ಆ್ಯಪ್ನಗರ

ಭಾರತ-ಚೀನಾ ಕಮಾಂಡರ್‌ ಮಟ್ಟದ ಸಭೆ: ಗಡಿಯಿಂದ ಡ್ರ್ಯಾಗನ್‌ ಸೇನೆ ಪೂರ್ಣ ವಾಪಸ್‌ಗೆ ಪಟ್ಟು!

​​ಭಾರತ ಭಾಗದ ಪೂರ್ವ ಲಡಾಖ್‌ನ ಛುಶುಲ್‌ನಲ್ಲಿ ಮಧ್ಯಾಹ್ನದಿಂದ ಮಾತುಕತೆ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ಬಾರಿ ಮೊಂಡು ವಾದಗಳ ಮಂಡನೆ ಬಿಟ್ಟು , ಜಾರಿ ಸಾಧ್ಯ ಕ್ರಮಗಳ ಬಗ್ಗೆ ಮಾತ್ರ ಚರ್ಚೆ ನಡೆಸಲು ಉಭಯ ಕಡೆಯ ನಾಯಕರು ನಿರ್ಧರಿಸಿದ್ದಾರೆ.

Vijaya Karnataka Web 12 Oct 2020, 7:07 am
ಹೊಸದಿಲ್ಲಿ: ಗಡಿ ಸಂಘರ್ಷ ಶಮನಕ್ಕೆ ಭಾರತ-ಚೀನಾ ನಡುವೆ ಮಿಲಿಟರಿ ಕಮಾಂಡರ್‌ಗಳ ಮಟ್ಟದ ಏಳನೇ ಸುತ್ತಿನ ಮಹತ್ವದ ಸಭೆ ಸೋಮವಾರ ನಡೆಯಲಿದೆ. ಪೂರ್ವ ಲಡಾಖ್‌ನ ವಿವಾದಗ್ರಸ್ತ ಮುಂಚೂಣಿ ನೆಲೆಗಳಿಂದ ಬೇಷರತ್ತಾಗಿ ಸೇನೆ ವಾಪಸ್‌ ಪಡೆಯುವಂತೆ ಚೀನಾದ ಮೇಲೆ ಒತ್ತಡ ಹೇರಲು ಭಾರತ ಅಗತ್ಯ ತಯಾರಿ ಮಾಡಿಕೊಂಡಿದೆ.
Vijaya Karnataka Web India-China


ಭಾರತ ಭಾಗದ ಪೂರ್ವ ಲಡಾಖ್‌ನ ಛುಶುಲ್‌ನಲ್ಲಿ ಮಧ್ಯಾಹ್ನದಿಂದ ಮಾತುಕತೆ ಆರಂಭಗೊಳ್ಳುವ ಸಾಧ್ಯತೆ ಇದೆ. ಈ ಬಾರಿ ಮೊಂಡು ವಾದಗಳ ಮಂಡನೆ ಬಿಟ್ಟು , ಜಾರಿ ಸಾಧ್ಯ ಕ್ರಮಗಳ ಬಗ್ಗೆ ಮಾತ್ರ ಚರ್ಚೆ ನಡೆಸಲು ಉಭಯ ಕಡೆಯ ನಾಯಕರು ನಿರ್ಧರಿಸಿದ್ದಾರೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಜೈಶಂಕರ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಒಳಗೊಂಡ 'ಚೀನಾ ಸ್ಟಡಿ ಗ್ರೂಪ್‌' ಭಾನುವಾರ ಸಭೆ ಸೇರಿ ಭಾರತದ ವಾದ ಹೇಗಿರಬೇಕು ಎನ್ನುವ ಕುರಿತು ಮಾರ್ಗದರ್ಶಿಕೆ ರೂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ 2 ಬೀಚ್‌ಗಳಿಗೆ ಸ್ವಚ್ಛತೆಯ ‘ಬ್ಲೂಫ್ಲ್ಯಾಗ್‌’ ಹಿರಿಮೆ..! ಅಂತರಾಷ್ಟ್ರೀಯ ಮೆಚ್ಚುಗೆಗೆ ಸಮುದ್ರತೀರಗಳು ಪಾತ್ರ

ಕಳೆದ ಹಲವು ತಿಂಗಳಿನಿಂದ ಗಡಿ ಸಮಾಧಾನದ ಬಗ್ಗೆ ಕಮಾಂಡರ್‌ ಮಟ್ಟದ ಸಭೆ ನಡೆಯುತ್ತಿದ್ದರು, ಚೀನಾ ಮಾತ್ರ ತನ್ನ ನರಿ ಬುದ್ದಿ ಮುಂದುವರಿಸಿದೆ. ಸುಖಾ ಸುಮ್ಮನೆ ಗಡಿಯಲ್ಲಿ ತಂಟೆ ನಡೆಸುತ್ತಿದೆ. ಭಾರತವು ಇದಕ್ಕೆ ತಕ್ಕ ಉತ್ತರ ನೀಡುತ್ತಿದೆ. ಈಗಾಗಲೇ ಭಾರತದ ಕೆಲವು ಆಯಕಟ್ಟಿನ ಜಾಗವನ್ನು ತನ್ನ ತಕ್ಕೆಗೆದುಕೊಳ್ಳುವ ಮೂಲಕ ಪಾರಮ್ಯ ಸ್ಥಾಪಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ