ಕಾಸರಗೋಡು(ಕೇರಳ): ಉಗ್ರ ಸಂಘಟನೆ ಐಸಿಸ್ ಸೇರುವುದಕ್ಕಾಗಿ ಕೇರಳದ ಏಳು ಯುವಕರು ದೇಶ ತೊರೆದಿರುವ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೊಚ್ಚಿ ಘಟಕ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಏಳು ಯುವಕರು ಕೇರಳದಿಂದ ಬೇರೆ ಬೇರೆ ದಿನ ತೆರಳಿರುವುದನ್ನು ಎನ್ಐಎ ಖಚಿತಪಡಿಸಿದೆ. ತನಿಖೆಯಲ್ಲಿ ಈ ಯುವಕರು ಐಸಿಸ್ ಅಂಗಸಂಸ್ಥೆಗಳಾದ ಜುಂಡ್ ಅಲ್-ಅಕ್ಸಾ ಮತ್ತು ಜಬಾತ್ ಅಲ್-ನುಸ್ರಾಹ್ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕಾಸರಗೋಡು ಹಾಗೂ ಇತರ ಜಿಲ್ಲೆಗಳಿಂದ ಐಸಿಸ್ಗೆ ಮಲೆಯಾಳಿಗಳು ತೆರಳಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭ ಈ ಏಳು ಯುವಕರೂ ಉಗ್ರ ಸಂಘಟನೆಗಳನ್ನು ಸೇರಿದ ಬಗ್ಗೆ ಮಾಹಿತಿ ಲಭಿಸಿದೆ. ರಾಜ್ಯ ಮಾತ್ರವಲ್ಲದೆ ನೆರೆಯ ಕರ್ನಾಟಕದಿಂದಲೂ ಸಾಕಷ್ಟು ಮಂದಿ ಉಗ್ರ ಸಂಘಟನೆ ಸೇರಿರುವ ಶಂಕೆಯನ್ನು ಎನ್ಐಎ ವ್ಯಕ್ತಪಡಿಸಿದೆ. 2013ರಿಂದ ಐಸಿಸ್ಗೆ ಯುವಕರು ಆಕರ್ಷಿತರಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಭಯೋತ್ಪಾದಕ ಸಂಘಟನೆಗಳು ಸಾಮಾಜಿಕ ಜಾಲತಾಣಗಳ ಮೂಲಕ ಈಗಲೂ ಯುವಕರನ್ನು ಸಂಪರ್ಕಿಸುತ್ತಿರುವುದನ್ನು ಎನ್ಐಎ ತಂಡ ಖಾತರಿಪಡಿಸಿದೆ.
ಐಸಿಸ್ಗೆ ಕೇರಳದ 7 ಯುವಕರು: ಎನ್ಐಎಯಿಂದ ತನಿಖೆ ಆರಂಭ
ತನಿಖೆಯಲ್ಲಿ ಈ ಯುವಕರು ಐಸಿಸ್ ಅಂಗಸಂಸ್ಥೆಗಳಾದ ಜುಂಡ್ ಅಲ್-ಅಕ್ಸಾ ಮತ್ತು ಜಬಾತ್ ಅಲ್-ನುಸ್ರಾಹ್ ಸೇರಿಕೊಂಡಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಕಾಸರಗೋಡು ಹಾಗೂ ಇತರ ಜಿಲ್ಲೆಗಳಿಂದ ಐಸಿಸ್ಗೆ ಮಲೆಯಾಳಿಗಳು ತೆರಳಿದ ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭ ಈ ಏಳು ಯುವಕರೂ ಉಗ್ರ ಸಂಘಟನೆಗಳನ್ನು ಸೇರಿದ ಬಗ್ಗೆ ಮಾಹಿತಿ ಲಭಿಸಿದೆ.
Vijaya Karnataka 12 Jan 2019, 5:00 am