ಆ್ಯಪ್ನಗರ

ಬಿಎಂಡಬ್ಲ್ಯು ಕಾರಿನೊಳಗೆ ಬೆಚ್ಚಗೆ ಮಲಗಿದ್ದ ನಾಗರಾಜ

ಬಿಎಂಡಬ್ಲ್ಯು ಕಾರಿನೊಳಗಿದ್ದ ನಾಗರಹಾವನ್ನು ಕಂಡು ತಿರುಪ್ಪೂರಿನ ಉದ್ಯಮಿಗಳಿಬ್ಬರು ಭಯಗೊಂಡಿದ್ದಾರೆ.

Samayam Tamil 12 Nov 2018, 3:49 pm
[This story originally published in tamil samayam nov 12, 2018]
Vijaya Karnataka Web bmw


ಮಧುರೈ: ತಿರುಪ್ಪೂರಿನ ಇಬ್ಬರು ಉದ್ಯಮಿಗಳು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಬಚಾವಾಗಿದ್ದಾರೆ.

ಇವರಿಬ್ಬರು ಬಚಾವಾಗಿದ್ದು ಕಾರು ಅಪಘಾತದಿಂದಲ್ಲ. ಬದಲಾಗಿ ಬಿಎಂಡಬ್ಲ್ಯು ಕಾರಿನಲ್ಲಿದ್ದ 6 ಅಡಿ ಉದ್ದದ ನಾಗರಹಾವಿನಿಂದ!

ತಿರುಪ್ಪೂರಿನಿಂದ ಮಧುರೈಗೆ ತೆರಳುತ್ತಿದ್ದ ವೇಳೆ ನಡು ರಸ್ತೆಯಲ್ಲಿದ್ದ ನಾಗರಹಾವಿನ ಮೇಲೆ ಕಾರು ಹರಿದಿದೆ. ಈ ವೇಳೆ ಹಾವು ಸತ್ತಿರಬಹುದು ಎಂದು ಅವರಿಬ್ಬರೂ ಊಹಿಸಿದ್ದಾರೆ. ಆದರೆ ಕೊಂಚ ದೂರ ಹೋಗುವಾಗ ಕಾರಿನೊಳಗೆ ಹಾವು ಕಾಣಿಸಿಕೊಂಡಿದ್ದು, ಇಬ್ಬರನ್ನೂ ಭಯಗೊಳಿಸಿದೆ. ಕೂಡಲೇ ಕಾರು ನಿಲ್ಲಿಸಿ, ಅಗ್ನಿಶಾಮಕ ಹಾಗೂ ತುರ್ತು ಸೇವೆಗೆ ಕರೆ ಮಾಡಿದ್ದಾರೆ. ಆದರೆ ಕಾರಿನಲ್ಲಿ ಎಷ್ಟೇ ಹುಡುಕಿದರೂ ಹಾವು ಮಾತ್ರ ಪತ್ತೆಯಾಗಿಲ್ಲ.

ತಮ್ಮ ಪ್ರಯಾಣ ಮುಂದುವರೆಸಿದ ಉದ್ಯಮಿಗಳಿಗೆ ಮತ್ತೆ ಹಾವು ಬುಸುಗುಟ್ಟುವುದು ಕೇಳಿಸಿದೆ. ಅಷ್ಟೇ ಅಲ್ಲ ಕಾರಿನೊಳಗೆ ಮತ್ತೆ ಹಾವು ಕಾಣಿಸಿಕೊಂಡಿದೆ.
ಈ ವೇಳೆ ಕೊಯಮತ್ತೂರಿನ ಬಿಎಂಡಬ್ಲ್ಯು ಸರ್ವಿಸ್‌ ಸೆಂಟರ್‌ಗೆ ಕಾರನ್ನು ಒಯ್ಯಲಾಗಿದೆ. ಹಾವು ಹಿಡಿಯುವವರನ್ನು ಕರೆಸಿ, ಎಂಜಿನ್‌ನೊಳಗಿನ ಆಯಕಟ್ಟಿನ ಜಾಗದಲ್ಲಿ ಅವಿತಿದ್ದ ಹಾವನ್ನು ಹಿಡಿಯಲಾಗಿದೆ. ಆ ಬಳಿಕ ಉದ್ಯಮಿಗಳು ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ