ಆ್ಯಪ್ನಗರ

ಟಿಟಿಡಿಗೆ ಸೇರಿದ 1,381 ಕೇಜಿ ಚಿನ್ನ ಚುನಾವಣಾಧಿಕಾರಿಗಳ ವಶಕ್ಕೆ

ಪೆಟ್ಟಿಗೆಗಳಲ್ಲಿ ತುಂಬಿ ಸಾಗಿಸಲಾಗುತ್ತಿದ್ದ ಚಿನ್ನದ ಗಟ್ಟಿಗಳೆಲ್ಲವೂ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ಗೆ ಸೇರಿದವು ಎಂದು ವಾಹನದ ಚಾಲಕ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Vijaya Karnataka 19 Apr 2019, 5:00 am
ಚೆನ್ನೈ: ತಮಿಳುನಾಡಿನ ವಿನಯಾಗರ ದೇವಸ್ಥಾನ ಸಮೀಪದ ಪುದುಚತ್ರಂ ಗ್ರಾಮದ ಬಳಿ ಚುನಾವಣಾ ಸಂಚಾರಿ ತಂಡ ಬುಧವಾರ ವಾನ್‌ವೊಂದರಿಂದ 1,381 ಕೆ.ಜಿ ಚಿನ್ನ ವಶಪಡಿಸಿಕೊಂಡಿದೆ.
Vijaya Karnataka Web a total of 1381 kg gold belonged to ttd seized
ಟಿಟಿಡಿಗೆ ಸೇರಿದ 1,381 ಕೇಜಿ ಚಿನ್ನ ಚುನಾವಣಾಧಿಕಾರಿಗಳ ವಶಕ್ಕೆ


ಪೆಟ್ಟಿಗೆಗಳಲ್ಲಿ ತುಂಬಿ ಸಾಗಿಸಲಾಗುತ್ತಿದ್ದ ಚಿನ್ನದ ಗಟ್ಟಿಗಳೆಲ್ಲವೂ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ಗೆ ಸೇರಿದವು ಎಂದು ವಾಹನದ ಚಾಲಕ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಸಾಗಣೆಯಾಗುತ್ತಿದ್ದ ಆ ಚಿನ್ನವು ಟಿಟಿಡಿಗೆ ಹಸ್ತಾಂತರಗೊಳ್ಳಬೇಕಿತ್ತು ಎಂದು ಟಿಟಿಡಿ ಕಾರ್ಯನಿರ್ವಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ಸ್ಪಷ್ಟನೆ ನೀಡಿದ್ದಾರೆ. ಈ ಚಿನ್ನವನ್ನು ಮೂರು ವರ್ಷಗಳ ಅವಧಿಗೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಅಡಮಾನ ಇರಿಸಲಾಗಿತ್ತು. ಅವಧಿ ಮುಗಿದಿದ್ದರಿಂದ ಅದನ್ನು ವಾನ್‌ನಲ್ಲಿ ಕಳಿಸಿಕೊಡಲಾಗಿತ್ತು ಎಂದು ಬ್ಯಾಂಕ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ