ಆ್ಯಪ್ನಗರ

ಗಲ್ವಾನ್‌ ಕಣಿವೆಯಲ್ಲಿ ಚೀನಿ ಸೈನಿಕರ ಜೊತೆ ಕಾದಾಡಿ ವೀರ ಮರಣವನಪ್ಪಿದ 20 ಯೋಧರಿಗೆ ಸ್ಮಾರಕದ ಮೂಲಕ ನಮನ!

ದೇಶದ ಮಣ್ಣಿಗಾಗಿ ಚೀನಿ ಸೈನಿಕರೊಂದಿಗೆ ದಿಟ್ಟತನದಲ್ಲಿ ಹೋರಾಡಿ ವೀರ ಮರಣವನ್ನಪ್ಪಿದ ವೀರ ಯೋಧರಿಗೆ ಭಾರತ ಸರಕಾರ ಸ್ಮಾರಕ ನಿರ್ಮಿಸುವ ಮೂಲಕ ಸಾವಿರ ನಮನ ಸಲ್ಲಿಸಿದೆ. ಲಡಾಕ್‌ನಲ್ಲಿ ಭವ್ಯ ಸ್ಮಾರಕ ನಿರ್ಮಾಣವಾಗಿದ್ದು ಇದರಲ್ಲಿ ಎಲ್ಲಾ 20 ಹುತಾತ್ಮ ಯೋಧರ ಹೆಸರು ಹಾಗೂ ಅವರ ಮಾಹಿತಿಯನ್ನು ನೀಡಲಾಗಿದೆ.

ANI 3 Oct 2020, 12:28 pm
ಹೊಸದಿಲ್ಲಿ: ಗಲ್ವಾನ್‌ ಕಣಿವೆಯಲ್ಲಿ ಚೀನಿ ಸೈನಿಕರ ಜೊತೆ ಮುಖಾಮುಖಿಯಾಗಿ ಕಾದಾಡಿ ವೀರ ಮರಣವನಪ್ಪಿದ 19 ಭಾರತೀಯ ಯೋಧರಿಗೆ ಭಾರತ ಸರಕಾರ ಸ್ಮಾರಕ ನಿರ್ಮಾಣದ ಮೂಲಕ ಕೋಟಿ ಕೋಟಿ ನಮನ ಸಲ್ಲಿಸಿದೆ. ಲಡಾಖ್‌ನ ಆಯಕಟ್ಟಿನ ರಸ್ತೆಯಾಗಿರುವ ಡರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿ ಬಳಿ ಇರುವ ಕೆಎಂ -120 ಪೋಸ್ಟ್ ಬಳಿ ಯೋಧರ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಾಗಿದೆ.
Vijaya Karnataka Web EjYbwNvVgAAcdMN


ಸ್ಮಾರಕದಲ್ಲಿ 20 ಸೈನಿಕರ ಹೆಸರುಗಳು ಮತ್ತು ಅವರು ಜೂನ್ 15ರಂದು ನಡೆಸಿದ ಕಾರ್ಯಾಚರಣೆಯ ಮಾಹಿತಿ ಇದೆ. ಅತ್ಯಂತ ಸುಂದರವಾದ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ. ಲಡಾಕ್‌ನಲ್ಲಿರುವ ಗಲ್ವಾನ್‌ ಕಣಿವೆಯಲ್ಲಿ ಚೀನಾ ಭಾರತದ ಸೇನೆಯೊಂದಿಗೆ ಜೂನ್ 15ರಂದು ಘರ್ಷಣೆಗೆ ನಿಂತಿತ್ತು.


ತಮ್ಮ ನೆಲವನ್ನು ಕಾಪಾಡುವ ನಿಟ್ಟಿನಲ್ಲಿ ಈ ವೇಳೆ ಆಯಕಟ್ಟಿನ ಪ್ರದೇಶದಲ್ಲಿ ನಿಯೋಜನೆಯಾಗಿದ್ದ ವೀರ ಯೋಧರು ಪ್ರಾಣ ಕೊಟ್ಟು ನೆಲವನ್ನು ಉಳಿಸಿದ್ದಾರೆ. ಕೇವಲ 20 ಮಂದಿ ವೀರ ಯೋಧರು ಸುಮಾರು 90ಕ್ಕೂ ಚೀನಿ ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಭಾರತದ ಯೋಧರ ಏಟಿಗೆ 40 ಕ್ಕೂ ಹೆಚ್ಚು ಚೀನಿ ಸೈನಿಕರು ಮೃತರಾಗಿದ್ದರು.

ಐತಿಹಾಸಿಕ ಕ್ಷಣ: ಪ್ರಪಂಚದ ಅತೀ ಉದ್ದದ ಅಟಲ್‌ ಸುರಂಗ ಮಾರ್ಗ ಉದ್ಘಾಟಿಸಿದ ಪ್ರಧಾನಿ ಮೋದಿ

ಈ ಘಟನೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಸದ್ಯ ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ ಮುಂದುವರಿದಿದೆ. ಇತ್ತೀಚೆಗೆ ಗುಂಡು ಸದ್ದು ಕೂಡ ಕೇಳಿಬಂದಿತ್ತು. ಇನ್ನು ಈ ಕಾರ್ಯಾಚರಣೆಯನ್ನು ಆಪರೇಶನ್‌ ಸ್ನೋ ಲಿಯೋಪಾರ್ಡ್‌ ಎಂದು ಕರೆಯಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ