ಆ್ಯಪ್ನಗರ

ಆ್ಯಸಿಡ್‌ನಿಂದ ನಾಶವಾಗಿದ್ದ ಮಗುವಿನ ಅನ್ನನಾಳ ಮರುಸೃಷ್ಟಿ

ಅಚಾನಕ್‌ಆಗಿ ಆ್ಯಸಿಡ್ ಕುಡಿದ ಪರಿಣಾಮ ನಾಶಗೊಂಡಿದ್ದ ಅನ್ನನಾಳವನ್ನು ಮರುಸೃಷ್ಟಿಸುವಲ್ಲಿ ಅಹಮದಾಬಾದ್‌ನ ವೈದ್ಯರು ಯಶಸ್ವಿಯಾಗಿದ್ದಾರೆ.

Ahmedabad Mirror 25 May 2017, 4:43 pm
ಅಹಮದಾಬಾದ್: ಅಚಾನಕ್‌ಆಗಿ ಆ್ಯಸಿಡ್ ಕುಡಿದ ಪರಿಣಾಮ ನಾಶಗೊಂಡಿದ್ದ ಅನ್ನನಾಳವನ್ನು ಮರುಸೃಷ್ಟಿಸುವಲ್ಲಿ ಅಹಮದಾಬಾದ್‌ನ ವೈದ್ಯರು ಯಶಸ್ವಿಯಾಗಿದ್ದಾರೆ. ಇದರಿಂದ 8 ವರ್ಷದ ಮಗು ನೇಹಾ ಎಲ್ಲರಂತೆ ಎಲ್ಲಾ ವಿಧದ ಆಹಾರವನ್ನು ಸೇವಿಸುವಂತಾಗಿದ್ದಾಳೆ.
Vijaya Karnataka Web 8 year old gets new food pipe
ಆ್ಯಸಿಡ್‌ನಿಂದ ನಾಶವಾಗಿದ್ದ ಮಗುವಿನ ಅನ್ನನಾಳ ಮರುಸೃಷ್ಟಿ


ಉತ್ತರ ಪ್ರದೇಶದ ಮಾವ್ ಜಿಲ್ಲೆಯ ರಾಮ್ ಪ್ರಕಾಶ್ ಮತ್ತು ಪ್ರೀತಿ ದಂಪತಿಯ ಪುತ್ರಿ 8 ವರ್ಷ ನೇಹಾ, ಪ್ಲಾಸ್ಟಿಕ್ ಅನ್ನನಾಳದ ಜೋಡಣೆಯಿಂದಾಗಿ ಎಲ್ಲರಂತೆ ಊಟ ಮಾಡುತ್ತಿದ್ದಾಳೆ. ನೇಹಾ 1.5 ವರ್ಷದವಳಿದ್ದಾಗ ಗೊತ್ತಾಗದೆ ಆ್ಯಸಿಡ್ ಸೇವಿಸಿದ್ದಳು. ಪರಿಣಾಮ ಕೇವಲ 1 ಸೆಂ.ಮೀ.ನಷ್ಟು ಅನ್ನನಾಳ ಉಳಿದಿತ್ತು. ಇದರಿಂದ ಆಕೆಗೆ ಎಂಜಲನ್ನು ನುಂಗಲು ಕಷ್ಟವಾಗುತ್ತಿತ್ತು.

ಪ್ರಾರಂಭದಲ್ಲಿ ಲಖನೌ ಆಸ್ಪತ್ರೆಯೊಂದರಲ್ಲಿ ಕೃತಕ ನಾಳ ಜೋಡಿಸಲಾಗಿತ್ತು. ಆದರೆ ಆಹಾರವನ್ನು ದ್ರವರೂಪದಲ್ಲಿ ಸೇವಿಸಬೇಕಿತ್ತು. ಬಾಯಿಯಿಂದ ನೀರು ಮತ್ತು ಆಹಾರವನ್ನು ಸೇವಿಸಲು ಸಾಧ್ಯವಿರಲಿಲ್ಲ.

ಈ ಬಗ್ಗೆ ನೇಹಾಳ ತಾಯಿ ಪ್ರೀತಿ ಮಾತನಾಡುತ್ತಾ, ಆಕೆಗೆ ಕೇವಲ ಹಾಲು ಕುಡಿಸುತ್ತಿದ್ದೆವು. ದಾಲ್ ಅಥವಾ ಕಿಚಡಿಯನ್ನು ದ್ರವರೂಪದಲ್ಲಿ ಕುಡಿಸುತ್ತಿದ್ದೆವು. ಶಾಲೆಗೆ ಅವಳನ್ನು ಕಳುಹಿಸುತ್ತಿರಲಿಲ್ಲ. ಬೇರೆ ಮಕ್ಕಳಿಂದ ಎಲ್ಲಿ ತೊಂದರೆಗೆ ಒಳಗಾಗುತ್ತಾಳೋ ಎಂಬ ಭಯವಿತ್ತು. ಹಲವು ಆಸ್ಪತ್ರೆಗಳನ್ನು ಸುತ್ತಿದೆವು. ಆದರೆ ಎಲ್ಲೂ ಇದಕ್ಕೆ ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ ಎಂದರು.

ಅಹಮದಾಬಾದ್‌ನ ವಿಎಸ್ ಆಸ್ಪತ್ರೆಯಲ್ಲಿ ಕಳೆದೆರಡು ತಿಂಗಳ ಹಿಂದೆ ನೇಹಾಳಿಗೆ ಚಿಕಿತ್ಸೆ ಆರಂಭಿಸಿದ್ದರು. ಮೇ 9ರಂದು 8 ವೈದ್ಯರ ತಂಡ 5 ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿತು. ನಾಶವಾಗಿದ್ದ ಅನ್ನನಾಳವನ್ನು ಪುನಃ ಸೃಷ್ಟಿಸುವಲ್ಲಿ ವೈದ್ಯರು ಯಶಸ್ವಿಯಾದರು.

ನೇಹಾಳಿಗೆ ನಡೆಸಿದ ಶಸ್ತ್ರ ಚಿಕಿತ್ಸೆಗೆ ವೈಯಕೀಯ ಪರಿಭಾಷೆಯಲ್ಲಿ 'ಗ್ಯಾಸ್ಟ್ರಿಕ್ ಪುಲ್ ಅಪ್ ವಿತ್ ಇಸೋಫಜಿಯಲ್ ರಿಕನ್ಸ್‌ಟ್ರಕ್ಷನ್' ಎನ್ನಲಾಗುತ್ತದೆ. ಈಗ ನೇಹಾ ಸಂಪೂರ್ಣ ಗುಣಮುಖಳಾಗಿದ್ದು, ಐಸ್‌ಕ್ರೀಂ, ಜ್ಯೂಸ್ ಹೀಗೆ ಏನು ಬೇಕಿದ್ದರು ಸೇವಿಸಬಹುದು ಎಂದು ಗ್ಯಾಸ್ಟ್ರೋ ಎಂಟರಲಾಜಿಕಲ್ ಸರ್ಜನ್ ಹಸ್ಮುಖ್ ವೋರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ