ಹೊಸದಿಲ್ಲಿ: ಕರ್ನಾಟಕದಲ್ಲಿ ಬುಡಕಟ್ಟು ಹಾಗೂ ದಲಿತ ಸಮುದಾಯಕ್ಕೆ ಸೇರಿದ 52 ಜನರನ್ನು ಜೀತಕ್ಕೆ ದೂಡಲ್ಪಟ್ಟ ಪ್ರಕರಣಕ್ಕೆ ಆಘಾತ ವ್ಯಕ್ತಪಡಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಇಂಥ ವಿಷಮ ಸ್ಥಿತಿಯಲ್ಲಿಯೂ ಅಲ್ಲಿಯ ಸರಕಾರ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಶಾ ಕರೆ ನೀಡಿದ್ದಾರೆ.
ಕೆಲಸ ಹುಡುಕಿಕೊಂಡು ಬಂದ ದಲಿತ ಮತ್ತು ಬುಡಕಟ್ಟು ಸಮುದಾಯದ ಬಡ ಜನರನ್ನು ಜೀತಕ್ಕೆ ದೂಡಲಾಯಿತು. ಅವರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಯಿತು. ಈ ಘಟನೆಯಿಂದ ದೇಶವೇ ಬೆಚ್ಚಿಬಿದ್ದಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿಯಾಗಿದೆ. ಸರಕಾರದ ನಡೆಯನ್ನು ಜನರು ಗಮನಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ತುತ್ತಿಗಾಗಿ ಕೂಲಿ ಅರಸಿಕೊಂಡು ರಾಜ್ಯದ ಹಾವೇರಿ, ರಾಯಚೂರು ಮತ್ತಿತರ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶ, ತೆಲಂಗಾಣ ಭಾಗದಿಂದ ರೈಲಿನಲ್ಲಿ ಬರುತ್ತಿದ್ದವರಿಗೆ ಕೆಲಸದ ಆಸೆ ಹುಟ್ಟಿಸಿ 32 ಪುರುಷರು, 16 ಮಹಿಳಾ ಕಾರ್ಮಿಕರು ಸೇರಿದಂತೆ 52 ಮಂದಿಯನ್ನು ಅಕ್ರಮವಾಗಿ ತೆಂಗಿನತೋಟದ ಶೆಡ್ನಲ್ಲಿ ಜೀತದಾಳುಗಳನ್ನಾಗಿ ಇರಿಸಿಕೊಳ್ಳಲಾಗಿತ್ತು. ಈ ಬಡ ಜನರಿಂದ ದಿನಕ್ಕೆ 19 ಗಂಟೆಗಳ ಕಾಲ ಕೆಲಸ ತೆಗೆದುಕೊಂಡು ಕೂಲಿ ಹಣವನ್ನು ಸಹ ನೀಡುತ್ತಿರಲಿಲ್ಲ.
ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತ ನೀಡುವಂತೆ ಪಕ್ಷದ ಕಾರ್ಯಕರ್ತರಿಗೆ ಶಾ ಕರೆ ನೀಡಿದ್ದಾರೆ.
ಕೆಲಸ ಹುಡುಕಿಕೊಂಡು ಬಂದ ದಲಿತ ಮತ್ತು ಬುಡಕಟ್ಟು ಸಮುದಾಯದ ಬಡ ಜನರನ್ನು ಜೀತಕ್ಕೆ ದೂಡಲಾಯಿತು. ಅವರೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಯಿತು. ಈ ಘಟನೆಯಿಂದ ದೇಶವೇ ಬೆಚ್ಚಿಬಿದ್ದಿದೆ. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರ ಸಂಪುಟ ವಿಸ್ತರಣೆಯಲ್ಲಿ ಬ್ಯುಸಿಯಾಗಿದೆ. ಸರಕಾರದ ನಡೆಯನ್ನು ಜನರು ಗಮನಿಸುತ್ತಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ' ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ತುತ್ತಿಗಾಗಿ ಕೂಲಿ ಅರಸಿಕೊಂಡು ರಾಜ್ಯದ ಹಾವೇರಿ, ರಾಯಚೂರು ಮತ್ತಿತರ ಜಿಲ್ಲೆಗಳು ಹಾಗೂ ಆಂಧ್ರಪ್ರದೇಶ, ತೆಲಂಗಾಣ ಭಾಗದಿಂದ ರೈಲಿನಲ್ಲಿ ಬರುತ್ತಿದ್ದವರಿಗೆ ಕೆಲಸದ ಆಸೆ ಹುಟ್ಟಿಸಿ 32 ಪುರುಷರು, 16 ಮಹಿಳಾ ಕಾರ್ಮಿಕರು ಸೇರಿದಂತೆ 52 ಮಂದಿಯನ್ನು ಅಕ್ರಮವಾಗಿ ತೆಂಗಿನತೋಟದ ಶೆಡ್ನಲ್ಲಿ ಜೀತದಾಳುಗಳನ್ನಾಗಿ ಇರಿಸಿಕೊಳ್ಳಲಾಗಿತ್ತು. ಈ ಬಡ ಜನರಿಂದ ದಿನಕ್ಕೆ 19 ಗಂಟೆಗಳ ಕಾಲ ಕೆಲಸ ತೆಗೆದುಕೊಂಡು ಕೂಲಿ ಹಣವನ್ನು ಸಹ ನೀಡುತ್ತಿರಲಿಲ್ಲ.