ಆ್ಯಪ್ನಗರ

ಓಡಿ ಹೋಗಿ ಮದುವೆಯಾಗಿದ್ದಕ್ಕೆ ಮೂತ್ರ ಕುಡಿಸಿದರು!

ಓಡಿ ಹೋಗಿ ಮದುವೆಯಾಗಿದ್ದಕ್ಕೆ ಯುವ ದಂಪತಿಗಳಿಗೆ ಮೂತ್ರ ಕುಡಿಸಿದ ಅಮಾನುಷ ಘಟನೆ ಇಂದೋರ್‌ನಲ್ಲಿ ನಡೆದಿದೆ.

TIMESOFINDIA.COM 2 Aug 2018, 2:55 pm
ಇಂದೋರ್‌: ಓಡಿ ಹೋಗಿ ಮದುವೆಯಾಗಿದ್ದಕ್ಕೆ ಯುವ ದಂಪತಿಗಳಿಗೆ ಮೂತ್ರ ಕುಡಿಸಿದ ಅಮಾನುಷ ಘಟನೆ ಇಂದೋರ್‌ನಲ್ಲಿ ನಡೆದಿದೆ.
Vijaya Karnataka Web Couple


ಈ ಸಂಬಂಧ ಯುವತಿಯ ತಂದೆ ಹಾಗೂ ಸೋದರ ಸಂಬಂಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಹರದಾಸ್‌ಪುರ ಗ್ರಾಮದ ಅಂಬುವಾ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ದಂಪತಿಗಳು ದೂರು ದಾಖಲಿಸಿದ್ದಾರೆ.

ಪೋಷಕರ ಇಚ್ಚೆಗೆ ವಿರುದ್ಧವಾಗಿ ನಡೆದುಕೊಂಡಿದ್ದು ಅಲ್ಲದೆ, ಓಡಿ ಹೋಗಿ ಮದುವೆ ಮಾಡಿಕೊಂಡ ಕಾರಣ, ಯುವ ದಂಪತಿಗಳನ್ನು ಕಂಬಕ್ಕೆ ಕಟ್ಟಿಹಾಕಿ, ಥಳಿಸಿ, ಮೂತ್ರ ಕುಡಿಸಿದ್ದಾರೆ. ಇದಲ್ಲದೆ ಯುವತಿಯ ಕೂದಲನ್ನೂ ಕತ್ತರಿಸಿ ಪೈಶಾಚಿಕ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

2018 ರ ಮೇ ತಿಂಗಳಲ್ಲಿ 23 ವರ್ಷದ ಯುವಕ ಹಾಗೂ 21 ವರ್ಷದ ಯುವತಿ ಗುಜರಾತ್‌ಗೆ ಓಡಿ ಹೋಗಿ ಮದುವೆಯಾಗಿದ್ದರು. ಜೂನ್‌ ತಿಂಗಳಲ್ಲಿ ಅಲಿರಾಜಪುರದಲ್ಲಿನ ಸಂಬಂಧಿಕರ ಮನೆಗೆ ಬಂದ ದಂಪತಿಗಳ ಮೇಲೆ ಹುಡುಗಿಯ ಮನೆಯವರು ದಾಳಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಿಲಾಲ ಸಮುದಾಯದಲ್ಲಿ ಯುವತಿಯರು ಓಡಿ ಹೋಗಿ ಮದುವೆಯಾಗುವುದು ಸಾಮಾನ್ಯ. ಆ ಬಳಿಕ ಎರಡೂ ಮನೆಯವರು ಚರ್ಚಿಸಿ, ಹುಡುಗಿಯ ಕುಟುಂಬಕ್ಕೆ ಹಣ ನೀಡುವ ಪದ್ದತಿ ಇದೆ. ಆದರೆ ಈ ಪ್ರಕರಣದಲ್ಲಿ ಹುಡುಗನ ಮನೆಯವರೊಂದಿಗಿನ ಮಾತುಕತೆಯಲ್ಲಿ ಒಮ್ಮತ ಮೂಡಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಯುವಕನ ಕಡೆಯಿಂದ 70 ಸಾವಿರ ನಗದು ಹಾಗೂ 2 ಮೇಕೆಗಳನ್ನು ನೀಡಲಾಗಿದೆ. ಆದರೆ ಹುಡುಗಿ ಮನೆಯವರು ಇದನ್ನು ತಿರಸ್ಕರಿಸಿದ್ದಾರೆ ಎಂದು ಯುವಕನ ಕುಟುಂಬ ದೂರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ