ಆ್ಯಪ್ನಗರ

ಛತ್ತೀಸ್‌ಗಢ: ನಕ್ಸಲರ ದಾಳಿ, 9 ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮ

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಮಂಗಳವಾರ ನಡೆಸಿದ ದಾಳಿಗೆ ಕನಿಷ್ಠ 9 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಬಲಿಯಾಗಿದ್ದಾರೆ.

Vijaya Karnataka Web 13 Mar 2018, 3:34 pm
ಹೊಸದಿಲ್ಲಿ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಮಂಗಳವಾರ ನಡೆಸಿದ ದಾಳಿಗೆ ಕನಿಷ್ಠ 9 ಮಂದಿ ಸಿಆರ್‌ಪಿಎಫ್‌ ಸಿಬ್ಬಂದಿ ಬಲಿಯಾಗಿದ್ದಾರೆ.
Vijaya Karnataka Web 8 crpf personnel martyred in naxal attack in chhattisgarhs sukma district
ಛತ್ತೀಸ್‌ಗಢ: ನಕ್ಸಲರ ದಾಳಿ, 9 ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮ


ಭದ್ರತಾ ಪಡೆಗಳು ರಾಜ್ಯದಲ್ಲಿ 10 ನಕ್ಸಲರನ್ನು ಹೊಡೆದುರುಳಿಸಿದ 11 ದಿನಗಳ ಬಳಿಕ ಮಾವೋ ಉಗ್ರರು ಈ ಪ್ರತಿದಾಳಿ ನಡೆಸಿದ್ದಾರೆ. 6 ತಿಂಗಳ ಹಿಂದೆ 25 ಸಿಆರ್‌ಪಿಎಫ್‌ ಯೋಧರನ್ನು ಮಾವೋ ಉಗ್ರರು ಕೊಂದಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ 300-400 ಮಂದಿ ಎಡಪಂಥೀಯ ಉಗ್ರರು ರಸ್ತೆ ನಿರ್ಮಾಣದಲ್ಲಿ ಸಹಕರಿಸುತ್ತಿದ್ದ 99 ಯೋಧರ ಮೇಲೆ ಹಠಾತ್‌ ದಾಳಿ ನಡೆಸಿದ್ದರು.

ಕಳೆದ ವರ್ಷದ ಮಾರ್ಚ್‌ನಲ್ಲೂ ಸುಕ್ಮಾ ಜಿಲ್ಲೆಯಲ್ಲಿ ರಸ್ತೆ ತೆರವುಗೊಳಿಸುತ್ತಿದ್ದ 12 ಸಿಆರ್‌ಪಿಎಫ್‌ ಸಿಬ್ಬಂದಿಯ ಮೇಲೆ ನಕ್ಸಲರು ದಾಳಿ ನಡೆಸಿದ್ದರು.

ಭದ್ರತಾ ಪಡೆಗಳು ಕೂಡ ನಕ್ಸಲರ ಹಾವಳಿ ನಿಯಂತ್ರಿಸುವಲ್ಲಿ ತಕ್ಕಮಟ್ಟಿನ ಯಶಸ್ಸು ಕಂಡಿವೆ. ಕಳೆದ ಎರಡು ವರ್ಷಗಳಲ್ಲಿ ಛತ್ತೀಸಗಢದಲ್ಲಿ 300ಕ್ಕೂ ಹೆಚ್ಚು ಮಾವೋ ಉಗ್ರರನ್ನು ಎನ್‌ಕೌಂಟರ್‌ಗಳಲ್ಲಿ ಹೊಡೆದುರುಳಿಸಲಾಗಿದೆ ಎಂದು ರಾಜ್ಯ ಗೃಹಸಚಿವ ರಾಮ್‌ಸೇವಕ್‌ ಪೈಕ್ರಾ ಕಳೆದ ತಿಂಗಳು ವಿಧಾನಸಭೆಗೆ ಮಾಹಿತಿ ನೀಡಿದ್ದರು.

ನಕ್ಸಲರ ಭದ್ರಕೋಟೆ ಎಂದೇ ಪರಿಗಣಿಸಲಾದ ಅಬುಝ್‌ಮಧ್ ಅರಣ್ಯದಲ್ಲಿ ಉಗ್ರರ ಮೇಲೆ ಸರ್ಜಿಕಲ್‌ ದಾಳಿ ನಡೆಸಲು ಸಿಆರ್‌ಪಿಎಫ್‌ ಮೂರು ಕಾಯಂ ನೆಲೆಗಳನ್ನು ಸ್ಥಾಪಿಸಿದೆ ಎಂದು ಪಿಟಿಐ ವರದಿ ಮಾಡಿದೆ.

4,000 ಚದರ ಕಿ.ಮೀ ವಿಸ್ತೀರ್ಣದ 'ಅಬುಜ್' (ಅಪರಿಚಿತ) 'ಮಧ್' (ಬೆಟ್ಟ)ದ ದುರ್ಗಮ ದಟ್ಟಾರಣ್ಯದಲ್ಲಿ ಅರೆಮಿಲಿಟರಿ ಪಡೆ (ಸಿಆರ್‌ಪಿಎಫ್‌) ಹಾಗೂ ರಾಜ್ಯ ಪೊಲೀಸ್‌ ಪಡೆಗಳು ಮೂರು ಕಾಯಂ ನೆಲೆ ಸ್ಥಾಪಿಸಿವೆ.

ಇದುವರೆಗೂ ಭದ್ರತಾ ಪಡೆಗಳು ಅಬುಜ್‌ಮಧ್‌ ಅರಣ್ಯದ ಬಸ್ತಾರ್‌ ಪ್ರಾಂತ್ಯದಲ್ಲಿ ಆಗಾಗ್ಗೆ ಗಸ್ತು ತಿರುಗಾಟ ಮಾತ್ರ ನಡೆಸುತ್ತಿದ್ದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ