ಆ್ಯಪ್ನಗರ

Mob Lynching in Bihar: ಗೋಮಾಂಸ ಸಾಗಣೆ ಶಂಕೆ: ವ್ಯಕ್ತಿಯನ್ನು ಥಳಿಸಿ ಕೊಂದ ಜನರ ಗುಂಪು

Mob Lynching in Bihar: ಗೋಮಾಂಸ ಸಾಗಿಸುತ್ತಿದ್ದಾನೆ ಎಂಬ ಅನುಮಾನದಲ್ಲಿ ಬಿಹಾರ ಸರನ್ ಜಿಲ್ಲೆಯಲ್ಲಿ 56 ವರ್ಷದ ವ್ಯಕ್ತಿಯನ್ನು ಜನರ ಗುಂಪೊಂದು ಥಳಿಸಿ ಕೊಂದ ಘಟನೆ ವರದಿಯಾಗಿದೆ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Authored byಅಮಿತ್ ಎಂ.ಎಸ್ | Vijaya Karnataka Web 10 Mar 2023, 5:05 pm

ಹೈಲೈಟ್ಸ್‌:

  • ಬಿಹಾರದ ಸರನ್ ಜಿಲ್ಲೆಯ ಜೋಗಿಯಾ ಗ್ರಾಮದಲ್ಲಿ ಮಂಗಳವಾರ ನಡೆದ ಘಟನೆ
  • ಸಂಬಂಧಿಕರನ್ನು ಭೇಟಿ ಮಾಡಲು ತೆರಳುತ್ತಿದ್ದ ಹಾಸನ್ಪುರ ಗ್ರಾಮದ ನಸೀಂ ಖುರೇಷಿ
  • ಗೋಮಾಂಸ ಸಾಗಿಸುತ್ತಿರುವ ಅನುಮಾನದಡಿ ಅಡ್ಡಗಟ್ಟಿದ್ದ ಜನರಿಂದ ತೀವ್ರ ಹಲ್ಲೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web death
ಪಟನಾ: ಗೋಮಾಂಸ ಸಾಗಿಸುತ್ತಿರುವ ಶಂಕೆಯೊಂದಿಗೆ ಬಿಹಾರದ ಸರನ್ ಜಿಲ್ಲೆಯಲ್ಲಿ 56 ವರ್ಷದ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಹೊಡೆದು ಕೊಲ್ಲಲಾಗಿದೆ. ನಸೀಮ್ ಖುರೇಷಿ ಎಂಬಾತ ಕೊಲೆಯಾದ ವ್ಯಕ್ತಿ. ಘಟನೆಗೆ ಸಂಬಂಧಿಸಿದಂತೆ ಈವರೆಗೂ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಲ್ಲಿ ಗ್ರಾಮದ ಸರಪಂಚ್ ಸುಶೀಲ್ ಸಿಂಗ್ ಹಾಗೂ ಗ್ರಾಮಸ್ಥರಾದ ರವಿ ಸಾಹ್ ಮತ್ತು ಉಜ್ವಲ್ ಶರ್ಮಾ ಸೇರಿದ್ದಾರೆ. ಸಂತ್ರಸ್ತನ ಬಳಿ ಗೋಮಾಂಸ ಪತ್ತೆಯಾಗಿದೆಯೇ ಎಂಬುದನ್ನು ಪೊಲೀಸರು ಖಚಿತಪಡಿಸಿಲ್ಲ. ಕೊಲೆಯಾದ ನಸೀಮ್ ಖುರೇಷಿ, ಸಿವಾನ್ ಜಿಲ್ಲೆಯ ಹಸನ್ಪುರ ಗ್ರಾಮದ ನಿವಾಸಿಯಾಗಿದ್ದಾನೆ.
ಗೋಮಾಂಸ ತಿನ್ನುವಂತೆ ಲಿವ್ ಇನ್ ಸಂಗಾತಿಯಿಂದ ಹಿಂಸೆ: ವ್ಯಕ್ತಿ ಆತ್ಮಹತ್ಯೆ

ಸರನ್ ಜಿಲ್ಲೆಯ ಜೋಗಿಯಾ ಗ್ರಾಮದಲ್ಲಿರುವ ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಮಂಗಳವಾರ ನಸೀಮ್ ಖುರೇಷಿ ಹಾಗೂ ಆತನ ಸೋದರಳಿಯ ಫಿರೋಜ್ ಅಹ್ಮದ್ ಖುರೇಷಿ ಇಬ್ಬರೂ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಜೋಗಿಯಾ ಗ್ರಾಮದಲ್ಲಿ ಗುಂಪೊಂದು ಅವರಿಬ್ಬರನ್ನು ಅಡ್ಡಗಟ್ಟಿತ್ತು. ಅವರು ಚೀಲದಲ್ಲಿ ಬೀಫ್ ಸಾಗಿಸುತ್ತಿರಬಹುದು ಎಂಬ ಅನುಮಾನದಡಿ ಪರಿಶೀಲನೆ ನಡೆಸಿತ್ತು. ಈ ವೇಳೆ ವಾಗ್ವಾದ ನಡೆದಿದೆ ಎನ್ನಲಾಗಿದೆ.

ಈ ವೇಳೆ ಅಲ್ಲಿಂದ ಪರಾರಿಯಾಗುವಲ್ಲಿ ಫಿರೋಜ್ ಯಶಸ್ವಿಯಾಗಿದ್ದಾನೆ. ಆದರೆ ನಸೀಮ್‌ನನ್ನು ಗುಂಪು ಮನಬಂದಂತೆ ಥಳಿಸಿದೆ. ನಂತರ ಸ್ಥಳೀಯ ಪೊಲೀಸರ ಕೈಗೆ ಆತನನ್ನು ಒಪ್ಪಿಸಿದೆ. ತೀವ್ರ ಗಾಯಗೊಂಡಿದ್ದ ನಸೀಮ್‌ನನ್ನು ಕೂಡಲೇ ಚಿಕಿತ್ಸೆಗಾಗಿ ಸಿವಾನ್ ಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ವೇಳೆ ಆತ ಮಂಗಳವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Bhiwani Murders: ಬೊಲೆರೋದಲ್ಲಿ ಸುಟ್ಟು ಕರಕಲಾದ 2 ಶವಗಳು ಪತ್ತೆ: ಬಜರಂಗದಳದ ಕಡೆಗೆ ಅನುಮಾನ ತಿರುಗಿದ್ದೇಕೆ?

"ಅವರಿಬ್ಬರನ್ನೂ ಮಸೀದಿ ಸಮೀಪದಲ್ಲಿ ಸ್ಥಳೀಯರು ಅಡ್ಡಗಟ್ಟಿದ್ದರು. ಈ ವೇಳೆ ಅವರ ನಡುವೆ ಮಾತಿಗೆ ಮಾತು ಬೆಳೆದಿತ್ತು. ಫಿರೋಜ್ ಪಲಾಯನ ಮಾಡುವುದರಲ್ಲಿ ಸಫಲನಾಗಿದ್ದ. ನಸೀಮ್‌ನನ್ನು ಜನರ ಗುಂಪು ಬಡಿಗೆಗಳಿಂದ ಥಳಿಸಿದೆ. ಬಳಿಕ ಆ ಗುಂಪಿನವರೇ ಆತನನ್ನು ರಾಸುಲ್ಪುರ ಗ್ರಾಮದ ಪೊಲೀಸರಿಗೆ ಒಪ್ಪಿಸಿದ್ದಾರೆ. ನಸೀಮ್‌ನನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆತ ಅಲ್ಲಿ ಅಸುನೀಗಿದ್ದಾನೆ" ಎಂದು ಸರನ್ ಜಿಲ್ಲೆಯ ಎಸ್‌ಪಿ ಗೌರವ್ ಮಾಂಗ್ಲಾ ತಿಳಿಸಿದ್ದಾರೆ.

ಗುಂಪು ಹತ್ಯೆ ಪ್ರಕರಣದಲ್ಲಿ ಈವರೆಗೂ ಮೂವರನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರೆ ಶಂಕಿತರನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಎಲ್ಲ ಆಯಾಮಗಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ಆಡಳಿತದ ಪಾಲಿಕೆಯಿಂದಲೇ ಮಂಗಳೂರಲ್ಲಿ ಬೀಫ್ ಸ್ಟಾಲ್: ವಿಹಿಂಪ ಕಿಡಿ

ಕುಟುಂಬದವರ ಆರೋಪ

ಐಪಿಸಿ ಸೆಕ್ಷನ್ 302 (ಕೊಲೆ). 34 (ಸಾಮಾನ್ಯ ಉದ್ದೇಶದೊಂದಿಗೆ ಅನೇಕ ಜನರು ಸೇರಿ ನಡೆಸಿರುವ ಕೃತ್ಯ), 379 (ಕಳ್ಳತನ) ಪ್ರಕರಣಗಳನ್ನು ಎಫ್‌ಐಆರ್‌ನಲ್ಲಿ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನು ಮುಚ್ಚಿಹಾಕಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ನಸೀಂ ಕುಟುಂಬದವರು ಆರೋಪಿಸಿದ್ದಾರೆ.

ಜೋಗಿಯಾ ಗ್ರಾಮಕ್ಕೆ ಪ್ರವೇಶಿಸಿದಾಗ ಸರ್‌ಪಂಚ್ ಮತ್ತು ಕೆಲವು ಜನರು ನಮ್ಮನ್ನು ತಡೆದಿದ್ದರು. ನಾವು ಬೀಫ್ ಸಾಗಿಸುತ್ತಿದ್ದೇವೆ ಎಂದು ಆರೋಪಿಸಿದರು. ನಮ್ಮನ್ನು ಹೊಡೆಯುವಂತೆ ತನ್ನ ಜನರಿಗೆ ಅವರು ಸೂಚಿಸಿದ್ದರು. ನನ್ನನ್ನು ಬೆನ್ನಟ್ಟಿ ಬಂದ ಜನರನ್ನು ತಳ್ಳಿ ಹೇಗೋ ತಪ್ಪಿಸಿಕೊಂಡೆ ಎಂದು ಫಿರೋಜ್ ಹೇಳಿದ್ದಾನೆ. ಫೆ. 23ರಂದು ಗಯಾ ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ