ಆ್ಯಪ್ನಗರ

7ರ ಬಾಲಕಿಯ ಕೊಲೆ, ಅತ್ಯಾಚಾರ; ಇಂತಹ ಕೃತ್ಯ ಎಲ್ಲೂ ನೋಡಿಲ್ಲ: ಪೊಲೀಸ್‌

ನಗರದಲ್ಲಿ ಕುಲತಪುಳದಲ್ಲಿ ಏಳು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅತ್ಯಂತ ಹೀನ ಕೃತ್ಯವಾಗಿದ್ದು, ಈ ರೀತಿಯ ಆರೋಪಿಯನ್ನು ಎಲ್ಲೂ ನೋಡಿಲ್ಲ ತನಿಖೆ ನಡೆಸಿದ ಅಧಿಕಾರಿಗಳು ಹೇಳಿದ್ದಾರೆ.

TNN 1 Oct 2017, 4:41 pm
ತಿರುವನಂತಪುರಂ: ನಗರದ ಕುಲತಪುಳದಲ್ಲಿ ಏಳು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಅತ್ಯಂತ ಹೀನ ಕೃತ್ಯವಾಗಿದ್ದು, ಈ ರೀತಿಯ ಆರೋಪಿಯನ್ನು ಎಲ್ಲೂ ನೋಡಿಲ್ಲ ತನಿಖೆ ನಡೆಸಿದ ಅಧಿಕಾರಿಗಳು ಹೇಳಿದ್ದಾರೆ.
Vijaya Karnataka Web 7 year old was raped even after she was murdered
7ರ ಬಾಲಕಿಯ ಕೊಲೆ, ಅತ್ಯಾಚಾರ; ಇಂತಹ ಕೃತ್ಯ ಎಲ್ಲೂ ನೋಡಿಲ್ಲ: ಪೊಲೀಸ್‌


ಕೆಲ ದಿನಗಳ ಹಿಂದೆ ಏರೂರು ನಿವಾಸಿ ಏಳು ವರ್ಷದ ಬಾಲಕಿಯ ಮೃತದೇಹ ಮನೆಯಿಂದ 12 ಕಿ.ಮಿ. ದೂರದಲ್ಲಿ ಹತ್ಯೆಯಾಗಿ ಪತ್ತೆಯಾಗಿತ್ತು. ತನಿಖೆ ದಾಖಲಿಸಿಕೊಂಡ ಪೊಲೀಸರು ಮಗುವಿನ ಮಾವ ರಾಜೇಶ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಸುಮಾರು 1,500 ಎಕ್ರೆ ಪ್ರದೇಶದ ಮೂಲೆಯೊಂದರಲ್ಲಿ ರಾಜೇಶ್‌ ಮಗುವನ್ನು ಕೊಲೆಗೈದು ಬಳಿಕ ಅತ್ಯಾಚಾರ ನಡೆಸಿದ್ದಾನೆ. ಬಳಿಕ ಮಗುವಿನ ದೇಹ ಸಿಗದಂತೆ ಅಲ್ಲೇ ಹೂತು ಹಾಕಬಹುದಿತ್ತು. ಇಲ್ಲವೇ ಕೊಲೆಗೆ ಯಾವುದೇ ಸಾಕ್ಷ ಸಿಗದಂತೆ ಮಾಡಬಹುದಿತ್ತು. ಆದರೆ ರಾಜೇಶ್‌ ಆ ರೀತಿ ಮಾಡದೇ ಕೇವಲ ಮೃತ ದೇಹವನ್ನು ಅಲ್ಲೇ ಬಿಟ್ಟು ಹೋಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ವಿಚಾರಣೆ ವೇಳೆ ಈತ ಉದ್ದೇಶ ಪೂರ್ವಕವಾಗಿಯೇ ಮಗುವಿನ ದೇಹವನ್ನುಅಲ್ಲಿ ಬಿಟ್ಟು ಹೋಗಿದ್ದ ಎಂದು ಹೇಳಿದ್ದಾನೆ. ಮೃತ ದೇಹವನ್ನು ಯಾರಾದರೂ ಮನೆಗೆ ತಲುಪಿಸುತ್ತಾರೆ ಎಂಬ ಉದ್ಧೇಶದಿಂದ ಈ ರೀತಿ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ಸ್ಥಳೀಯರ ಮಾಹಿತಿಗಳ ಪ್ರಕಾರ ಮಗುವಿನ ತಾಯಿ ಹಾಗೂ ರಾಜೇಶ್‌ನ ಹೆಂಡತಿಯ ಜೀವನ ಶೈಲಿಯೇ ಮಗುವಿನ ಮೇಲೆ ಅತ್ಯಾಚಾರ ನಡೆಸಲು ರಾಜೇಶ್‌ಗೆ ಪ್ರೇರಣೆ ನೀಡಿರಬಹುದು ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ