ಆ್ಯಪ್ನಗರ

ಮಧ್ಯ ಪ್ರದೇಶ, ಮಿಜೋರಾಂನಲ್ಲಿ 75% ಮತದಾನ

ಮಧ್ಯಪ್ರದೇಶದಲ್ಲಿ ಕಳೆದ ಬಾರಿಗಿಂತ ಹೆಚ್ಚು, ಮಿಜೋರಾಂನಲ್ಲಿ ಕಳೆದ ಬಾರಿಗಿಂತ ಕಡಿಮೆ ವೋಟಿಂಗ್. ಫಲಿತಾಂಶ ಡಿ.೧೧ಕ್ಕೆ.

Vijaya Karnataka 29 Nov 2018, 5:00 am
ಹೊಸದಿಲ್ಲಿ: ಮುಂಬರುವ ಲೋಕಸಭಾ ಮಹಾ ಸಮರದ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಗಳ ಪೈಕಿ ಮಧ್ಯಪ್ರದೇಶ ಹಾಗೂ ಮಿಜೋರಾಂ ಬುಧವಾರ ಮತದಾನಕ್ಕೆ ಸಾಕ್ಷಿಯಾದವು.
Vijaya Karnataka Web 28112-PTI11_28_2018_000047A

ಮಧ್ಯ ಪ್ರದೇಶದ ಭಿಂಡ್‌ ಜಿಲ್ಲೆಯ ಹಲವೆಡೆ ತುಸು ಹಿಂಸಾಚಾರ ಹೊರತುಪಡಿಸಿದರೆ, ಉಭಯ ರಾಜ್ಯಗಳಲ್ಲೂ ಮತದಾನ ಶಾಂತಿಯುತವಾಗಿತ್ತು.
ಮಧ್ಯ ಪ್ರದೇಶದಲ್ಲಿ ಶೇ. 74.61ರಷ್ಟು ಮತದಾನ ದಾಖಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಇದು ಶೇ. 2ರಷ್ಟು ಏರಿಕೆ ಎನಿಸಿದೆ. ಕಳೆದ ಚುನಾವಣೆಯಲ್ಲಿ 72.69% ಮತದಾನವಾಗಿತ್ತು.
ಮಿಜೋರಾಂನಲ್ಲಿ 75 % ಮತದಾನ ನಡೆದಿದ್ದು,
ವಿದ್ಯುನ್ಮಾನ ಮತಯಂತ್ರಗಳು ಮತ್ತು ವಿವಿಪ್ಯಾಟ್‌ ಯಂತ್ರಗಳ ದೋಷದಿಂದ ಕೆಲ ಕಾಲ ಗೊಂದಲ ಉಂಟಾಗಿತ್ತು. ದೋಷದ ಬಗ್ಗೆ ದೂರಿನ ಹಿನ್ನೆಲೆಯಲ್ಲಿ 1,145 ಇವಿಎಂ ಮತ್ತು 1,545 ವಿವಿಪ್ಯಾಟ್‌ ಯಂತ್ರಗಳನ್ನು ಬದಲಾಯಿಸಿದ್ದಾಗಿ ಮುಖ್ಯ ಚುನಾವಣಾಧಿಕಾರಿ ವಿ.ಎಲ್‌. ಕಾಂತಾ ರಾವ್‌ ಹೇಳಿದ್ದಾರೆ.
ಇದೇ ವೇಳೆ, ಮತಯಂತ್ರ ದೋಷ ಕಂಡುಬಂದೆಡೆ ಮರು ಚುನಾವಣೆಗಾಗಿ ಪ್ರತಿಪಕ್ಷಗಳು ಮಾಡಿದ ಆಗ್ರಹವನ್ನು ಅವರು ತಿರಸ್ಕರಿಸಿದ್ದಾರೆ.
ಒಟ್ಟು 230 ಕ್ಷೇತ್ರಗಳ ಪೈಕಿ 227 ಕ್ಷೇತ್ರಗಳಲ್ಲಿ ಬೆಳಗ್ಗೆ 8ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆದರೆ, ಬಾಲಘಾಟ್‌ ಜಿಲ್ಲೆಯ ನಕ್ಸಲ್‌ ಪೀಡಿತ ಮೂರು ಕ್ಷೇತ್ರಗಳಾದ ಲಾಂಜಿ, ಪರಸ್ವಾಡ ಮತ್ತು ಬೈಹಾರ್‌ನಲ್ಲಿ ಬೆಳಗ್ಗೆ 7ರಿಂದ ಸಂಜೆ 3ರವರೆಗೆ ಮತದಾನ ನಡೆಯಿತು.
ಘಟಾನುಘಟಿಗಳಿಂದ ಮತದಾನ: ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಹಿರಿಯ ಕಾಂಗ್ರೆಸ್‌ ಮುಖಂಡರಾದ ಕಮಲ್‌ ನಾಥ್‌, ಜ್ಯೋತಿರಾಧಿತ್ಯ ಸಿಂಧಿಯಾ, ದಿಗ್ವಿಜಯ್‌ ಸಿಂಗ್‌ ಮತ್ತಿತರ ಪ್ರಮುಖರು ಮತ ಚಲಾವಣೆ ಮಾಡಿದರು.
ಡಿ.11ರಂದು ಉಭಯ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದೆ.

ಕಾಮ್‌ದಾರ್‌ ವರ್ಸಸ್‌ ನಾಮ್‌ದಾರ್‌ ಹೋರಾಟ
ಭರತ್‌ಪುರ/ನಾಗ್ಪುರ: ರಾಜಸ್ಥಾನದ ಚುನಾವಣಾ ರಾರ‍ಯಲಿಯಲ್ಲಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ಮೋದಿ, ರಾಜ್ಯದಲ್ಲೀಗ 'ಕಾಮ್‌ದಾರ್‌' ಹಾಗೂ 'ನಾಮ್‌ದಾರ್‌' ನಡುವೆ ಹೋರಾಟ ಶುರುವಾಗಿದೆ ಎಂದು ಹೇಳಿದ್ದಾರೆ.
ರಾಜಸ್ಥಾನದ ನಾಗೌರ್‌ ಮತ್ತು ಭರತ್‌ಪುರದಲ್ಲಿ ಚುನಾವಣಾ ರಾರ‍ಯಲಿಯಲ್ಲಿ ಮೋದಿ ಅವರು, ಅಭಿವೃದ್ಧಿ ಕಾರ್ಯಗಳ ಮೂಲಕ ಪ್ರಗತಿಗೆ ಶ್ರಮಿಸುವ ನಮ್ಮ ಬಿಜೆಪಿ ಸರಕಾರ ಕಾಮ್‌ದಾರ್‌ನಂತೆ ಕೆಲಸ ಮಾಡುತ್ತದೆ. ಆದರೆ ಮನೆತನದ ಹೆಸರಿನಿಂದಲೇ ರಾಜಕೀಯ ಮಾಡುವ ನಾಮ್‌ದಾರ್‌ಗೆ ಹೆಸರುಬೇಳೆ (ಮೂಂಗ್‌ ದಾಲ್‌ ) ಮಸೂರ ಅವರೆ (ಮಸೂರ್‌ ದಾಲ್‌) ನಡುವಿನ ವತ್ಯಾಸ ಗೊತ್ತಿಲ್ಲ. ಇಂತಹವರು ರೈತರ ಬಗ್ಗೆ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಟೀಕಿಸಿದ್ದಾರೆ.
ನಕ್ಸಲರನ್ನು ಹಾಗೂ ನಕ್ಸಲ್‌ ಚಟುವಟಿಕೆಗಳಿಗೆ ಬೆಂಬಲ ನೀಡುವವರನ್ನು ಕ್ರಾಂತಿಕಾರರು ಎಂದು ಕರೆಯುವ ಕಾಂಗ್ರೆಸ್‌ ನಾಯಕರಿಗೆ ಯೋಧರ ತ್ಯಾಗ-ಬಲಿದಾನದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ ಎಂದು ಮೋದಿ ಜರಿದಿದ್ದಾರೆ. ಬಡತನದ ಕಷ್ಟಗಳನ್ನು ಅನುಭವಿಸದೇ ಬೆಳೆದು ಬಂದ ನಾಮ್‌ದಾರ್‌ಗೆ ಕೃಷಿ ಬಗ್ಗೆ ಕಿಂಚಿತ್ತೂ ಅರಿವಿಲ್ಲ. ಇಂತಹ ವ್ಯಕ್ತಿ ರೈತರಿಗಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಒಂದೊಮ್ಮೆ ಹಿಂದಿನ ಕಾಂಗ್ರೆಸ್‌ ಸರಕಾರ ಕೃಷಿ ವಿಜ್ಞಾನಿ ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಜಾರಿಗೆ ತಂದಿದ್ದರೆ ರೈತರು ಸಾಲಬಾಧೆಯಿಂದ ನರಳುತ್ತಿರಲಿಲ್ಲ ಎಂದು ಮೋದಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ