ಆ್ಯಪ್ನಗರ

ಸಿಡಿಲು, ಆಲಿಕಲ್ಲು ಮಳೆ: ಒಂದೇ ದಿನ 80 ಬಲಿ, 5 ರಾಜ್ಯಗಳಲ್ಲಿ ಭಾರೀ ಹಾನಿ

ಭಾನುವಾರದಿಂದೀಚೆಗೆ ಉತ್ತರ ಪ್ರದೇಶವೊಂದರಲ್ಲೇ ಆಲಿಕಲ್ಲು ಮಳೆ ಮತ್ತು ಸಿಡಿಲಿಗೆ 51 ಮಂದಿ ಬಲಿಯಾಗಿದ್ದು, ಐದು ರಾಜ್ಯಗಳಲ್ಲಿ ಒಟ್ಟು 80 ಮಂದಿ ಬಲಿಯಾಗಿದ್ದಾರೆ ಎಂದು ಗೃಹಸಚಿವಾಲಯ ತಿಳಿಸಿದೆ.

Vijaya Karnataka Web 14 May 2018, 10:27 pm
ಹೊಸದಿಲ್ಲಿ: ಭಾನುವಾರದಿಂದೀಚೆಗೆ ಉತ್ತರ ಪ್ರದೇಶವೊಂದರಲ್ಲೇ ಆಲಿಕಲ್ಲು ಮಳೆ ಮತ್ತು ಸಿಡಿಲಿಗೆ 51 ಮಂದಿ ಬಲಿಯಾಗಿದ್ದು, ಐದು ರಾಜ್ಯಗಳಲ್ಲಿ ಒಟ್ಟು 80 ಮಂದಿ ಬಲಿಯಾಗಿದ್ದಾರೆ ಎಂದು ಗೃಹಸಚಿವಾಲಯ ತಿಳಿಸಿದೆ.
Vijaya Karnataka Web Dust Storm


ಪಶ್ಚಿಮ ಬಂಗಾಳದಲ್ಲಿ 14, ಆಂಧ್ರ ಪ್ರದೇಶದಲ್ಲಿ 12, ದಿಲ್ಲಿಯಲ್ಲಿ 2 ಮತ್ತು ಉತ್ತರಾಖಂಡದದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಸಚಿವಾಲಯದ ವಕ್ತಾರ ತಿಳಿಸಿದರು.

ಸಿಡಿಲಿನ ಆಘಾತ ಹಾಗೂ ಆಲಿಕಲ್ಲು ಮಳೆಯ ಹೊಡೆತಕ್ಕೆ ಬಲಿಯಾದ 136 ಜನರ ಪೈಕಿ 123 ಮಂದಿ ಉತ್ತರಪ್ರದೇಶದವರು, 11 ಮಂದಿ ದಿಲ್ಲಿಯವರು ಮತ್ತು ಇಬ್ಬರು ಉತ್ತರಾಖಂಡವರು ಎಂದು ಸಚಿವಾಲಯ ಹೇಳಿದೆ.

ಧೂಳಿನ ಬಿರುಗಾಳಿ ಮತ್ತು ಆಲಿಕಲ್ಲು ಮಳೆಯಿಂದಾಗಿ ದಿಲ್ಲಿ ಮತ್ತು ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಅನಾಹುತಗಳು ಉಂಟಾಗಿವೆ.

ಭಾರೀ ಬಿರುಗಾಳಿಯಿಂದಾಗಿ ರಾಷ್ಟ್ರ ರಾಜಧಾನಿಯಲ್ಲಿ ನೂರಾರು ಮರಗಳು ನೆಲಕ್ಕುರುಳಿದ್ದು, ಉತ್ತರ ಭಾರತದ ಹಲವೆಡೆ ರಸ್ತೆ, ರೈಲು ಹಾಗೂ ವಿಮಾನ ಸಂಚಾರಗಳು ಅಸ್ತವ್ಯಸ್ತಗೊಂಡಿವೆ.

ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಹರ್ಯಾಣ, ಚಂಡೀಗಢ, ಮಧ್ಯಪ್ರದೇಶ, ಜಾರ್ಖಂಡ್‌, ಅಸ್ಸಾಂ, ಮೇಘಾಲಯ, ಮಹಾರಾಷ್ಟ್ರ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಹಲವೆಡೆ ಭಾನುವಾರ ಆಲಿಕಲ್ಲು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

NEW DELHI: As many as 80 people have been killed in five states due to thunderstorms and lightning strikes since yesterday, with Uttar Pradesh alone recording 51 deaths, the home ministry said on Monday.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ