ಆ್ಯಪ್ನಗರ

ಪರಾರಿಯಾದ ಉಗ್ರರು ಎನ್‌ಕೌಂಟರ್‌ಗೆ ಬಲಿ

ಭೋಪಾಲ್ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಎಲ್ಲ ಎಂಟು ಸಿಮಿ ಉಗ್ರರನ್ನು ಭೋಪಾಲ್ ಹೊರವಲಯದಲ್ಲಿ ಹತ್ಯೆಗೈಯಲಾಗಿದೆ.

ಏಜೆನ್ಸೀಸ್ 31 Oct 2016, 1:20 pm
ಹೊಸದಿಲ್ಲಿ: ಭೋಪಾಲ್ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಎಲ್ಲ ಎಂಟು ಸಿಮಿ ಉಗ್ರರನ್ನು ಭೋಪಾಲ್ ಹೊರವಲಯದಲ್ಲಿ ಹತ್ಯೆಗೈಯಲಾಗಿದೆ.
Vijaya Karnataka Web 8 simi terrorists who escaped bhopal central jail killed in encounter
ಪರಾರಿಯಾದ ಉಗ್ರರು ಎನ್‌ಕೌಂಟರ್‌ಗೆ ಬಲಿ


ಗ್ರಾಮಸ್ಥರ ಮಾಹಿತಿಯನ್ನಾಧರಿಸಿ ಎಟಿಸ್ ಹಾಗೂ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಭೋಪಾಲ್ ಹೊರವಲಯದ ಇತ್ಖೇಡಿ ಗ್ರಾಮದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಎಲ್ಲರೂ ಮೃತಪಟ್ಟಿದ್ದಾರೆ.

ಅತೀವ ಭದ್ರತೆ ಇರುವ ಕಾರಾಗೃಹದಿಂದ ನಿಷೇಧಿತ ಸಿಮಿ ಸಂಘಟನೆಗೆ ಸೇರಿದ ಎಂಟು ಉಗ್ರರು ಭದ್ರತಾ ಸಿಬ್ಬಂದಿ ಕತ್ತು ಸೀಳಿ, ಬೆಟ್‌ಶೀಟ್‌ಗಳನ್ನೇ ಹಗ್ಗವನ್ನಾಗಿಸಿಕೊಂಡು, ಜೈಲಿನ ಗೋಡೆ ಹತ್ತಿ ಪರಾರಿಯಾಗಿದ್ದರು.

ಉಗ್ರರು ಪರಾರಿ: ದೇಶಾದ್ಯಂತ ಕಟ್ಟೆಚ್ಚರ

ಪರಾರಿಯಾದವರೆಲ್ಲರೂ ಉಗ್ರ ಹಾಗೂ ಇತರೆ ದುಷ್ಕೃತ್ಯ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದರು. ಇವರಿಗೆ ಇಂಡಿಯನ್ ಮುಜಾಹಿದ್ದೀನ್ ಸೇರಿ ಇತರೆ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಇರುವ ಶಂಕೆಯೂ ಇತ್ತು.

ದುರಾದೃಷ್ಟಕರ:

ಉಗ್ರರು ಜೈಲಿನಿಂದ ಪರಾರಿಯಾಗಿರುವುದು 'ದುರಾದೃಷ್ಟಕರ' ಎಂದು ಮಧ್ಯಪ್ರದೇಶ ಗೃಹ ಸಚಿವ ಭುಪೇಂದ್ರ ಸಿಂಗ್ ಹೇಳಿದ್ದು, ಆ ವೇಳೆ ಕರ್ತವ್ಯದಲ್ಲಿದ್ದ ಕಾರಾಗೃಹ ಅಧಿಕಾರಿಗಳನ್ನು ವಜಾಗೊಳಿಸಿದ್ದಾರೆ.

ಭೋಪಾಲ್ ಜೈಲಿಂದ 8 ಉಗ್ರರು ಪರಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ