ಆ್ಯಪ್ನಗರ

ಅಪಹೃತ ಭಾರತೀಯರ ಶೋಧಕ್ಕೆ ಬುಡಕಟ್ಟು ಜನರ ನೆರವು

ಸ್ಥಳೀಯ ಬುಡಕಟ್ಟು ಜನರ ನೆರವಿನೊಂದಿಗೆ ಅಪಹರಣಕ್ಕೆ ಒಳಗಾದ 7 ಮಂದಿ ಭಾರತೀಯ ಎಂಜಿನಿಯರ್‌ಗಳ ಪತ್ತೆಗೆ ಅಫಘಾನಿಸ್ತಾನ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

TIMESOFINDIA.COM 7 May 2018, 3:09 pm
ಕಾಬುಲ್‌: ಸ್ಥಳೀಯ ಬುಡಕಟ್ಟು ಜನರ ನೆರವಿನೊಂದಿಗೆ ಅಪಹರಣಕ್ಕೆ ಒಳಗಾದ 7 ಮಂದಿ ಭಾರತೀಯ ಎಂಜಿನಿಯರ್‌ಗಳ ಪತ್ತೆಗೆ ಅಫಘಾನಿಸ್ತಾನ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
Vijaya Karnataka Web afghan


ಅಪಹೃತಗೊಂಡ ಭಾರತದ ಕೆಇಸಿ ಇಂಟರ್‌ನ್ಯಾಷನಲ್‌ ಸಂಸ್ಥೆಯ 7 ಮಂದಿ ಎಂಜಿನಿಯರ್‌ಗಳ ಪತ್ತೆಗೆ ಪೊಲೀಸ್‌ ಇಲಾಖೆ ಈಗಾಗಲೇ ಅಗತ್ಯ ಕ್ರಮ ಕೈಗೊಂಡಿದ್ದು, ಅಲ್ಲಿನ ಬುಡಕಟ್ಟು ಜನಾಂಗದವರೊಂದಿಗೂ ಚರ್ಚಿಸಲಾಗುತ್ತಿದೆ. ಈ ಮೂಲಕ ಎಂಜಿನಿಯರ್‌ಗಳಿರುವ ಸ್ಥಳವನ್ನು ತಲುಪುವ ಪ್ರಯತ್ನ ಮಾಡಲಾಗುತ್ತಿದೆ. ಚೇಷ್ಮಾ ಇ ಶೇರ್‌ ಪ್ರದೇಶದಲ್ಲಿ ಪವರ್‌ ಸಬ್‌ ಸ್ಟೇಷನ್‌ ಯೋಜನೆಯ ಸಂಬಂಧ ಕೆಲಸಕ್ಕೆ ಆಗಮಿಸಿದ್ದ ಅವರು ತಾಲಿಬಾನಿ ಉಗ್ರರಿಂದ ಅಪಹರಣಕ್ಕೆ ಒಳಗಾಗಿದ್ದಾರೆ. ಈ ವರೆಗೆ ಯಾವುದೇ ಉಗ್ರ ಸಂಘಟನೆ ಅಪಹರಣದ ಹೊಣೆ ಹೊತ್ತಿಲ್ಲ ಎಂದು ಅಫಘಾನಿಸ್ತಾನ್‌ ಪೊಲೀಸ್‌ ಮೂಲಗಳು ಹೇಳಿದೆ.

ಅಫಘಾನಿಸ್ತಾನ ಸರಕಾರದ ಅಧಿಕಾರಿಗಳೆಂದು ಭಾವಿಸಿ, ತಾಲಿಬಾನಿಗಳು ಅಪಹರಣ ಮಾಡಲಾಗಿದ್ದು, ಬಿಡುಗಡೆಗೆ ಅಗತ್ಯವಾದ ಎಲ್ಲ ಕ್ರಮಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ