ಆ್ಯಪ್ನಗರ

ಬಿಹಾರದಲ್ಲಿ ಮುಂಗಾರು ಮಳೆ ಅಬ್ಬರ, ಸಿಡಿಲಿನ ಆರ್ಭಟಕ್ಕೆ 83 ಮಂದಿ ಬಲಿ

20ಕ್ಕೂ ಹೆಚ್ಚು ಮಂದಿ ಸಿಡಿಲಿನಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಡಿಲಿನಿಂದ ಅನೇಕ ಮನೆಗಳು ಜಖಂಗೊಂಡಿವೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

Agencies 26 Jun 2020, 12:09 am

ಪಟನಾ: ಬಿಹಾರದಲ್ಲಿ ಮುಂಗಾರು ಮಳೆ ಭಾರಿ ಅನಾಹುತ ಸೃಷ್ಟಿಸಿದೆ. ಕಳೆದ ಎರಡು ದಿನಗಳಿಂದ ಸಿಡಿಲು, ಗುಡುಗಿನ ಆರ್ಭಟಕ್ಕೆ 83 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿ ನಷ್ಟ ಉಂಟಾಗಿದೆ.
Vijaya Karnataka Web Thunderstorm Bihar


ಮುಂಗಾರು ಮಳೆ ಅಬ್ಬರದಿಂದ ರಾಜ್ಯದ 23 ಜಿಲ್ಲೆಗಳಲ್ಲಿ ಅತಿ ಹೆಚ್ಚು ಅನಾಹುತ ಉಂಟಾಗಿದೆ. ಗೋಪಾಲ್‌ಗಂಜ್‌ನಲ್ಲಿ ಗರಿಷ್ಠ 13 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ. ನಾವಡ ಮತ್ತು ಮಧುಬನಿ ಜಿಲ್ಲೆಗಳಲ್ಲಿ ತಲಾ ಎಂಟು, ಸಿವಾನ್‌ ಮತ್ತು ಭಗಲ್ಪುರ ತಲಾ ಆರು, ಪೂರ್ವ ಚಂಪಾರಣ್‌, ದರ್ಭಾಂಗ್‌ ಮತ್ತು ಬಂಕಾ ತಲಾ ಐದು, ಖಗರಿಯಾ ಮತ್ತು ಔರಂಗಾಬಾದ್‌ ತಲಾ ಮೂರು, ಪಶ್ಚಿಮ ಚಂಪಾರಣ್‌, ಕಿಶನ್‌ಗಂಜ್‌, ಜಹನಾಬಾದ್‌, ಜಮುಯಿ, ಪುರ್ನಿಯಾ, ಸುಪೌಲ್‌, ಬಕ್ಸರ್‌ ಮತ್ತು ಕೈಮೂರ್‌ ತಲಾ ಇಬ್ಬರು. ಸಮಸ್ತಿಪುರ, ಶೋಹಾರ್‌, ಸರಣ್‌, ಸೀತಾಮರಿ, ಮಾಧೇಪುರದಲ್ಲಿ ತಲಾ ಒಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಧಾರಾಕಾರ ಮಳೆಗೆ ಬೆಚ್ಚಿದ ಬೆಂಗಳೂರು, ನಗರದಲ್ಲಿ ಇನ್ನೂ 3 ದಿನ ಭಾರಿ ಮಳೆ

20ಕ್ಕೂ ಹೆಚ್ಚು ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಡಿಲಿನಿಂದ ಅನೇಕ ಮನೆಗಳು ಜಖಂಗೊಂಡಿವೆ. ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೂ ಮೃತರ ಕುಟುಂಬಗಳಿಗೆ ಸಂತಾಪ ತಿಳಿಸಿದ್ದಾರೆ. ರಾಜ್ಯದ 38 ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇತ್ತ ಉತ್ತರ ಪ್ರದೇಶ, ದಿಲ್ಲಿಗಳಲ್ಲಿಯೂ ಗುರುವಾರದಿಂದ ಮಳೆ ಅಬ್ಬರಿಸಲು ಆರಂಭಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ