ಆ್ಯಪ್ನಗರ

ಉ.ಪ್ರ. ರೈಲು ದುರಂತ; ಹಳಿ ತಪ್ಪಿದ 7 ಬೋಗಿಗಳು

ಮುಜಾಫರ್ ನಗರದ ರೈಲು ದುರಂತ ಮರೆಯಾಗುವ ಮುನ್ನವೇ ಉತ್ತರಪ್ರದೇಶದಲ್ಲಿ ಹೌರಾ -ಜಬಲ್ಪುರ್ ನಡುವೆ ಸಂಚರಿಸುವ ಶಕ್ತಿಪುಂಜ್ ಎಕ್ಸ್‌ಪ್ರೆಸ್‌ ರೈಲಿನ 7 ಬೋಗಿಗಳು ಹಳಿ ತಪ್ಪಿವೆ.

TNN 7 Sep 2017, 10:57 am
ಲಖನೌ: ಮುಜಾಫರ್ ನಗರದ ರೈಲು ದುರಂತ ಮರೆಯಾಗುವ ಮುನ್ನವೇ ಉತ್ತರಪ್ರದೇಶದಲ್ಲಿ ಹೌರಾ -ಜಬಲ್ಪುರ್ ನಡುವೆ ಸಂಚರಿಸುವ ಶಕ್ತಿಪುಂಜ್ ಎಕ್ಸ್‌ಪ್ರೆಸ್‌ ರೈಲಿನ 7 ಬೋಗಿಗಳು ಹಳಿ ತಪ್ಪಿವೆ.
Vijaya Karnataka Web 7 coaches of shaktipunj express derail in up no injuries reported
ಉ.ಪ್ರ. ರೈಲು ದುರಂತ; ಹಳಿ ತಪ್ಪಿದ 7 ಬೋಗಿಗಳು


ಉತ್ತರ ಪ್ರದೇಶದ ಓಬ್ರಾ ಬಳಿ ಮುಂಜಾನೆ 6.30 ರ ವೇಳೆಗೆ ಅವಘಡ ನಡೆದಿದ್ದು, ಇದುವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ. ಘಟನೆಯಿಂದ ಇತರ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

ಕಳೆದ ಒಂದು ತಿಂಗಳಿನಿಂದ ಉತ್ತರ ಪ್ರದೇಶದಲ್ಲಿ ನಡೆದ ಮೂರನೇ ರೈಲು ಅವಘಡ ಇದಾಗಿದೆ. ಆಗಸ್ಟ್ 19 ರಂದು ಮುಜಾಫರ್ ನಗರದಲ್ಲಿ ನಡೆದ 'ಕಳಿಂಗ ಉತ್ಕಲ್ ಎಕ್ಸ್ ಪ್ರೆಸ್' ದುರಂತದಲ್ಲಿ 23 ಜನ ಬಲಿಯಾಗಿದ್ದರು. ಇದಾದ ಬಳಿಕ ಸುರೇಶ್ ಪ್ರಭು ರೈಲ್ವೇ ಖಾತೆಯನ್ನು ತೊರೆದಿದ್ದರು. ಇವರ ಸ್ಥಾನಕ್ಕೆ ಪಿಯೂಷ್ ಗೋಯಲ್‌ರನ್ನು ಆಯ್ಕೆ ಮಾಡಲಾಗಿತ್ತು.

7 coaches of shaktipunj express derail in up, no injuries reported

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ