ಆ್ಯಪ್ನಗರ

9 ನೇ ತರಗತಿ ವಿದ್ಯಾರ್ಥಿ ಹತ್ಯೆ

ಇಲ್ಲಿಗೆ ಸಮೀಪದ ಭರಣಪುರದ ಶ್ರೀ ಭಾರ್ತಿ ಸ್ಕೂಲ್‌ನ ಶೌಚಾಲಯದಲ್ಲಿ ರಕ್ತದ ಮಡುವಿನಲ್ಲಿದ್ದ 14 ವರ್ಷದ ಬಾಲಕನ ಶವವೊಂದು ಪತ್ತೆಯಾಗಿದ್ದು, ಸಹಪಾಠಿಗಳೇ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Vijaya Karnataka 23 Jun 2018, 10:07 am
ವಡೋದರಾ: ಇಲ್ಲಿಗೆ ಸಮೀಪದ ಭರಣಪುರದ ಶ್ರೀ ಭಾರ್ತಿ ಸ್ಕೂಲ್‌ನ ಶೌಚಾಲಯದಲ್ಲಿ ರಕ್ತದ ಮಡುವಿನಲ್ಲಿದ್ದ 14 ವರ್ಷದ ಬಾಲಕನ ಶವವೊಂದು ಪತ್ತೆಯಾಗಿದ್ದು, ಸಹಪಾಠಿಗಳೇ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Vijaya Karnataka Web crime_1


''ಶಾಲೆಯ ದ್ವಿತೀಯ ಸೆಷನ್‌ ಮಧ್ಯಾಹ್ನ 12ಕ್ಕೆ ಆರಂಭಗೊಳ್ಳುತ್ತವೆ. ದ್ವಿತೀಯ ಸೆಷನ್‌ನ ಕೆಲವು ವಿದ್ಯಾರ್ಥಿಗಳು ಬೆಳಗ್ಗೆ 11.30ರ ಸುಮಾರಿಗೆ ಮೊದಲ ಮಹಡಿಯಲ್ಲಿರುವ ವಾಷ್‌ರೂಮ್‌ಗೆ ಹೋದಾಗ, ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿತು'' ಎಂದು ಶಾಲಾ ಪ್ರಾಂಶುಪಾಲ ತಿಳಿಸಿದ್ದಾರೆ. ನತದೃಷ್ಟ ಬಾಲಕ ಕೆಲದಿನಗಳ ಹಿಂದಷ್ಟೇ ಈ ಶಾಲೆಗೆ ಸೇರಿಕೊಂಡಿದ್ದ.

ಅದೇ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಬಾಲಕನನ್ನು ಕೊಲೆ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ''ಶಾಲೆಯ ಪಕ್ಕದಲ್ಲಿರುವ ದೇವಸ್ಥಾನದ ತಾರಸಿ ಮೇಲೆ ಸ್ಕೂಲ್‌ ಬ್ಯಾಗೊಂದು ಪತ್ತೆಯಾಗಿದೆ. ಅದು ಇಬ್ಬರು ಸಂಶಯಿತ ಕೊಲೆಗಾರರ ಪೈಕಿ ಒಬ್ಬನದ್ದಾಗಿದೆ. ಅದರಲ್ಲಿ ಎರಡು ಹರಿತವಾದ ಆಯುಧಗಳಿದ್ದವು. ಅದೊಂದು ಪೂರ್ವ ಯೋಜಿತ ಕೊಲೆಯಂತೆ ಕಂಡುಬರುತ್ತಿದೆ,'' ಎಂದು ಪೊಲೀಸ್‌ ಅಧಿಕಾರಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ