದ 7 ವರ್ಷದ ಪ್ರಾಯದೊಳಗಿನವರಾಗಿದ್ದು, ಗ್ರಾಮಸ್ಥರವರನ್ನು ತಕ್ಷಣ ಪತ್ತೆ ಹಚ್ಚಿದರು. ಎಲ್ಲ ಮಕ್ಕಳು ಭತರ್ ಸಿಂಗ್ ಎಂಬುವವನ ಎರಡು ಪತ್ನಿಯರ ಮಕ್ಕಳು ಎಂದು ತಿಳಿದು ಬಂದಿದೆ. ಅದರಲ್ಲಿ ನಾಲ್ಕು ಮಕ್ಕಳು ಒಬ್ಬ ತಾಯಿಯವರಾಗಿದ್ದಾರೆ. ಮಕ್ಕಳ ಪೋಷಕರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಮಕ್ಕಳನ್ನು ಯಾಕೆ ಕೊಲ್ಲಲಾಗಿದೆ ಎಂದು ಪೊಲೀಸರಿಗೆ ಮಾಹಿತಿ ಲಭಿಸಿಲ್ಲ. ಕೌಟುಂಬಿಕ ಕಲಹದಿಂದ ಈ ಕೃತ್ಯವನ್ನೆಸಗಿರಬಹುದೆಂದು ಶಂಕಿಸಲಾಗಿದ್ದು , ಬಾವಿಯ ಬಳಿ ಮಕ್ಕಳ ಬಟ್ಟೆ ತುಂಬಿರುವ ಬ್ಯಾಗ್ ಮತ್ತು ತಿಂಡಿಗಳು ಪತ್ತೆಯಾಗಿವೆ.

ಮೃತರ ಸಿಂಗ್ ಮೊದಲ ಪತ್ನಿ ಸುಂಗು ಬಾಯಿ ಮಕ್ಕಳಾದ ಸಂದೀಪ್ (7) ಪ್ರದೀಪ್ (3), ಸಹದರ್ (2), ರಂದೀಪ್ (1) ಮತ್ತು ಎರಡನೆಯ ಪತ್ನಿ ಅನಿತಾ ಮಕ್ಕಳಾದ ರೋಹಿತ್ (3) ಎಂದು ಗುರುತಿಸಲಾಗಿದೆ.

ಸೋಮವಾರ ನನ್ನ ಮಗ ತನ್ನ ಐವರು ಮಕ್ಕಳೊಂದಿಗೆ ಹೊರಗೆ ಹೋಗಿದ್ದ. ಅವರೆಲ್ಲರನ್ನು ಕೊನೆಯದಾಗಿ ನೋಡಿದ್ದು ಅಂದೇ, ಎಂದು ಭತರ್ ಸಿಂಗ್ ತಂದೆ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ