ಆ್ಯಪ್ನಗರ

ಒಡಿಶಾದಲ್ಲಿ ಐವರು ನಕ್ಸಲರ ಹತ್ಯೆ

ಹತ ನಕ್ಸಲರಿಂದ ಎರಡು ಐಎನ್‌ಎಸ್‌ಎಎಸ್‌ ರೈಫಲ್‌ಗಳು, ಒಂದು ಎಸ್‌ಎಲ್‌ಆರ್‌ ಮತ್ತು ಒಂದು 303 ರೈಫಲ್‌ ಹಾಗೂ ಹ್ಯಾಂಡ್‌ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

Vijaya Karnataka 6 Nov 2018, 10:53 am
ಮಾಲ್ಕನ್‌ಗಿರಿ: ಒಡಿಶಾ ಪೊಲೀಸ್‌ ಇಲಾಖೆಯ ವಿಶೇಷ ಕಾರ್ಯಾಚರಣೆ ವಿಭಾಗದ ಎರಡು ತಂಡಗಳು ಮಾಲ್ಕನ್‌ಗಿರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೋಮವಾರ ಬಿರುಸಿನ ಕಾರ್ಯಾಚರಣೆ ನಡೆಸಿ ಒಬ್ಬ ಮಹಿಳೆ ಸೇರಿ ಐವರು ನಕ್ಸಲರನ್ನು ಕೊಂದುಹಾಕಿವೆ.
Vijaya Karnataka Web Naxal


ಮಾಲ್ಕನ್‌ಗಿರಿ ಜಿಲ್ಲೆಯ ಪಾಪ್ಲರ್‌ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಕಾರ್ಯಾಚರಿಸುತ್ತಿರುವ ಮಾಹಿತಿ ಬೆನ್ನಲ್ಲೇ 'ಸ್ಪೆಷಲ್‌ ಆಪರೇಷನ್‌ ಗ್ರೂಪ್‌'ನ ಎರಡು ತಂಡಗಳು ಭಾನುವಾರ ಸಂಜೆಯಿಂದಲೇ ಶೋಧ ಕಾರ್ಯ ಕೈಗೊಂಡಿದ್ದವು. ಸೋಮವಾರ ಗುಂಡಿನ ದಾಳಿ ನಡೆಸಿ ಐವರು ನಕ್ಸಲರನ್ನು ಸೆದೆಬಡಿದಿದ್ದು, ಅವರ ಗುರುತಿಸುವಿಕೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ. ಈ ವೇಳೆ ಮಾವೋವಾದಿ ನಾಯಕ ರಾನ್‌ದೇವ್‌ ಪಲಾಯನಗೊಂಡಿದ್ದಾನೆ ಎನ್ನಲಾಗಿದೆ.

ಹತ ನಕ್ಸಲರಿಂದ ಎರಡು ಐಎನ್‌ಎಸ್‌ಎಎಸ್‌ ರೈಫಲ್‌ಗಳು, ಒಂದು ಎಸ್‌ಎಲ್‌ಆರ್‌ ಮತ್ತು ಒಂದು 303 ರೈಫಲ್‌ ಹಾಗೂ ಹ್ಯಾಂಡ್‌ ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಆರ್‌.ಪಿ.ಶರ್ಮಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ